ಆ್ಯಪ್ನಗರ

ಧನ್ಯಶ್ರೀ ಆತ್ಮಹತ್ಯೆ: ಪ್ರಮುಖ ಆರೋಪಿ ಸಂತೋಷ್ ಸೆರೆ

ಮೂಡಿಗೆರೆ ಡಿಎಸ್ ಬಿಜಿ ಕಾಲೇಜು ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಪ್ರಕರಣ ಪ್ರಮುಖ ಆರೋಪಿ ಸಂತೋಷ್ ಬಿನ್‌ ರಾಜೇಶ್ ( (20)ನನ್ನು ಪೊಲೀಸರು ಬಂಧಿಸಿದ್ದಾರೆ.

Vijaya Karnataka Web 11 Jan 2018, 1:38 pm
ಚಿಕ್ಕಮಗಳೂರು: ಮೂಡಿಗೆರೆ ಡಿಎಸ್ ಬಿಜಿ ಕಾಲೇಜು ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಪ್ರಕರಣ ಪ್ರಮುಖ ಆರೋಪಿ ಸಂತೋಷ್ ಬಿನ್‌ ರಾಜೇಶ್ (20)ನನ್ನು ಪೊಲೀಸರು ಬಂಧಿಸಿದ್ದಾರೆ.
Vijaya Karnataka Web accused arrest on student suicide case
ಧನ್ಯಶ್ರೀ ಆತ್ಮಹತ್ಯೆ: ಪ್ರಮುಖ ಆರೋಪಿ ಸಂತೋಷ್ ಸೆರೆ


ಬಂಟ್ವಾಳದ ಬಡಗ ಕಜೆಕಾರ್‌ನಲ್ಲಿ ಲಿಫ್ಟ್ ಮೆಕ್ಯಾನಿಕ್ ಆಗಿ ರಾಕೇಶ್ ಕೆಲಸ ಮಾಡುತ್ತಿದ್ದ. ಮೂಡಿಗೆರೆ ಪಿಎಸ್‌ಐ ರಫೀಕ್ ಮತ್ತು ಸಿಬ್ಬಂದಿ ಈತನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಹಿಂದೂ ಸಂಘಟನೆಗಳ ಇಂತಹ ಬೆದರಿಕೆಯಿಂದಾಗಿ ಧನ್ಯಶ್ರೀ ನೊಂದು ಆತ್ಮಹತ್ಯೆಗೆ ಶರಣಾಗಿರುವುದನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ದೃಢಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಿಗೆರೆ ಬಿಜೆಪಿ ನಗರ ಯುವಮೋರ್ಚಾ ಅಧ್ಯಕ್ಷ ಅನಿಲ್‌ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆರೋಪಿಗಳು ಯುವಕ ಮತ್ತು ಯುವತಿಯ ಫೋಟೊ, ವಾಟ್ಸಾಪ್‌ನಲ್ಲಿ ಮಾಡಿದ್ದ ಮೆಸೇಜ್‌ಗಳ ಸ್ಕ್ರೀನ್‌ಶಾಟ್‌ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಲ್ಲದೆ ಆಕೆಯ ಮನೆಗೆ ಹೋಗಿ ಯುವತಿ ಧನ್ಯಶ್ರೀ ಮತ್ತು ಆಕೆಯ ತಾಯಿಗೆ ಧಮ್ಕಿ ಹಾಕಿದ್ದರು. ಇದರಿಂದ ಮನನೊಂದ ಧನ್ಯಶ್ರೀ ಇದೆಲ್ಲವನ್ನು ಡೆತ್‌ನೋಟ್‌ ಬರೆದಿಟ್ಟು ಶನಿವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂಬುದು ತನಿಖೆಯಲ್ಲಿ ತಿಳಿದು ಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ