ಆ್ಯಪ್ನಗರ

ಕಲಾ ಸೇವೆಗೆ ಪ್ರೋತ್ಸಾಹ ಅಗತ್ಯ

ಅಂತಾರಾಷ್ಟ್ರೀಯ ಸಂಸ್ಥೆಯಾದ ರೋಟರಿ ಕ್ಲಬ್‌ ಸಮಾಜದಲ್ಲಿ ನಾನಾ ರೀತಿಯ ಸೇವೆ ಮಾಡಿಕೊಂಡು ಬಂದಿದ್ದು, ಸ್ಥಳೀಯ ಸಮಸ್ಯೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ರೋಟರಿ ಕ್ಲಬ್‌ ಅಧ್ಯಕ್ಷ ಡಾ.ನಿರಂಜನಕುಮಾರ್‌ ಹೇಳಿದರು.

Vijaya Karnataka 16 Jul 2019, 5:00 am
ಶೃಂಗೇರಿ : ಅಂತಾರಾಷ್ಟ್ರೀಯ ಸಂಸ್ಥೆಯಾದ ರೋಟರಿ ಕ್ಲಬ್‌ ಸಮಾಜದಲ್ಲಿ ನಾನಾ ರೀತಿಯ ಸೇವೆ ಮಾಡಿಕೊಂಡು ಬಂದಿದ್ದು, ಸ್ಥಳೀಯ ಸಮಸ್ಯೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ರೋಟರಿ ಕ್ಲಬ್‌ ಅಧ್ಯಕ್ಷ ಡಾ.ನಿರಂಜನಕುಮಾರ್‌ ಹೇಳಿದರು.
Vijaya Karnataka Web CKM-15SRI2


ಪಟ್ಟಣದ ಜಿಎಸ್‌ಬಿ ಸಭಾಭವನದಲ್ಲಿ ಭಾನುವಾರ ಶ್ರೀ ವೆಂಕಟೇಶ್ವರ ಕಲಾ ಸಂಘ ಏರ್ಪಡಿಸಿದ್ದ ತಾಳಮದ್ದಲೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ಥಳೀಯ ಕಲಾ ಪ್ರಕಾರಗಳಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಕಲಾ ಸೇವೆಯೂ ಒಂದು ಸೇವೆ ಎಂದು ಸಂಸ್ಥೆಯು ಪರಿಗಣಿಸುತ್ತಿದೆ. ನಾನಾ ವೃತ್ತಿಗಳ ಕಲೆಗಳ ಕೌಶಲ್ಯವನ್ನು ಅಭಿವೃದ್ಧಿಪಡಿಸುವುದರ ಜತೆಗೆ ಪ್ರೋತ್ಸಾಹ ನೀಡುವುದು ಉದ್ದೇಶವಾಗಿದೆ. ಯಕ್ಷ ಗಾನದಂತಹ ಶ್ರೇಷ್ಠ ಕಲೆಯ ತರಬೇತಿ ನೀಡುವುದಕ್ಕೆ ರೋಟರಿ ಸಂಸ್ಥೆ ನಿರ್ಧರಿಸಿದೆ ಎಂದರು.

ಪ್ರತಿ ವರ್ಷವೂ ಕಲಾ ಸಂಘದಿಂದ ಮಲೆನಾಡಿನ ಚಂಡೆ ಮತ್ತು ಮದ್ದಳೆ ವಾದಕ ಹಳಕ ರಮೇಶ್‌ ಭಟ್‌ ಸಂಸ್ಮರಣಾರ್ಥವಾಗಿ ತಾಳಮದ್ದಳೆ ಕಾರ್ಯಕ್ರಮವನ್ನು ಹಾಗೂ ಸಂಘದಲ್ಲಿ 25 ವರ್ಷ ಅಧ್ಯಕ್ಷ ರಾಗಿ ಸೇವೆ ಸಲ್ಲಿಸದ ಎದುರುಮನೆ ವೆಂಕಟರಮಣಯ್ಯ ಸ್ಮರಣಾರ್ಥವಾಗಿ ಮಲೆನಾಡಿನ ಕಲಾವಿದರನ್ನು ಗೌರವಿಸುತ್ತಿದೆ. ಈ ಸಾಲಿನಲ್ಲಿ ಬಡಗುತಿಟ್ಟಿನ ಸ್ತ್ರೀ ವೇಷದಾರಿ ನಾಗರಕೊಡಿಗೆ ಶ್ರೀ ನಿವಾಸಭಟ್ಟರನ್ನು ಗೌರವಿಸಿದೆ.

ಸಂಘದ ಅಧ್ಯಕ್ಷ ನಾಗೇಶ್‌ ಕಾಮತ್‌ ಅಧ್ಯಕ್ಷ ತೆ ವಹಿಸಿದ್ದರು. ಶ್ರೀ ಕಂಠಭಟ್ಟ, ಅನುಸೂಯ ಕೃಷ್ಣಮೂರ್ತಿ, ಕೆ.ಎಸ್‌.ವೆಂಕಟೇಶ್‌, ಎಂಎಸ್‌.ಜನಾರ್ಧನ್‌, ಎಂ.ಎಸ್‌.ನರಸಿಂಹಮೂರ್ತಿ ಇದ್ದರು.

ನಂತರ ಭಕ್ತಮಯೂರ ಧ್ವಜ ಎಂಬ ಪೌರಣಿಕ ಪ್ರಸಂಗವನ್ನು ತಾಳಮದ್ದಲೆ ರೂಪದಲ್ಲಿ ಪ್ರಸ್ತುತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ