ಆ್ಯಪ್ನಗರ

ಆಗುಂಬೆ ಘಾಟಿ ಸಮರ್ಪಕ ನಿರ್ವಹಣೆಗೆ ಮನವಿ

ಆಗುಂಬೆ ಘಾಟಿ ಸಮರ್ಪಕವಾಗಿ ನಿರ್ವಹಣೆ ಮಾಡಿ ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಸಾರ್ವಜನಿಕರು ಸೋಮವಾರ ಶಿವಮೊಗ್ಗ ಜಿಲ್ಲಾಧಿಕಾರಿಗೆ ಪತ್ರ ಕಳುಹಿಸಿದರು.

Vijaya Karnataka 7 May 2019, 5:00 am
ಕೊಪ್ಪ : ಆಗುಂಬೆ ಘಾಟಿ ಸಮರ್ಪಕವಾಗಿ ನಿರ್ವಹಣೆ ಮಾಡಿ ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಸಾರ್ವಜನಿಕರು ಸೋಮವಾರ ಶಿವಮೊಗ್ಗ ಜಿಲ್ಲಾಧಿಕಾರಿಗೆ ಪತ್ರ ಕಳುಹಿಸಿದರು.
Vijaya Karnataka Web agumbe ghati appealed for adequate maintenance
ಆಗುಂಬೆ ಘಾಟಿ ಸಮರ್ಪಕ ನಿರ್ವಹಣೆಗೆ ಮನವಿ


ಪತ್ರದಲ್ಲಿ ಘಾಟಿಯಲ್ಲಿ ಮೇ 14ರ ನಂತರ ವಾಹನ ಚಲಾವಣೆಗೆ ಬಿಡುಗಡೆಗೊಳಿಸಿದ್ದಕ್ಕಾಗಿ ಧನ್ಯವಾದಗಳು. ಆದರೆ ಘಾಟಿಯಲ್ಲಿ ಪ್ರತಿ ದಿನ 25 ಟನ್‌ಭಾರದ ಜೆಲ್ಲಿಹೊತ್ತ ಟಿಪ್ಪರ್‌ ಚಲಿಸುವುದರಿಂದ ರಸ್ತೆ ಕುಸಿತ ಉಂಟಾಗುತ್ತಿದೆ. ಘಾಟಿಯ ಚರಂಡಿ ನಿರ್ವಹಣೆಯಿಲ್ಲ. ಹಿಂದೆ ಲೋಕೋಪಯೋಗಿ ಇಲಾಖೆ ಗ್ಯಾಂಗ್‌ ಕೂಲಿ ಮಂದಿ ಘಾಟಿ ಚರಂಡಿ ನಿರ್ವಹಿಸುತ್ತಿದ್ದರು. ಪ್ರಸ್ತುತ ವ್ಯವಸ್ಥೆಯಿಲ್ಲ. ಇದರಿಂದ ಚರಂಡಿಯಲ್ಲಿ ದರಗು, ಕೊಳೆ ತುಂಬಿ ಮಳೆ ನೀರು ರಸ್ತೆಗೆ ಹರಿದು ಘಾಟಿ ಕುಸಿಯುತ್ತಿದೆ. ಆದ್ದರಿಂದ ಸಂಬಂಧಿಸಿದವರು ರಸ್ತೆ ಮತ್ತು ಚರಂಡಿ ನಿರ್ವಹಣೆಗೆ ಆದ್ಯತೆ ನೀಡಬೇಕು. ಜೆಸಿಬಿ ಬಳಸಿ ಗುಡ್ಡ ಕೊರೆದರೆ ಮೇಲಿನ ಘಾಟಿಗೆ ಹಾನಿಯಾಗುವ ಸಂಭವವಿದೆ. ಈಗಾಗಲೆ ಕುಸಿದ ಮಣ್ಣನ್ನು ತೆರವುಗೊಳಿಸಿ ಸರಿಪಡಿಸಿದಲ್ಲಿ ಘಾಟಿ ರಸ್ತೆ ಉಳಿಯುತ್ತದೆ.

ನಿರ್ವಹಣೆಯನ್ನು ನವೆಂಬರ್‌, ಡಿಸೆಂಬರ್‌ ತಿಂಗಳಿನಲ್ಲಿ ಮಾಡಿದರೆ ಒಳಿತು. ಈಗ ಶಾಲೆ ರಜೆಯಿದ್ದು, ಈ ಭಾಗದ ನೂರಾರು ಮಂದಿ ಕರಾವಳಿ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರಕ್ಕೆ ತೆರಳಲಿದ್ದು, ಘಾಟಿ ಬಂದ್‌ ಮಾಡಿದ್ದರಿಂದ ಅವರಿಗೆ ತೊಂದರೆಯಾಗಿದೆ. ಇನ್ನು ಇಲ್ಲಿಂದ ಮಣಿಪಾಲದ ಕೆಎಂಸಿ ಮತ್ತು ಉಡುಪಿಯ ಆಸ್ಪತ್ರೆಗೆ ತೆರಳುವವರು ಕಾರ್ಕಳಕ್ಕೆ ಸುತ್ತು ಹೊಡೆದು ತೆರಳಬೇಕು. ಮಳೆÜಗಾಲ ಹತ್ತಿರವಾದಾಗ ದುರಸ್ತಿ ಕಾರ್ಯ ಮಾಡುವುದನ್ನು ಬಿಟ್ಟು, ಮಳೆ ನಿಂತ ತಿಂಗಳಲ್ಲಿ ಮಾಡಿದರೆ ಒಳಿತು ಎಂದು ತಿಳಿಸಿದ್ದಾರೆ.

ಸಿದ್ದಪ್ಪ ಗೌಡ, ಸತೀಶ್‌ ಗೌಡ, ಶಶಿಧರ ಶೆಟ್ಟಿ, ಜನಾರ್ಧನ ನಾಯ್ಕ ಮತ್ತಿತರರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ