ಆ್ಯಪ್ನಗರ

16 ಕ್ಕೆ ಹಿರೇಮಗಳೂರಲ್ಲಿ ವಾರ್ಷಿಕ ಬ್ರಹ್ಮ ರಥೋತ್ಸವ

ನಗರ ಹೊರವಲಯದ ಹಿರೇಮಗಳೂರಿನ ಇತಿಹಾಸ ಪ್ರಸಿದ್ಧ ಶ್ರೀ ಕೋದಂಡರಾಮಚಂದ್ರಸ್ವಾಮಿ ದೇವಾಲಯದಲ್ಲಿ ಮಾ.16 ರಂದು ವಾರ್ಷಿಕ ಬ್ರಹ್ಮರಥೋತ್ಸವ ನಡೆಯಲಿದೆ.

Vijaya Karnataka 9 Mar 2019, 5:00 am
ಚಿಕ್ಕಮಗಳೂರು : ನಗರ ಹೊರವಲಯದ ಹಿರೇಮಗಳೂರಿನ ಇತಿಹಾಸ ಪ್ರಸಿದ್ಧ ಶ್ರೀ ಕೋದಂಡರಾಮಚಂದ್ರಸ್ವಾಮಿ ದೇವಾಲಯದಲ್ಲಿ ಮಾ.16 ರಂದು ವಾರ್ಷಿಕ ಬ್ರಹ್ಮರಥೋತ್ಸವ ನಡೆಯಲಿದೆ.
Vijaya Karnataka Web annual brahma rathotsava at hiremallur on 16th
16 ಕ್ಕೆ ಹಿರೇಮಗಳೂರಲ್ಲಿ ವಾರ್ಷಿಕ ಬ್ರಹ್ಮ ರಥೋತ್ಸವ


ಉತ್ಸವದ ಅಂಗವಾಗಿ ಮಾ.11 ರಂದು ಬೆಳಗ್ಗೆ 7 ಗಂಟೆಗೆ ಶ್ರೀ ಕೋದಂಡರಾಮಚಂದ್ರಸ್ವಾಮಿಗೆ ಪಂಚಾಮೃತ ಅಭಿಷೇಕ, ಸಂಜೆ 5 ಗಂಟೆಗೆ ಅನುಜ್ಞೆ, ವಿಶ್ವಕ್ಷೇನಾರಾಧನೆ, ಪುಣ್ಯಾಹ ವಾಚನ, ಮೃತ್ತಿಕಾ ಸಂಗ್ರಹಣ, ಅಂಕುರಾರ್ಪಣ, ರಕ್ಷಾ ಬಂಧನ, ಪಠ ಪ್ರತಿಷ್ಠೆ ಜರುಗಲಿದೆ.

12 ರಂದು ಬೆಳಗ್ಗೆ ಧ್ವಜಾ ರೋಹಣ, ದಿವ್ಯ ಪ್ರಬಂಧ ಪಾರಾಯಣ, ಆಂಡಾಳ್‌ ಗೋಷ್ಠಿ, ಸಂಜೆ ಭೇರಿ ತಾಡನ, ಯಾಗಶಾಲಾ ಪ್ರವೇಶ, ಹಂಸಾರೋಹಣ, ಕಲ್ಯಾಣೋತ್ಸವ. 13 ರಂದು ರಾತ್ರಿ ನಾಗವಲ್ಲಿ ಪಲ್ಲಕ್ಕಿ ಉತ್ಸವ, ಶೇಷ ವಾಹನೋತ್ಸವ, 14 ರಂದು ಗೀತಾ ಪಾರಾಯಣ, ರಾತ್ರಿ ಹನುಮಂತೋತ್ಸವ, ಧ್ವಜಾರೋಹಣೋತ್ಸವ, 15 ರಂದು ಸಂಜೆ ಪುಷ್ಪ ಮಂಟಪ ಗಜೇಂದ್ರ ಮೋಕ್ಷ , ರಾತ್ರಿ ಚೆನ್ನಗರುಡೋತ್ಸವ ನಡೆಯಲಿವೆ.

16 ರ ಬೆಳಗ್ಗೆ 9.30 ಕ್ಕೆ ಶ್ರೀಕೃಷ್ಣ ಗಂಧೋತ್ಸವ, ವಸಂತ ಸೇವೆ, ತೋಮಾಲೆ ಸೇವೆ, ಪುಷ್ಪಾಲಂಕಾರ ಮಂಟಪ ಸೇವೆ, ಮಧ್ಯಾಹ್ನ 12 ಗಂಟೆಗೆ ಬ್ರಹ್ಮ ರಥೋತ್ಸವ, ಸಂಜೆ 6 ಗಂಟೆಗೆ ಕುಂಕುಮೋತ್ಸವ,17 ರಂದು ರಾತ್ರಿ ಕುದುರೆ ಉತ್ಸವ, 18 ರ ಬೆಳಗ್ಗೆ 10 ಗಂಟೆಗೆ ಶ್ರೀ ಲಕ್ಷ್ಮೀ ಪ್ರಣಯ ಕಲಹ ಸಂಧಾನ ಸೇವೆ ಮತ್ತು ಅವಭೃತ ಸ್ನಾನ, ಆಂಡಾಳ್‌ ಗೋಷ್ಠಿ ಪ್ರಬಂಧ ಪಾರಾಯಣ, ಪೂರ್ಣಾಹುತಿ ಪುಷ್ಪಯಾಗ, 19 ರಂದು ಬೆಳಗ್ಗೆ 9 ಗಂಟೆಗೆ ಮಹಾಭಿಷೇಕ, ರಾತ್ರಿ 7 ಗಂಟೆಗೆ ದಿವ್ಯ ಮೋಹಿನಿ ಉತ್ಸವ ಮತ್ತು ಶಯನೋತ್ಸವ ಜರುಗಲಿವೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ