ಆ್ಯಪ್ನಗರ

ಅಡಕೆ ಆಮದು ನಿಯಮ ಕಠಿಣ ಸ್ವಾಗತಾರ್ಹ

ಅಡಕೆ ಆಮದು ನಿಯಮಗಳನ್ನು ಕೇಂದ್ರ ಸರಕಾರ ಕಠಿಣ ಮಾಡಿರುವುದು ಸ್ವಾಗತಾರ್ಹ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Vijaya Karnataka 29 Jul 2018, 5:00 am
ಚಿಕ್ಕಮಗಳೂರು : ಅಡಕೆ ಆಮದು ನಿಯಮಗಳನ್ನು ಕೇಂದ್ರ ಸರಕಾರ ಕಠಿಣ ಮಾಡಿರುವುದು ಸ್ವಾಗತಾರ್ಹ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Vijaya Karnataka Web areconet implementation rule is a tough welcome
ಅಡಕೆ ಆಮದು ನಿಯಮ ಕಠಿಣ ಸ್ವಾಗತಾರ್ಹ


ರಾಜ್ಯದ ಅಡಕೆ ಬೆಳೆಗಾರರಿಗೆ ನೆಮ್ಮದಿ ನೀಡುವ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರಕಾರ, ವಿದೇಶಿ ಅಡಕೆ ಆಮದಿಗೆ ಈಗಿರುವ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸುವ ಮೂಲಕ ಕೇಂದ್ರ ವಾಣಿಜ್ಯ ಇಲಾಖೆ ಕೆ.ಜಿ.ಯೊಂದಕ್ಕೆ 251ಕ್ಕಿಂತ ಕಡಿಮೆ ದರದ ಅಡಕೆ ಆಮದಿಗೆ ಸಂಪೂರ್ಣ ನಿಷೇಧ ಹೇರಿದೆ ಎಂದಿದ್ದಾರೆ.

ಅಡಕೆ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ. ಈಗಾಗಲೇ ಬೆಳೆ ನಷ್ಟದಿಂದ ಕಂಗೆಟ್ಟಿರುವ ಸ್ಥಳೀಯ ಅಡಕೆ ಬೆಳೆಗಾರರು ಬೆಳೆದ ಅಡಕೆಗೆ ಕೇಂದ್ರ ಸರಕಾರದ ಈ ನಿರ್ಧಾರದಿಂದ ಬೇಡಿಕೆ ಹೆಚ್ಚಾಗಲಿದೆ. ಗುಣಮಟ್ಟದಲ್ಲೂ ಉತ್ತಮವಾಗಿರುವ ಸ್ಥಳೀಯ ಅಡಕೆಯ ಲಭ್ಯತೆಯಿಂದ ಗ್ರಾಹಕರಿಗೂ ಉತ್ತಮ ಗುಣಮಟ್ಟದ ಅಡಕೆ ದೊರೆಯಲಿದೆ ಎಂದು ಹೇಳಿದ್ದಾರೆ.

ಮತ್ತೊಂದು ಪ್ರಮುಖ ವಾಣಿಜ್ಯ ಬೆಳೆ ಕಾಳುಮೆಣಸಿಗೂ ಇದೇ ರೀತಿ ಕಠಿಣ ನಿಯಮವನ್ನು ಕೇಂದ್ರ ಸರಕಾರ ವಿಧಿಸಿದೆ. 500ರೂ.ಗಳಿಗಿಂತ ಕಡಿಮೆ ಬೆಲೆಯ ಕಾಳುಮೆಣಸಿನ ಆಮದಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಇದರಿಂದ ಕಾಳುಮೆಣಸು ಬೆಳೆಗಾರರು ಕೂಡ ನಿಟ್ಟುಸಿರು ಬಿಡುವಂತಾಗಿದೆ ಎಂದಿದ್ದಾರೆ.

ಕೆಲ ದಿನಗಳ ಹಿಂದೆ ತಾವು ಅಡಕೆ, ಕಾಳುಮೆಣಸು, ಕಾಫಿ ಬೆಳೆಗಾರ ಪ್ರತಿನಿಧಿಗಳೊಂದಿಗೆ ಕೇಂದ್ರ ವಾಣಿಜ್ಯ ಸಚಿವ ಸುರೇಶ್‌ ಪ್ರಭು ಅವರನ್ನು ಭೇಟಿ ಮಾಡಿದ್ದು, ಫಲ ನೀಡಿದೆ. ಬೆಳೆಗಾರರ ಸಂಕಷ್ಟ ಅರ್ಥ ಮಾಡಿಕೊಂಡಿರುವ ಸಚಿವರು ವಿವಿಧ ವಾಣಿಜ್ಯ ಬೆಳೆಗಳಿಗೆ ಪ್ರೋತ್ಸಾಹಕ ಕ್ರಮ ಕೈಗೊಂಡು ಸಂಕಷ್ಟ ನಿವಾರಣೆಗೆ ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ