ಆ್ಯಪ್ನಗರ

ನರೇಂದ್ರ ಮೋದಿ, ಅಮಿತ್ ಶಾ ಆಡಳಿತದಿಂದ ಅನ್ಯಕೋಮಿನವರ ದೌರ್ಜನ್ಯ ತಗ್ಗಿದೆ: ಡಿ.ಎನ್‌ ಜೀವರಾಜ್‌

ಕೆಪಿಸಿಸಿ ಅಧ್ಯಕ್ಷ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರುಗಳ ನಡುವಿನ ಗೊಂದಲಗಳಿಂದ ಹತಾಶೆಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮುಸಲ್ಮಾನರಿರುವ ಪ್ರದೇಶದಲ್ಲಿ ಸಾವರ್ಕರ್‌ ಫೋಟೊ ಏಕೆ ಹಾಕಿದ್ರಿ ಎಂದರೆ ಏನು ಹೇಳೋಕೆ ಆಗುತ್ತೆ. ಫೋಟೊ ಹಾಕಿರುವುದು ಭಾರತದಲ್ಲಿ. ದೇಶ ವಿಭಜನೆಯಾಗಿರುವುದು ಜಾತಿ ಆಧಾರದ ಮೇಲೆ. ಮುಸ್ಲಿಮರಿಗೆ ಪಾಕಿಸ್ತಾನ, ಹಿಂದೂಗಳಿಗೆ ಭಾರತ ಎಂದು. ಇದು ಪಾಕಿಸ್ತಾನವಲ್ಲ, ಹಿಂದೂಸ್ಥಾನ ಎಂದು ಮಾಜಿ ಸಚಿವ ಡಿ.ಎನ್‌ ಜೀವರಾಜ್‌ ಹೇಳಿದರು.

Vijaya Karnataka 28 Aug 2022, 10:17 pm
ಚಿಕ್ಕಮಗಳೂರು: ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದರೆ ದೇಶದಲ್ಲಿ ಒಂದು ಕೋಮಿನವರ ದೌರ್ಜನ್ಯ ಮತ್ತಷ್ಟು ಹೆಚ್ಚಾಗಿರುತ್ತಿತ್ತು. ಮೋದಿ, ಅಮಿತ್‌ ಶಾ ಅವರಿಂದಾಗಿ ಅನ್ಯಕೋಮಿನವರ ದೌರ್ಜನ್ಯ ಕಡಿಮೆಯಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಮಾಜಿ ಸಚಿವ ಡಿ.ಎನ್‌ ಜೀವರಾಜ್‌ ಹೇಳಿದರು.
Vijaya Karnataka Web DN Jeevaraj


ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಈ ಬಾರಿ ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಗೆಲುವು ಸಾಧಿಸುತ್ತದೆ. ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಐದನ್ನೂ ಬಿಜೆಪಿ ಗೆಲ್ಲಲಿದೆ. ಈ ಮೂಲಕ ಮತ್ತೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದೇವೆ. ರಾಜ್ಯದಲ್ಲಿ ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಮಾಡಿರುವ ಅಭಿವೃದ್ಧಿ ಕೆಲಸ ಹಾಗೂ ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಜನಪರ ಕೆಲಸಗಳನ್ನು ನೋಡಿ ಜನ ಬಿಜೆಪಿಗೆ ವೋಟು ನೀಡುತ್ತಾರೆ. ಬಿಜೆಪಿ ದೇಶಕ್ಕೆ ಬೇಕಿದೆ ಎಂದರು.
Savarkar: ವಿಘ್ನ ನಿವಾರಕ ವಿನಾಯಕನಿಗೂ ಸಾವರ್ಕರ್‌ಗೂ ಏನು ಸಂಬಂಧ? ಡಿ. ಕೆ. ಶಿವಕುಮಾರ್ ಪ್ರಶ್ನೆ
ಅನ್ಯಕೋಮಿನವರ ದೌರ್ಜನ್ಯಕ್ಕೆ ಕಡಿವಾಣ ಹಾಕುವ ಶಕ್ತಿ ಇರುವುದು ಬಿಜೆಪಿಗೆ ಮಾತ್ರ ಎಂಬುದು ದೇಶದ ಜನರಿಗೆ ತಿಳಿದಿದೆ. ಈ ಕಾರಣ ಹಾಗೂ ರಾಜ್ಯ, ದೇಶದಲ್ಲಿ ಬಿಜೆಪಿ ಸರಕಾರಗಳು ಮಾಡಿರುವ ಎಲ್ಲ ಅಭಿವೃದ್ಧಿ ಕೆಲಸಗಳು ಹಾಗೂ ದೇಶದ ಭದ್ರತೆಯ ದೃಷ್ಟಿಯಿಂದ ಮತದಾರರು ಮುಂದಿನ ಬಾರಿ ಬಿಜೆಪಿಗೆ ಮತ ಹಾಕುತ್ತಾರೆ ಎಂದರು.

ಕೆಪಿಸಿಸಿ ರಾಜ್ಯಾಧ್ಯಕ್ಷ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರುಗಳ ನಡುವಿನ ಗೊಂದಲಗಳಿಂದ ಹತಾಶೆಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮುಸಲ್ಮಾನರಿರುವ ಪ್ರದೇಶದಲ್ಲಿ ಸಾವರ್ಕರ್‌ ಫೋಟೊ ಏಕೆ ಹಾಕಿದ್ರಿ ಎಂದರೆ ಏನು ಹೇಳೋಕೆ ಆಗುತ್ತೆ. ಫೋಟೊ ಹಾಕಿರುವುದು ಭಾರತದಲ್ಲಿ. ದೇಶ ವಿಭಜನೆಯಾಗಿರುವುದು ಜಾತಿ ಆಧಾರದ ಮೇಲೆ. ಮುಸ್ಲಿಮರಿಗೆ ಪಾಕಿಸ್ತಾನ, ಹಿಂದೂಗಳಿಗೆ ಭಾರತ ಎಂದು. ಇದು ಪಾಕಿಸ್ತಾನವಲ್ಲ, ಹಿಂದೂಸ್ಥಾನ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ