ಆ್ಯಪ್ನಗರ

ಆಂಬ್ಯುಲೆನ್ಸ್ ಹತ್ತಿ ಪ್ರವಾಸಕ್ಕೆ ಬಂದರು..!

ಗಾಯಾಳು, ರೋಗಿಗಳನ್ನು ಕರೆದುಕೊಂಡು ಹೋಗಬೇಕಾದ ಆಂಬ್ಯುಲೆನ್ಸ್ ಅನ್ನು ಪ್ರವಾಸಕ್ಕೆ ಬಳಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಮಂಗಳವಾರ ಸಾರ್ವಜನಿಕ ವಲಯದಲ್ಲಿ ಚರ್ಚೆಗೂ ಗ್ರಾಸವಾಯಿತು.

ವಿಕ ಸುದ್ದಿಲೋಕ 9 Nov 2016, 4:00 am
ಕೊಟ್ಟಿಗೆಹಾರ (ಚಿಕ್ಕಮಗಳೂರು): ಗಾಯಾಳು, ರೋಗಿಗಳನ್ನು ಕರೆದುಕೊಂಡು ಹೋಗಬೇಕಾದ ಆಂಬ್ಯುಲೆನ್ಸ್ ಅನ್ನು ಪ್ರವಾಸಕ್ಕೆ ಬಳಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಮಂಗಳವಾರ ಸಾರ್ವಜನಿಕ ವಲಯದಲ್ಲಿ ಚರ್ಚೆಗೂ ಗ್ರಾಸವಾಯಿತು.
Vijaya Karnataka Web ambulance trip
ಆಂಬ್ಯುಲೆನ್ಸ್ ಹತ್ತಿ ಪ್ರವಾಸಕ್ಕೆ ಬಂದರು..!


ಬೆಂಗಳೂರಿನ ಶ್ರೀಸಾಯಿ ಹೆಸರಿನ ಆಂಬ್ಯುಲೆನ್ಸ್ ಕೆಲ ಕಾಲ ಪಟ್ಟಣದಲ್ಲಿ ನಿಂತಿತ್ತು. ಈ ವಾಹನದಲ್ಲಿ ಯಾವುದೇ ರೋಗಿಗಳು ಇರಲಿಲ್ಲ. ಮಹಿಳೆಯರು, ಮಕ್ಕಳು ಇದ್ದಿದ್ದು ಕಂಡು ಬಂದಿತು. ಈ ಬಗ್ಗೆ ವಿಚಾರಿಸಿದಾಗ ಹೊರನಾಡು, ಧರ್ಮಸ್ಥಳ ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ತೆರಳುವುದಾಗಿ ಅದರಲ್ಲಿದ್ದವರು ತಿಳಿಸಿದರು. ಆರೋಗ್ಯ ಸೇವೆ ನೀಡಬೇಕಾದ ಆಂಬ್ಯುಲೆನ್ಸ್ ಪ್ರವಾಸಕ್ಕೆ ಬಳಕೆ ಆಗುತ್ತಿರುವುದರ ಬಗ್ಗೆ ಸಂಬಂಧಪಟ್ಟವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ.

-----

ವಾಹನವನ್ನು ಆಂಬ್ಯುಲೆನ್ಸ್ ಆಗಿ ಬಳಕೆ ಮಾಡುವ ಪೂರ್ವದಲ್ಲೇ ಹಲವು ನಿಬಂಧನೆಗಳನ್ನು ವಿಧಿಸಲಾಗಿರುತ್ತದೆ. ಅದರಂತೆ ರೋಗಿಗಳ ಉಪಯೋಗಕ್ಕೆ ಬಿಟ್ಟು ಅನ್ಯ ಉದ್ದೇಶಕ್ಕೆ ಬಳಸಿದರೆ ಅಂತಹ ವಾಹನವನ್ನು ದಸ್ತಗಿರಿ ಮಾಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ.

- ಶಿವರಾಜ್ ಪಾಟೀಲ್, ಆರ್‌ಟಿಒ, ಚಿಕ್ಕಮಗಳೂರು

ಬೆಂಗಳೂರಿನ ವಿಲ್ಸನ್‌ಗಾರ್ಡನ್‌ನಲ್ಲಿರುವ ಆಚಾರ್ಯ ನರ್ಸಿಂಗ್ ಹೋಂಗೆ ಸೇವೆ ಒದಗಿಸುತ್ತಿದ್ದೇವೆ. ಈ ಆಂಬ್ಯುಲೆನ್ಸ್ ಸೋಮವಾರ ರಾತ್ರಿ ಮಣಿಪಾಲ್‌ಗೆ ರೋಗಿಯನ್ನು ಕರೆದುಕೊಂಡು ಹೋಗಿತ್ತು. ಅಲ್ಲಿಂದ ಹಿಂದಿರುಗುವಾಗ ಚಾಲಕ ಪ್ರವಾಸಿಗರನ್ನು ಕರೆದುಕೊಂಡು ಬಂದಿರಬಹುದು. ಈ ಬಗ್ಗೆ ತಮಗೆ ಮಾಹಿತಿ ಇಲ್ಲ.

-ರಾಜು, ಮಾಲೀಕ, ಶ್ರೀಸಾಯಿ ಆಂಬ್ಯುಲೆನ್, ಬೆಂಗಳೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ