ಆ್ಯಪ್ನಗರ

ಬಯಲಾಟ ಕಲಾವಿದನಿಗೆ ಅಕಾಡೆಮಿ ಪ್ರಶಸ್ತಿ

ಮಲೆನಾಡು, ಅರೆಮಲೆನಾಡು ಭಾಗದಲ್ಲಿ ನಾಲ್ಕು ದಶಕಗಳಿಂದ ಬಯಲಾಟ ಕಲೆ ಪ್ರದರ್ಶಿಸಿಕೊಂಡು ಬಂದಿರುವ ಅಮೃತಾಪುರ ಹೋಬಳಿ, ಹಾದಿಕೆರೆ ಗ್ರಾಮದ ರಮೇಶ್‌ ಅವರಿಗೆ ಈ ಬಾರಿಯ ರಾಜ್ಯ ಬಯಲಾಟ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

Vijaya Karnataka 27 Dec 2018, 5:00 am
ತರೀಕೆರೆ ಗ್ರಾಮಾಂತರ : ಮಲೆನಾಡು, ಅರೆಮಲೆನಾಡು ಭಾಗದಲ್ಲಿ ನಾಲ್ಕು ದಶಕಗಳಿಂದ ಬಯಲಾಟ ಕಲೆ ಪ್ರದರ್ಶಿಸಿಕೊಂಡು ಬಂದಿರುವ ಅಮೃತಾಪುರ ಹೋಬಳಿ, ಹಾದಿಕೆರೆ ಗ್ರಾಮದ ರಮೇಶ್‌ ಅವರಿಗೆ ಈ ಬಾರಿಯ ರಾಜ್ಯ ಬಯಲಾಟ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
Vijaya Karnataka Web CKM-26sid3 ramesh


ರಮೇಶ್‌ ಅವರ ತಂದೆ ಬಸಪ್ಪ ಹಾರ್ಮೋನಿಯಂ ವಾದಕರಾಗಿದ್ದು, ಶಹನಾಯಿ, ಪ್ಲಾರೆನೆಟ್‌ ನುಡಿಸುವಲ್ಲಿಯೂ ಪಾಂಡಿತ್ಯ ಹೊಂದಿದ್ದರು. ಗುಬ್ಬಿ, ಚಿಂದೋಡಿ ವೀರಪ್ಪ ನಾಟಕ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ರಮೇಶ್‌ ಅವರು 8 ವರ್ಷದವರಿದ್ದಾಗಲೇ ತಂದೆಯಿಂದ ಶಾಸ್ತ್ರೀಯ ಸಂಗೀತ ಕಲಿತರು. 50ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿ ಗ್ರಾಮೀಣ ಭಾಗದಲ್ಲಿ ಕಲಾವಿದರನ್ನು ಗುರುತಿಸಿ ಅವರಿಂದ ಪ್ರದರ್ಶನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

''ವಂಶಪಾರಂಪರ‍್ಯವಾಗಿ ಜೀವನೋಪಾಯಕ್ಕಾಗಿ ನಡೆಸಿಕೊಂಡು ಬಂದ ಕಲೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ಮದುವೆ ಇನ್ನಿತರೆ ಶುಭ ಕಾರ್ಯಗಳಲ್ಲಿ, ದೇವಸ್ಥಾನದ ಕಾರ್ಯಕ್ರಮಗಳಲ್ಲಿ ವೀರಗಾಸೆ, ಶಹನಾಯಿ, ಓಲಗ ನುಡಿಸುವ ಕಾಯಕ ಮಾಡಿಕೊಂಡು ಬಂದಿದ್ದೇನೆ. ರೂಢಿಸಿಕೊಂಡು ಬಂದಿರುವ ಕಲೆ ನಮ್ಮ ಕುಟುಂಬವನ್ನು ಸಲಹಿದೆ,'' ಎಂದು ರಮೇಶ್‌ ಸ್ಮರಿಸುತ್ತಾರೆ.

ರಮೇಶ್‌ ಅವರು ತಮ್ಮ ಕಲೆಯನ್ನು ತಾಲೂಕು ಮತ್ತು ಜಿಲ್ಲಾ ಮಟ್ಟದ ಯುವಜನ ಮೇಳ, ನೆಹರು ಯುವ ಕೇಂದ್ರದ ಕಾರ್ಯಕ್ರಮಗಳು ಸೇರಿದಂತೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲೂ ಪ್ರದರ್ಶಿಸಿದ್ದು, ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ದಾನಶೂರಕರ್ಣ, ಕುರುಕ್ಷೇತ್ರ, ರಾಮಾಯಣ, ಕೃಷ್ಣಗಾರುಡಿ, ಕೃಷ್ಣಲೀಲೆ ಸೇರಿದಂತೆ ಹಲವು ನಾಟಕಗಳನ್ನು ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ನಿರ್ದೇಶಿಸಿ ಪ್ರದರ್ಶನ ನೀಡಿದ್ದಾರೆ.

''ಬಯಲಾಟಕ್ಕೆ ಅಕಾಡೆಮಿ ಪ್ರಶಸ್ತಿ ಲಭಿಸಿರುವ ವಿಚಾರ ತಿಳಿದು ಸಂತಸವಾಗಿದೆ. ಒಂದು ವರ್ಷದ ಹಿಂದೆ ದಾಖಲೆಗಳೊಂದಿಗೆ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದೆ. ಸುಮಾರು 45 ವರ್ಷದಿಂದ ಕಲೆಯನ್ನೇ ವೃತ್ತಿ ಮಾಡಿಕೊಂಡು ಬಂದಿದ್ದಕ್ಕೆ ಗೌರವ ಸಿಕ್ಕಿದೆ,'' ಎನ್ನುತ್ತಾರೆ ರಮೇಶ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ