* ಹಗಲಿನಲ್ಲೇ ಕೋಣಗಳ ದರ್ಶನ
* ಅಡಕೆ ತೋಟ, ಸಸಿಗಳ ನಾಶ,
* ಪರಿಹಾರ ಸೂಚಿಸದ ಅರಣ್ಯ ಇಲಾಖೆ,
* ರಾತ್ರಿ ಸಂಚಾರಕ್ಕೆ ಗ್ರಾಮಸ್ಥರಲ್ಲಿ ಭಯ
ನರಸಿಂಹರಾಜಪುರ : ಪಟ್ಟಣ ಸಮೀಪದ ಹಲವಾರು ಗ್ರಾಮಗಳಲ್ಲಿ ಕಾಡುಕೋಡಗಳ ದಂಡು ದಾಂಗುಡಿ ಇಡುತ್ತಿದ್ದು, ಅಡಕೆ ತೋಟ, ಸಸಿಗಳು, ಬೆಳೆಗಳನ್ನೆಲ್ಲಾ ನಾಶ ಪಡಿಸುತ್ತಿವೆ. ಮನೆ ಬಾಗಿಲು ತೆರೆದರೆ ದರ್ಶನ ನೀಡುವ ಕೋಣಗಳಿಂದಾಗಿ ಭಯಭೀತರಾಗಿರುವ ಗ್ರಾಮಸ್ಥರು ಇದಕ್ಕೆ ಪರಿಹಾರ ಸೂಚಿಸುವಂತೆ ಅರಣ್ಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಕಳೆದ 2 ವರ್ಷದಿಂದಲೂ ತಾಲೂಕಿನ ಸೀತೂರು, ಕಮಲಾಪುರ, ಕೋನೋಡಿ, ಬಾಳೆಕೊಪ್ಪ, ಗಾಡಿಕೆರೆ, ಗಡಿ ಭಾಗದ ತಲಮಕ್ಕಿ ಗ್ರಾಮಗಳಲ್ಲಿ ಕಾಡುಕೋಣಗಳ ಹಾವಳಿ ವಿಪರೀತವಾಗಿದೆ. ಮೊದ ಮೊದಲು ರಾತ್ರಿ ಹೊತ್ತಿನಲ್ಲಿ ಅಡಕೆ ತೋಟಗಳಿಗೆ ದಾಳಿ ಮಾಡುತ್ತಿದ್ದ ಕಾಡುಕೋಣಗಳ ಹಿಂಡು ಇತ್ತೀಚಿಗೆ ಹಗಲು ಹೊತ್ತಿನಲ್ಲೇ ಸುತ್ತಾಡುತ್ತಿದೆ. ತೋಟದಲ್ಲಿ ಹಸಿ ಹುಲ್ಲನ್ನು ಮೇಯುವ ಕಾಡು ಕೋಣಗಳ ಹಿಂಡು ಅಡಕೆ ಸಸಿ, ಬಾಳೆ ಮರ, ಸಣ್ಣ ತೆಂಗಿನ ಮರ ತಿಂದು ಹಾಕುತ್ತಿದೆ. 10ರಿಂದ 12 ಅಡಿ ಎತ್ತರದ ಸಸಿಗಳಿಗೆ ಮೈಯನ್ನು ಉಜ್ಜುವುದರಿಂದ ಸಸಿಗಳು ವಾಲಿ ಬೀಳುತ್ತಿದೆ.
ತಾಲೂಕಿನ ಗಡಿಭಾಗವಾದ ತಲಮಕ್ಕಿ, ರಾಗೋಡು, ಕಮಲಾಪುರ ಗ್ರಾಮದ ಅಡಕೆ ತೋಟಕ್ಕೆ ನುಗ್ಗುತ್ತಿರುವ ಕಾಡುಕೋಣಗಳು ಫಸಲು ಬರುವ ನೂರಾರು ಅಡಿಕೆ ಮರಗಳನ್ನು ಉರುಳಿಸಿದೆ. ಅಡಕೆ ಸಸಿ ತಿಂದು ಹಾಳುಗೆಡುವುತ್ತಿವೆ.
ಸಮೀಪದ ಗುರ್ಜರ್ ಎಸ್ಟೇಟ್ನಲ್ಲಿ ವರ್ಷವಿಡೀ ಕಾಡುಕೋಣಗಳು ಬೀಡು ಬಿಟ್ಟಿದ್ದು ಮುಖ್ಯರಸ್ತೆಯಲ್ಲಿ ಓಡಾಡುವ ಜನರಿಗೆ ಕಾಣಸಿಗುತ್ತದೆ.
ತೋಟದಲ್ಲಿರುವ ಹಸಿ ಹುಲ್ಲನ್ನು ತಿಂದು ತೋಟದ ತುಂಬಾ ಅಡ್ಡಾಡುವುದರಿಂದ ತೋಟವೆಲ್ಲಾ ಹೊಂಡ, ಗುಂಡಿಗಳಾಗುತ್ತಿದೆ. ರಾತ್ರಿ 8ರ ನಂತರ ರಸ್ತೆಗೂ ಇಳಿಯುವ ಕಾಡುಕೋಣಗಳಿಂದ ಗ್ರಾಮಸ್ಥರು ಸಂಚಾರ ಮಾಡುವುದಕ್ಕೂ ಭಯ ಬೀಳುವ ವಾತಾವರಣ ಏರ್ಪಟ್ಟಿದೆ.
.......................
ರಾತ್ರಿ ಹೊತ್ತಿನಲ್ಲಿ ಕೆಲ ಗ್ರಾಮಸ್ಥರ ಮನೆಯ ಅಂಗಳಕ್ಕೂ ಕಾಡುಕೋಣಗಳು ಬಂದಿದೆ. ರಾತ್ರಿ ಹೊತ್ತಿನಲ್ಲಿ ನಾಯಿ ಜೋರಾಗಿ ಬೊಗಳಿದ್ದರಿಂದ ನಮ್ಮ ಮನೆಯ ಬಾಗಿಲು ತೆರೆದು ನೋಡಿದರೆ ಮನೆಯ ಅಂಗಳದಲ್ಲೇ ಕಾಡುಕೋಣಗಳು ನಿಂತು ಬಿಟ್ಟಿದೆ.
ಕೃಷಿಕ ಶ್ರೀ ಪಾದ, ಯಡಗೆರೆ
..................
ಕಾಡು ಕೋಣಗಳ ಹಿಂಡು ನೀರು, ಆಹಾರ ಅರಸಿ ಗ್ರಾಮಗಳಿಗೆ ಬರುತ್ತಿದೆ. ಇದರ ಜತೆಗೆ ಹಲಸಿನ ಹಣ್ಣು ಬಿಡುವ ಸಮಯದಲ್ಲಿ ಹಣ್ಣಿಗಾಗಿ ಹೆಚ್ಚು ಕಾಡು ಕೋಣಗಳು ಬರುತ್ತಿದೆ. ಈಗ ಬಿದಿರಿಗೆ ಕಟ್ಟೆ ಬಂದು ನಾಶವಾಗಿದೆ. ದಟ್ಟಾರಣ್ಯವಾಗಿರುವುದರಿಂದ ಹುಲ್ಲು ಬೆಳೆಯುತ್ತಿಲ್ಲ. ಕಾಡಿನ ಅಂಚಿನಲ್ಲಿ ಸಣ್ಣ ಕಂದಕ ಮಾಡಿದ್ದೇವೆ. ಕಮಾಲಾಪುರ ಸೇರಿದಂತೆ ಕೆಲ ಗ್ರಾಮಗಳಿಗೆ ಕಾಡುಕೋಣಗಳು ದಾಟಿ ಬರದಂತೆ ಆನೆ ನಿರೋಧ ಕಂದಕವೂ ಮಂಜೂರಾಗಿದೆ. ಆ ಕಂದಕ ನಿರ್ಮಾಣವಾದರೆ ಕಾಡುಕೋಣಗಳು ಗ್ರಾಮಗಳಿಗೆ ಬರದಂತೆ ತಡೆಯಬಹುದು.
ವರುಣ್ ಸಿ.ಶೆಟ್ಟಿ, ಉಪ ವಲಯ ಅರಣ್ಯಾಧಿಕಾರಿ, ಸೀತೂರು ಶಾಖೆ
* ಅಡಕೆ ತೋಟ, ಸಸಿಗಳ ನಾಶ,
* ಪರಿಹಾರ ಸೂಚಿಸದ ಅರಣ್ಯ ಇಲಾಖೆ,
* ರಾತ್ರಿ ಸಂಚಾರಕ್ಕೆ ಗ್ರಾಮಸ್ಥರಲ್ಲಿ ಭಯ
ನರಸಿಂಹರಾಜಪುರ : ಪಟ್ಟಣ ಸಮೀಪದ ಹಲವಾರು ಗ್ರಾಮಗಳಲ್ಲಿ ಕಾಡುಕೋಡಗಳ ದಂಡು ದಾಂಗುಡಿ ಇಡುತ್ತಿದ್ದು, ಅಡಕೆ ತೋಟ, ಸಸಿಗಳು, ಬೆಳೆಗಳನ್ನೆಲ್ಲಾ ನಾಶ ಪಡಿಸುತ್ತಿವೆ. ಮನೆ ಬಾಗಿಲು ತೆರೆದರೆ ದರ್ಶನ ನೀಡುವ ಕೋಣಗಳಿಂದಾಗಿ ಭಯಭೀತರಾಗಿರುವ ಗ್ರಾಮಸ್ಥರು ಇದಕ್ಕೆ ಪರಿಹಾರ ಸೂಚಿಸುವಂತೆ ಅರಣ್ಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಕಳೆದ 2 ವರ್ಷದಿಂದಲೂ ತಾಲೂಕಿನ ಸೀತೂರು, ಕಮಲಾಪುರ, ಕೋನೋಡಿ, ಬಾಳೆಕೊಪ್ಪ, ಗಾಡಿಕೆರೆ, ಗಡಿ ಭಾಗದ ತಲಮಕ್ಕಿ ಗ್ರಾಮಗಳಲ್ಲಿ ಕಾಡುಕೋಣಗಳ ಹಾವಳಿ ವಿಪರೀತವಾಗಿದೆ. ಮೊದ ಮೊದಲು ರಾತ್ರಿ ಹೊತ್ತಿನಲ್ಲಿ ಅಡಕೆ ತೋಟಗಳಿಗೆ ದಾಳಿ ಮಾಡುತ್ತಿದ್ದ ಕಾಡುಕೋಣಗಳ ಹಿಂಡು ಇತ್ತೀಚಿಗೆ ಹಗಲು ಹೊತ್ತಿನಲ್ಲೇ ಸುತ್ತಾಡುತ್ತಿದೆ. ತೋಟದಲ್ಲಿ ಹಸಿ ಹುಲ್ಲನ್ನು ಮೇಯುವ ಕಾಡು ಕೋಣಗಳ ಹಿಂಡು ಅಡಕೆ ಸಸಿ, ಬಾಳೆ ಮರ, ಸಣ್ಣ ತೆಂಗಿನ ಮರ ತಿಂದು ಹಾಕುತ್ತಿದೆ. 10ರಿಂದ 12 ಅಡಿ ಎತ್ತರದ ಸಸಿಗಳಿಗೆ ಮೈಯನ್ನು ಉಜ್ಜುವುದರಿಂದ ಸಸಿಗಳು ವಾಲಿ ಬೀಳುತ್ತಿದೆ.
ತಾಲೂಕಿನ ಗಡಿಭಾಗವಾದ ತಲಮಕ್ಕಿ, ರಾಗೋಡು, ಕಮಲಾಪುರ ಗ್ರಾಮದ ಅಡಕೆ ತೋಟಕ್ಕೆ ನುಗ್ಗುತ್ತಿರುವ ಕಾಡುಕೋಣಗಳು ಫಸಲು ಬರುವ ನೂರಾರು ಅಡಿಕೆ ಮರಗಳನ್ನು ಉರುಳಿಸಿದೆ. ಅಡಕೆ ಸಸಿ ತಿಂದು ಹಾಳುಗೆಡುವುತ್ತಿವೆ.
ಸಮೀಪದ ಗುರ್ಜರ್ ಎಸ್ಟೇಟ್ನಲ್ಲಿ ವರ್ಷವಿಡೀ ಕಾಡುಕೋಣಗಳು ಬೀಡು ಬಿಟ್ಟಿದ್ದು ಮುಖ್ಯರಸ್ತೆಯಲ್ಲಿ ಓಡಾಡುವ ಜನರಿಗೆ ಕಾಣಸಿಗುತ್ತದೆ.
ತೋಟದಲ್ಲಿರುವ ಹಸಿ ಹುಲ್ಲನ್ನು ತಿಂದು ತೋಟದ ತುಂಬಾ ಅಡ್ಡಾಡುವುದರಿಂದ ತೋಟವೆಲ್ಲಾ ಹೊಂಡ, ಗುಂಡಿಗಳಾಗುತ್ತಿದೆ. ರಾತ್ರಿ 8ರ ನಂತರ ರಸ್ತೆಗೂ ಇಳಿಯುವ ಕಾಡುಕೋಣಗಳಿಂದ ಗ್ರಾಮಸ್ಥರು ಸಂಚಾರ ಮಾಡುವುದಕ್ಕೂ ಭಯ ಬೀಳುವ ವಾತಾವರಣ ಏರ್ಪಟ್ಟಿದೆ.
.......................
ರಾತ್ರಿ ಹೊತ್ತಿನಲ್ಲಿ ಕೆಲ ಗ್ರಾಮಸ್ಥರ ಮನೆಯ ಅಂಗಳಕ್ಕೂ ಕಾಡುಕೋಣಗಳು ಬಂದಿದೆ. ರಾತ್ರಿ ಹೊತ್ತಿನಲ್ಲಿ ನಾಯಿ ಜೋರಾಗಿ ಬೊಗಳಿದ್ದರಿಂದ ನಮ್ಮ ಮನೆಯ ಬಾಗಿಲು ತೆರೆದು ನೋಡಿದರೆ ಮನೆಯ ಅಂಗಳದಲ್ಲೇ ಕಾಡುಕೋಣಗಳು ನಿಂತು ಬಿಟ್ಟಿದೆ.
ಕೃಷಿಕ ಶ್ರೀ ಪಾದ, ಯಡಗೆರೆ
..................
ಕಾಡು ಕೋಣಗಳ ಹಿಂಡು ನೀರು, ಆಹಾರ ಅರಸಿ ಗ್ರಾಮಗಳಿಗೆ ಬರುತ್ತಿದೆ. ಇದರ ಜತೆಗೆ ಹಲಸಿನ ಹಣ್ಣು ಬಿಡುವ ಸಮಯದಲ್ಲಿ ಹಣ್ಣಿಗಾಗಿ ಹೆಚ್ಚು ಕಾಡು ಕೋಣಗಳು ಬರುತ್ತಿದೆ. ಈಗ ಬಿದಿರಿಗೆ ಕಟ್ಟೆ ಬಂದು ನಾಶವಾಗಿದೆ. ದಟ್ಟಾರಣ್ಯವಾಗಿರುವುದರಿಂದ ಹುಲ್ಲು ಬೆಳೆಯುತ್ತಿಲ್ಲ. ಕಾಡಿನ ಅಂಚಿನಲ್ಲಿ ಸಣ್ಣ ಕಂದಕ ಮಾಡಿದ್ದೇವೆ. ಕಮಾಲಾಪುರ ಸೇರಿದಂತೆ ಕೆಲ ಗ್ರಾಮಗಳಿಗೆ ಕಾಡುಕೋಣಗಳು ದಾಟಿ ಬರದಂತೆ ಆನೆ ನಿರೋಧ ಕಂದಕವೂ ಮಂಜೂರಾಗಿದೆ. ಆ ಕಂದಕ ನಿರ್ಮಾಣವಾದರೆ ಕಾಡುಕೋಣಗಳು ಗ್ರಾಮಗಳಿಗೆ ಬರದಂತೆ ತಡೆಯಬಹುದು.
ವರುಣ್ ಸಿ.ಶೆಟ್ಟಿ, ಉಪ ವಲಯ ಅರಣ್ಯಾಧಿಕಾರಿ, ಸೀತೂರು ಶಾಖೆ