ಆ್ಯಪ್ನಗರ

ಅಡುಗೆ ಒಲೆ ಪಕ್ಕದಿಂದ ಎದ್ದಿಲ್ಲವೆಂದು ತಂದೆಗೆ ದೊಣ್ಣೆಯಿಂದ ಹೊಡೆದ ಮಗ, ಕುಡಿತದ ಅಮಲಿಗೆ ಹೋಯ್ತು ಪ್ರಾಣ!

​​ದೂರಿನ ಮೇರೆಗೆ ಬಣಕಲ್‌ ಸಬ್‌ಇನ್‌ಸ್ಪೆಕ್ಟರ್‌ ಶ್ರೀನಾಥ್‌ ರೆಡ್ಡಿ ಹಾಗೂ ಮೂಡಿಗೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನು ಪೊಲೀಸ್‌ ಮೂಲಗಳ ಪ್ರಕಾರ, ತಾಯಿ ಸಾವನಪ್ಪಿದ ಹಿನ್ನೆಲೆ ಮಂಜುನಾಥ್ ಹಾಗೂ ತಂದೆ ಬಸಯ್ಯ ಇಬ್ಬರೇ ಬೆಳಗೋಡಿನ ಮನೆಯಲ್ಲಿ ವಾಸವಿದ್ದರಂತೆ.

Vijaya Karnataka Web 19 Sep 2020, 8:50 am
ಕೊಟ್ಟಿಗೆಹಾರ : ಬಣಕಲ್‌ ಸಮೀಪದ ಬೆಳಗೋಡಿನಲ್ಲಿ ಕುಡಿದ ಅಮಲಿನಲ್ಲಿದ್ದ ಮಗ ತನ್ನ ತಂದೆಯನ್ನೆ ಕೊಂದ ಘಟನೆ ನಡೆದಿದೆ. ಗುರುವಾರ ರಾತ್ರಿ ಕುಡಿದು ಮನೆಗೆ ಬಂದ ಮಂಜುನಾಥ್‌ ಕ್ಷುಲ್ಲಕ ಕಾರಣಕ್ಕಾಗಿ ತಂದೆ ಬಾಸಯ್ಯ(62) ಅವರೊಂದಿಗೆ ಜಗಳವಾಡಿ, ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಆರೋಪಿ ಮಂಜುನಾಥ್‌ನನ್ನು ಬಣಕಲ್‌ ಪೊಲೀಸರು ಬಂಧಿಸಿ, ಕೇಸು ದಾಖಲಿಸಿದ್ದಾರೆ.
Vijaya Karnataka Web murder
ಸಾಂದರ್ಭಿಕ ಚಿತ್ರ


ದೂರಿನ ಮೇರೆಗೆ ಬಣಕಲ್‌ ಸಬ್‌ಇನ್‌ಸ್ಪೆಕ್ಟರ್‌ ಶ್ರೀನಾಥ್‌ ರೆಡ್ಡಿ ಹಾಗೂ ಮೂಡಿಗೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನು ಪೊಲೀಸ್‌ ಮೂಲಗಳ ಪ್ರಕಾರ, ತಾಯಿ ಸಾವನಪ್ಪಿದ ಹಿನ್ನೆಲೆ ಮಂಜುನಾಥ್ ಹಾಗೂ ತಂದೆ ಬಸಯ್ಯ ಇಬ್ಬರೇ ಬೆಳಗೋಡಿನ ಮನೆಯಲ್ಲಿ ವಾಸವಿದ್ದರಂತೆ.

ತಂದೆಗೆ ಅನಾರೋಗ್ಯ ಇದ್ದಿದ್ದರಿಂದ ಮಗನೇ ತಂದೆಯನ್ನು ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಗುರುವಾರ ಕುಡಿತದ ಅಮಲಿನಲ್ಲಿದ್ದ ಮಂಜುನಾಥ್‌ ಮನೆಗೆ ಬರುವಾಗ ತಂದೆ ಬಸಯ್ಯ ಅಡುಗೆ ಒಲೆ ಬಳಿ ಕುಳಿತಿದ್ದರಂತೆ. ತಂದೆಗೆ ಏಳುವಂತೆ ಹೇಳಿದಾಗ ಕೇಳಿಲ್ಲವಂತೆ. ಇದರಿಂದ ಕೋಪಗೊಂಡ ಮಂಜುನಾಥ್‌ ದೊಣ್ಣೆಯಿಂದ ತಂದೆಗೆ ಹೊಡೆದಿದ್ದನಂತೆ.

ಬಳಿಕ ತಂದೆ ಹೋಗಿ ತಮ್ಮ ರೂಮಿನಲ್ಲಿ ಮಲಗಿದ್ದರಂತೆ. ಶುಕ್ರವಾರ ಮುಂಜಾನೆ ತಂದೆ ಬಸಯ್ಯ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಲೆಯಿಂದ ತೀವ್ರ ರಕ್ತ ಹರಿಯುತ್ತಿತ್ತು ಎಂದು ತಿಳಿದುಬಂದಿದೆ. ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ