ಆ್ಯಪ್ನಗರ

ಅಮೃತ್‌ಮಹಲ್‌ ಗೊಬ್ಬರ ಅಕ್ರಮ ಸಾಗಣೆ

ಬಾಸೂರು ಅಮೃತಮಹಲ್‌ ಕಾವಲು ಪ್ರದೇಶದ ಹಸುವಿನ ಗೊಬ್ಬರವನ್ನು ವ್ಯಕ್ತಿಯೊಬ್ಬರ ಜಮೀನಿನಲ್ಲಿ ಹಾಕಿರುವ ಪ್ರಕರಣ ನಡೆದಿದೆ.

Vijaya Karnataka 4 Feb 2019, 5:00 am
ಕvೂರು : ಬಾಸೂರು ಅಮೃತಮಹಲ್‌ ಕಾವಲು ಪ್ರದೇಶದ ಹಸುವಿನ ಗೊಬ್ಬರವನ್ನು ವ್ಯಕ್ತಿಯೊಬ್ಬರ ಜಮೀನಿನಲ್ಲಿ ಹಾಕಿರುವ ಪ್ರಕರಣ ನಡೆದಿದೆ.
Vijaya Karnataka Web amrithmahal illegal transport
ಅಮೃತ್‌ಮಹಲ್‌ ಗೊಬ್ಬರ ಅಕ್ರಮ ಸಾಗಣೆ


ಬಾಸೂರು ಬಳಿಯ ತಮ್ಮಯ್ಯ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಸುಮಾರು 70ಕ್ಕೂ ಹೆಚ್ಚು ಟ್ರ್ಯಾಕ್ಟರ್‌ ಲೋಡ್‌ನಷ್ಟು ಸಗಣಿ ಗೊಬ್ಬರವನ್ನು ಸಂಗ್ರಹಿಸಲಾಗಿದೆ. ಕಾವಲು ಪ್ರದೇಶದ ಕೊಟ್ಟಿಗೆಯಿಂದ ಜಮೀನಿಗೆ ಗೊಬ್ಬರ ಸಾಗಿಸಿರುವ ಬಗ್ಗೆ ಬಹಳಷ್ಟು ಅನುಮಾನ ಹುಟ್ಟುಹಾಕಿದೆ.

ಜಮೀನಿನಲ್ಲಿ ಒಂದು ಬೃಹತ್‌ ಗಾತ್ರದ ಲೋಡ್‌ ಗೊಬ್ಬರದ ಮೇಲೆ ಕೆಂಪು ಮಣ್ಣು ಹಾಕಿ ಮುಚ್ಚಿದ್ದು ಇನ್ನೊಂದು ಲೋಡ್‌ ಗೊಬ್ಬರವನ್ನು ಹಾಗೆಯೇ ಬಿಡಲಾಗಿದೆ. ಜತೆಗೆ ಸಾಗಣೆಗೆ ನಾಲ್ಕು ಟ್ರ್ಯಾಕ್ಟರ್‌ ಮತ್ತು ಒಂದು ಜೆಸಿಬಿ ಬಳಸಿಕೊಳ್ಳಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಅಜ್ಜಂಪುರ ಅಮೃತಮಹಲ್‌ ಕಾವಲು ಪ್ರದೇಶದ ನಿರ್ದೇಶಕರಿಗೆ ಜನರು ದೂರು ನೀಡಿದ ಹಿನ್ನೆಲೆಯಲ್ಲಿ ಅವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ