ಆ್ಯಪ್ನಗರ

ಐದು ಸಾವಿರ ಲಂಚ ಪಡೆದ ಅಧಿಕಾರಿ ಎಸಿಬಿ ಬಲೆಗೆ

ಚಿಕ್ಕಮಗಳೂರಿನ ಕಡೂರಿನಲ್ಲಿ ಎಸಿಬಿ ದಾಳಿ ನಡೆದಿದ್ದು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ತಾಲ್ಲೂಕು ಅಭಿವೃದ್ಧಿ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

Vijaya Karnataka 22 Nov 2017, 12:55 pm
ಚಿಕ್ಕಮಗಳೂರು: ಜಿಲ್ಲೆಯ ಕಡೂರಿನಲ್ಲಿ ಎಸಿಬಿ ದಾಳಿ ನಡೆದಿದ್ದು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ತಾಲ್ಲೂಕು ಅಭಿವೃದ್ಧಿ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
Vijaya Karnataka Web acb raid at chikamagaluru
ಐದು ಸಾವಿರ ಲಂಚ ಪಡೆದ ಅಧಿಕಾರಿ ಎಸಿಬಿ ಬಲೆಗೆ


ಉದ್ಯಮ ಶೀಲತಾ ತಪಾಸಣಾ ವರದಿ ಪತ್ರ ನೀಡಲು ಹಣ ಬೇಡಿಕೆ ಇಟ್ಟಿದ್ದ ಅಧಿಕಾರಿ ಬೋರಯ್ಯನ ವಿರುದ್ಧ ದೂರು ದಾಖಲಾಗಿತ್ತು. ತನಿಖೆ ವೇಳೆ ಬೋರಯ್ಯ ಪತ್ರ ನೀಡಲು 10 ಸಾವಿರ ಹಣದ ಬೇಡಿಕೆ ಇಟ್ಟಿದ್ದ ಎಂದು ತಿಳಿದು ಬಂದಿದೆ.

ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ತರೀಕೆರೆ ಹಾಗೂ ಕಡೂರು ತಾಲ್ಲೂಕು ಅಭಿವೃದ್ಧಿ ಅಧಿಕಾರಿಯಾಗಿರುವ ಬೋರಯ್ಯ ಪರಿಶಿಷ್ಟ ಜಾತಿಗೆ ನೀಡುವ ಉದ್ಯಮ ಶೀಲತಾ ತಪಾಸಣಾ ವರದಿ ಪತ್ರವನ್ನು ಹೇಮಾವತಿ ಆನಂದ ನಾಯ್ಕ ದಂಪತಿಗೆ ನೀಡಬೇಕಿತ್ತು, ಇದಕ್ಕೆ ಲಂಚ ಕೇಳಿದ್ದ ಬೋರಯ್ಯ ಮುಂಗಡವಾಗಿ ಐದು ಸಾವಿರ ಪಡೆದಿದ್ದ. ಉಳಿದ ಮೊತ್ತಕ್ಕಾಗಿ ಕಡೂರು ಬಸ್ಟ್ಯಾಂಡ್ ಬಳಿ ಹೋಟೆಲ್‌ಗೆ ಬರುವಂತೆ ಹೇಳಿದ್ದ.

ಹಣ ಪಡೆಯುವ ವೇಳೆಯಲ್ಲಿ ಎಸಿಬಿ ಎಸಿಬಿ ಅಧಿಕಾರಿ ಬ್ರಿಜೇಶ್ ಮ್ಯಾತ್ಯೂ ನೇತೃತ್ವದಲ್ಲಿ ದಾಳಿ ನಡೆದಿದ್ದು, ಐದು ಸಾವಿರ ಹಣದೊಂದಿಗೆ ಈತನನ್ನು ಬಂಧಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ