ಆ್ಯಪ್ನಗರ

ಕನ್ನಡ ಭಾಷೆಯ ಋುಣ ತೀರಿಸುವ ಕರ್ತವ್ಯ ನಮ್ಮೆಲ್ಲರದು

ಕನ್ನಡ ನೆಲದಲ್ಲಿ ಹುಟ್ಟಿ, ಕನ್ನಡದಲ್ಲೇ ಬೆಳೆದು, ಬದುಕಿರುವ ಕನ್ನಡÜ ಭಾಷೆಯ ಋುಣ ತೀರಿಸುವ ಕರ್ತವ್ಯ ನಮ್ಮೆಲ್ಲರದ್ದಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀರಂಗಯ್ಯ ಹೇಳಿದರು.

Vijaya Karnataka 28 Dec 2018, 5:00 am
ಮೂಡಿಗೆರೆ : ಕನ್ನಡ ನೆಲದಲ್ಲಿ ಹುಟ್ಟಿ, ಕನ್ನಡದಲ್ಲೇ ಬೆಳೆದು, ಬದುಕಿರುವ ಕನ್ನಡÜ ಭಾಷೆಯ ಋುಣ ತೀರಿಸುವ ಕರ್ತವ್ಯ ನಮ್ಮೆಲ್ಲರದ್ದಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀರಂಗಯ್ಯ ಹೇಳಿದರು.
Vijaya Karnataka Web CKM-27MDG-P1


ಅವರು ಜ.18 ಮತ್ತು 19 ರಂದು ನಡೆಯುವ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಸಲುವಾಗಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸಾಹಿತ್ಯ ಸಮ್ಮೇಳನ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅನಾವಶ್ಯಕ ಖರ್ಚು ಮಾಡದೇ ಅದ್ಧ್ದೂರಿಯಾಗಿ ಆಚರಿಸೋಣ. ಸಮಿತಿ ಮತ್ತು ಉಪ ಸಮಿತಿಗಳು ಕ್ರೀಯಾಶೀಲವಾಗಿ ಕಾರ್ಯ ನಿರ್ವಹಿಸಬೇಕು. ಜಿಲ್ಲಾ ಮಟ್ಟದ ಸಮ್ಮೇಳನಕ್ಕೆ ರಾಜ್ಯದಿಂದ ಹಣ ಬರುವುದಿಲ್ಲ. ಹಾಗಾಗಿ ಸ್ಥಳೀಯ ಸಂಘ ಸಂಸ್ಥೆಗಳು, ದಾನಿಗಳು, ಅಧಿಕಾರಿಗಳಿಂದ ವಂತಿಕೆ ಸೇರಿದಂತೆ ಇನ್ನಿತರೆ ಕ್ರೋಢೀಕರಣದಿಂದ ಸಂಪನ್ಮೋಲ ಸಂಗ್ರಹಿಸುವ ಅವಶ್ಯಕತೆಯಿದೆ. ಜಿಲ್ಲೆಯಿಂದ ಅತೀ ಹೆಚ್ಚು ಸಹಕಾರ ನೀಡುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಅಧ್ಯಕ್ಷ ತೆ ವಹಿಸಿದ್ದ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಕೊಡುವುದು ಮುಖ್ಯವಲ್ಲ. ಕೊಡುವ ಮನಸ್ಸು ಬಹಳ ಮುಖ್ಯ. ಎಲ್ಲ ಅವಶ್ಯಕತೆಗಳಿಗೆ ಹಣವಿರುತ್ತದೆ. ಆದರೆ ಕನ್ನಡದ ಕೆಲಸ ಮಾಡಲು ಹಣವಿಲ್ಲವೆಂಬ ಅಭಿಪ್ರಾಯವೇ ಹೆಚ್ಚಾಗಿದೆ. ಕನ್ನಡ ಭಾಷೆ ಖಾಸಗಿಯದ್ದಲ್ಲ. ಅದನ್ನು ಉಳಿಸುವುದು ಕೇವಲ ಕನ್ನಡ ಸಾಹಿತ್ಯ ಪರಿಷತ್ತಿಗೆ ಮಾತ್ರ ಸೀಮಿತವಲ್ಲ. ಕನ್ನಡಿಗರೆಲ್ಲರೂ ಒಗ್ಗಟ್ಟಾಗಿ ಕನ್ನಡ ಭಾಷೆ ಉಳಿಸಿ ಬೆಳೆಸಲು ಮುಂದಾಗಬೇಕು. ಹಾಗಾಗಿ ಎಲ್ಲರೂ ಸಮ್ಮೇಳನದಲ್ಲಿ ಭಾಗವಹಿಸಿ ತಮ್ಮ ಕೈಲಾದ ಸಹಾಯ ಮಾಡಬೇಕೆಂದು ಮನವಿ ಮಾಡಿದರು.

ವಿಧಾನ ಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್‌ ಮಾತನಾಡಿ, ಈ ಭಾಗದ ಕೆಲವೆಡೆ ಅತೀವೃಷ್ಟಿ ಮತ್ತು ಅನಾವೃಷ್ಟಿ ಕೂಡಿದೆ. ದುಂದುವೆಚ್ಚ ಮಾಡದೇ ಎಲ್ಲರು ಜವಾಬ್ದಾರಿಯನ್ನು ನಿರ್ವಹಿಸಿ ಸಮ್ಮೇಳನ ನಡೆಸಬೇಕಾಗಿದ್ದು, ಸಮ್ಮೇಳನದಲ್ಲಿ ಹಾರ ಸೇರಿದಂತೆ ವಿವಿಧ ಬೇಡವಾದ ಖರ್ಚುಗಳನ್ನು ನಿಯಂತ್ರಿಸಿ ಸಾಹಿತಿಗಳನ್ನು ನೆನಪು ಮಾಡುವಂತಹ ಕೆಲಸವನ್ನು ಮಾಡಬೇಕೆಂದು ಸಲಹೆ ನೀಡಿದರು.

ಕಸಾಪ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್‌ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶೇಷವಾಗಿ 5 ಲಕ್ಷ ಕೇಂದ್ರ ಕಸಾಪದಲ್ಲಿ ಬರುತ್ತದೆ. ಅದರಲ್ಲಿ ಎಲ್ಲ ರೀತಿಯ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ದಾನಿಗಳಿಂದ 17 ಲಕ್ಷ ಕ್ರೋಡೀಕರಿಸುವ ಗುರಿ ಇಟ್ಟುಕೊಂಡಿದ್ದೇವೆ. ಅಲ್ಲದೇ ಜಿಲ್ಲಾಡಳಿತ ಕೂಡ ಸಹಕಾರ ನೀಡಿದ್ದು, ಸಮ್ಮೇಳನಕ್ಕೆ ಶಕ್ತಿ ತಂದಿದೆ. ಸಮ್ಮೇಳನ ಉತ್ತಮ ರೀತಿಯಲ್ಲಿ ನಡೆಸಲು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.

ತಾ.ಪಂ. ಅಧ್ಯಕ್ಷ ಕೆ.ಸಿ.ರತನ್‌, ಕೋಶಾಧ್ಯಕ್ಷ ರಂಜನ್‌ ಅಜಿತ್‌ ಕುಮಾರ್‌, ತಹಸೀಲ್ದಾರ್‌ ಪದ್ಮನಾಭ ಶಾಸ್ತ್ರಿ, ತಾ.ಪಂ. ಕಾರ್ಯ ನಿರ್ವಹಣ ಅಧಿಕಾರಿ ವೆಂಕಟೇಶ್‌, ಕಸಾಪ ತಾಲೂಕು ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್‌, ಚಿಕ್ಕಮಗಳೂರು ತಾಲೂಕು ಅಧ್ಯಕ್ಷ ಪುಟ್ಟಸ್ವಾಮಿ, ಉಪ ಸಮಿತಿ ಅಧ್ಯಕ್ಷ ರಾದ ಜೆ.ಎಸ್‌.ರಘು, ಬಾಲರಾಜ್‌, ಸುಧೀರ್‌ ಕಡಿದಾಳ್‌, ಡಿ.ಕೆ.ಲಕ್ಷ ್ಮಣ್‌ಗೌಡ, ಶಿವು, ಮೋಹನ್‌ ಕುಮಾರ್‌, ಭಾನುಮತಿ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ