ಆ್ಯಪ್ನಗರ

ಮಳೆಗೆ ಮತ್ತೊಂದು ಸಾವು

ತಾಲೂಕಿನ ತೊಗರಿಹಂಕಲ್‌ ಸಮೀಪದ ಹೊಸಪೇಟೆ ಕಂಬಿಹಳ್ಳಿಯ ಕಬ್ಬಿಣಸೇತುವೆ ಹಳ್ಳದಲ್ಲಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಮಳೆಯಿಂದ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿದೆ.

Vijaya Karnataka 22 Aug 2019, 5:00 am
ಚಿಕ್ಕಮಗಳೂರು : ತಾಲೂಕಿನ ತೊಗರಿಹಂಕಲ್‌ ಸಮೀಪದ ಹೊಸಪೇಟೆ ಕಂಬಿಹಳ್ಳಿಯ ಕಬ್ಬಿಣಸೇತುವೆ ಹಳ್ಳದಲ್ಲಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಮಳೆಯಿಂದ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿದೆ.
Vijaya Karnataka Web another death in the rain
ಮಳೆಗೆ ಮತ್ತೊಂದು ಸಾವು


ಹಳೆ ಶಾಂತಿಪುರ ಗ್ರಾಮದ ಕಮಲಮ್ಮ (65) ಮೃತಪಟ್ಟವರು. ಆ.17ರಂದು ಮಗನ ಮನೆಯಿಂದ ಹೊರ ಹೋಗಿದ್ದ ಕಮಲಮ್ಮ ವಾಪಸಾಗಿರಲಿಲ್ಲ. ಈ ಬಗ್ಗೆ ಮಂಗಳವಾರ ಗ್ರಾಮಾಂತರ ಠಾಣೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಬುಧವಾರ ಕಬ್ಬಿಣಸೇತುವೆ ಹಳ್ಳದುದ್ದಕ್ಕೂ ಹುಡುಕಿದಾಗ ಕಮಲಮ್ಮ ಅವರ ಮೃತದೇಹ ಪತ್ತೆಯಾಗಿದೆ. ಹಳ್ಳ ದಾಟುವಾಗ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವುದಾಗಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ತಹಸೀಲ್ದಾರ್‌ ನಂದಕುಮಾರ್‌ ಭೇಟಿ ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ