ಆ್ಯಪ್ನಗರ

ಆಮಿಷ ಒಡ್ಡಿದರೆ ಕ್ರಮ

ಹಣ, ವಸ್ತು ಮತ್ತಿತರೆ ಯಾವುದೇ ಆಮಿಷ ನೀಡಿ ಮತದಾರರನ್ನು ಸೆಳೆಯುವ ಪ್ರಯತ್ನ ಕಂಡುಬಂದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಚುನಾವಣಾ ವೆಚ್ಚವನ್ನು ಕ್ರಮಬದ್ದವಾಗಿ ನಿರ್ವಹಿಸಬೇಕು ಎಂದು ಚುನಾವಣಾ ವೆಚ್ಚ ವೀಕ್ಷ ಕ ಮಲ್ಲಿಕಾರ್ಜುನ ಉತ್ತೂರೆ ಸೂಚಿಸಿದರು.

Vijaya Karnataka 5 Apr 2019, 5:00 am
ಚಿಕ್ಕಮಗಳೂರು : ಹಣ, ವಸ್ತು ಮತ್ತಿತರೆ ಯಾವುದೇ ಆಮಿಷ ನೀಡಿ ಮತದಾರರನ್ನು ಸೆಳೆಯುವ ಪ್ರಯತ್ನ ಕಂಡುಬಂದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಚುನಾವಣಾ ವೆಚ್ಚವನ್ನು ಕ್ರಮಬದ್ದವಾಗಿ ನಿರ್ವಹಿಸಬೇಕು ಎಂದು ಚುನಾವಣಾ ವೆಚ್ಚ ವೀಕ್ಷ ಕ ಮಲ್ಲಿಕಾರ್ಜುನ ಉತ್ತೂರೆ ಸೂಚಿಸಿದರು.
Vijaya Karnataka Web CKM-4RUDRAP6


ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಎಫ್‌ಎಸ್‌ಟಿಎಸ್‌ಎಸ್‌ಟಿ ಹಾಗೂ ವಿವಿಧ ತಂಡಗಳ ನೋಡೆಲ್‌ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಪ್ರತಿ ತನಿಖಾಠಾಣೆಯಲ್ಲಿ ಸರಕಾರಿ ವಾಹನ ಸೇರಿ ಎಲ್ಲ ವಾಹನಗಳನ್ನು ತಪಾಸಣೆ ಮಾಡಬೇಕು. ಪರಿಶೀಲನೆ ಸಂದರ್ಭ ಬ್ಯಾಂಕ್‌ ಖಾತೆ , ಚುನಾವಣಾ ಪ್ರಚಾರಕ್ಕೆ ಕೈಗೊಂಡಿರುವ ವೆಚ್ಚದ ಮಾಹಿತಿ ನೀಡಬೇಕು. ನಗದು ವ್ಯವಹಾರ 10 ಸಾವಿರದೊಳಗೆ ಮಾತ್ರ ಮಾಡಬಹುದು. ಮೀರಿ ವ್ಯವಹಾರ ಮಾಡಬೇಕಾದರೆ ಚೆಕ್‌, ಆರ್‌ಟಿಜಿಎಸ್‌ ನೆಪ್ಟ್‌ ಅಥÜವಾ ಡಿಡಿ ಮೂಲಕ ಮಾಡಬೇಕು. ಅಭ್ಯರ್ಥಿ 10 ಸಾವಿರಕ್ಕಿಂತ ಹೆಚ್ಚು ದೇಣಿಗೆ ಪಡೆಯುವಾಗಲೂ ಅಭ್ಯರ್ಥಿಯು ಚುನಾವಣಾ ವೆಚ್ಚಕ್ಕೆ ನಿಗದಿಪಡಿಸಿಕೊಂಡಿರುವ ಬ್ಯಾಂಕ್‌ ಖಾತೆಗೆ ಚೆಕ್‌, ಆರ್‌ಟಿಜಿಎಸ್‌ ನೆಪ್ಟ್‌ ಅಥವಾ ಡಿಡಿ ಮೂಲಕ ಪಡೆಯಬೇಕು ಎಂದರು.

ಅಭ್ಯರ್ಥಿಯ ಪರವಾಗಿ ಯಾರಾದರೂ ಚುನಾವಣಾ ಪ್ರಚಾರವನ್ನು ಪ್ರಾಯೋಜಿಸಿದ್ದಲ್ಲಿ ಚುನಾವಣಾ ಪ್ರಚಾರಕ್ಕೆ ಆಗುವ ವೆಚ್ಚವನ್ನು ಸಹ ಅಭ್ಯರ್ಥಿಯ ಚುನಾವಣಾ ವೆಚ್ಚದ ಬ್ಯಾಂಕ್‌ ಖಾತೆಯ ಮೂಲಕವೇ ನಡೆಸಬೇಕು. ಪ್ರತಿಯೊಬ್ಬ ಅಭ್ಯರ್ಥಿ 70 ಲಕ್ಷ ದ ವರೆಗೂ ವೆಚ್ಚ ಮಾಡಬಹುದು. ಚುನಾವಣೆ ಮುಗಿಯುವವರೆಗೂ ಹಣ ವರ್ಗಾವಣೆ, ಹಣ ಪಡೆಯುವುದು ಹೀಗೆ ಪ್ರತಿಯೊಂದು ವ್ಯವಹಾರವನ್ನು ಮಾಹಿತಿ ನೀಡಿರುವ ಬ್ಯಾಂಕ್‌ ಖಾತೆಯಲ್ಲಿ ನಡೆಸುವಂತಿಲ್ಲ ಎಂದರು.

ಧಾರ್ಮಿಕ ಸ್ಥಳಗಳಲ್ಲಿ ಪ್ರಚಾರಕ್ಕೆ ಅವಕಾಶವಿಲ್ಲ. ಶಾಲಾ ಕಾಲೇಜು ಮೈದಾನದಲ್ಲಿ ಸಂಬಂಧಿಸಿದ ಶಾಲಾ ಕಾಲೇಜಿನ ಮುಖ್ಯಸ್ಥರು ಹಾಗೂ ಚುನಾವಣಾಧಿಕಾರಿಗಳ ಕಚೇರಿಯಿಂದ ಅನುಮತಿ ಪಡೆದರೆ ಪ್ರಚಾರ ಕೈಗೊಳ್ಳಬಹುದು. ಜಿಲ್ಲೆಯಲ್ಲಿ ನಡೆಯುವ ರಾಜಕೀಯ ಪಕ್ಷ ಗಳ ಸಭೆ,ಸಮಾರಂಭಗಳನ್ನು ವೀಡಿಯೋ ರೆಕಾರ್ಡ್‌ ಮಾಡಬೇಕು ಎಂದು ಸೂಚಿಸಿದರು. ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಅವರು ಜಿಲ್ಲೆಯಲ್ಲಿ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕರಿ ಡಾ.ಕುಮಾರ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶೃತಿ, ಚಿಕ್ಕಮಗಳೂರು ವಿಭಾಗದ ಉಪವಿಭಾಗಾಧಿಕಾರಿಗಳಾದ ಕೆ.ಎಚ್‌.ಶಿವಕುಮಾರ್‌, ರೂಪ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ