ಆ್ಯಪ್ನಗರ

ಕಡೂರು: ಖಾಸಗಿ ಕ್ಲಿನಿಕ್‌ಗಳ ಮೇಲೆ ದಾಳಿ

ಕೆಲವು ಖಾಸಗಿ ಕ್ಲಿನಿಕ್‌ ಮತ್ತು ಪ್ರಯೋಗಾಲಯಗಳ ಮೇಲೆ ತಾಲೂಕು ವೈದ್ಯಾಧಿಕಾರಿ ಡಾ.ಪಿ.ಕೆ.ಹರೀಶ್‌ ದಾಳಿ ನಡೆಸಿ, ಔಷಧ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಜಿಲ್ಲಾ ತ್ರೈಮಾಸಿಕ ಸಭೆಯಲ್ಲಿಈ ಬಗ್ಗೆ ಉಸ್ತುವಾರಿ ಸಚಿವರು ಮತ್ತು ಶಾಸಕರು ಆರೋಪಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಾಲೂಕು ವೈದ್ಯಾಧಿಕಾರಿ ಹರೀಶ್‌, ಪಟ್ಟಣ ಮತ್ತು ಯಗಟಿಯ ಖಾಸಗಿ ಕ್ಲಿನಿಕ್‌ಗಳ ಪರಿಶೀಲನೆ ನಡೆಸಿದರು.

Vijaya Karnataka Web 8 Mar 2020, 3:26 pm
ಕಡೂರು: ಪಟ್ಟಣ ಮತ್ತು ಗ್ರಾಮಾಂತರ ಭಾಗದ ಕೆಲವು ಖಾಸಗಿ ಕ್ಲಿನಿಕ್‌ ಮತ್ತು ಪ್ರಯೋಗಾಲಯಗಳ ಮೇಲೆ ತಾಲೂಕು ವೈದ್ಯಾಧಿಕಾರಿ ಡಾ.ಪಿ.ಕೆ.ಹರೀಶ್‌ ದಾಳಿ ನಡೆಸಿ, ಔಷಧ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇತ್ತೀಚೆಗೆ ಜಿಲ್ಲಾ ತ್ರೈಮಾಸಿಕ ಸಭೆಯಲ್ಲಿಈ ಬಗ್ಗೆ ಉಸ್ತುವಾರಿ ಸಚಿವರು ಮತ್ತು ಶಾಸಕರು ಆರೋಪಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಾಲೂಕು ವೈದ್ಯಾಧಿಕಾರಿ ಹರೀಶ್‌, ಪಟ್ಟಣ ಮತ್ತು ಯಗಟಿಯ ಖಾಸಗಿ ಕ್ಲಿನಿಕ್‌ಗಳ ಪರಿಶೀಲನೆ ನಡೆಸಿದರು.
Vijaya Karnataka Web private hospital


ಯಗಟಿಯ ಕ್ಲಿನಿಕ್‌ಗೆ ಶನಿವಾರ ಬೆಳಗ್ಗೆ ಭೇಟಿ ಕೊಟ್ಟ ವೈದ್ಯಾಧಿಕಾರಿ ಅಲ್ಲಿದ್ದ ಇಂಜಕ್ಷನ್‌ ಟ್ಯೂಬ್‌, ಔಷಧ, ಮಾತ್ರೆಗಳು ಮತ್ತಿತರ ಪದಾರ್ಥಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲಿನ ವೈದ್ಯರಿಗೆ ನಿಯಮಬಾಹಿರವಾಗಿ ಔಷಧ ಸಂಗ್ರಹಿಸಿಡುವುದಾಗಲೀ, ಮಾರಾಟ ಮಾಡುವುದಾಗಲೀ ತಪ್ಪು ಎಂದು ಎಚ್ಚರಿಸಿದರು. ನಂತರ ಅದೇ ಗ್ರಾಮದ ಮತ್ತೊಂದು ಕ್ಲಿನಿಕ್‌ಗೆ ಭೇಟಿ ನೀಡಿದಾಗ, ಅಲ್ಲಿ ವೈದ್ಯರ ಕಾರಿನ ಡಿಕ್ಕಿಯಲ್ಲಿ ಮಾತ್ರೆ, ಇಂಜೆಕ್ಷನ್‌ ಮತ್ತಿತರ ಔಷಧದ ರಾಶಿಯೇ ಕಂಡುಬಂತು. ಬಳಿಕ ಕ್ಲಿನಿಕ್‌ನೊಳಗೆ ತೆರಳಿದ ವೈದ್ಯಾಧಿಕಾರಿಗೆ ಅಲ್ಲಿ ರೋಗಿಗಳಿಗೆ ಗ್ಲೂಕೋಸ್‌ ಹಾಕುವುದು, ಇಂಜೆಕ್ಷನ್‌ ಕೊಡುವುದು ಮತ್ತಿತರ ಚಟುವಟಿಕೆ ಕಂಡು ಬೆರಗಾದರು. ಕೆಲವು ಔಷಧಗಳನ್ನು ನೀಡುವ ಹಾಗಿಲ್ಲದಿದ್ದರೂ ರೋಗಿಗಳಿಗೆ ಕೊಡುತ್ತಿರುವುದರ ಬಗ್ಗೆ ಪ್ರಶ್ನಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಎರಡೂ ಕ್ಲಿನಿಕ್‌ಗಳ ವೈದ್ಯರು ಆಯುರ್ವೇದ ಪದ್ಧತಿಯ ಔಷಧವನ್ನು ರೋಗಿಗಳಿಗೆ ನೀಡುವ ಅರ್ಹತೆ ಹೊಂದಿದ್ದಾರೆ. ಆದರೆ, ಇವರು ಇಂಗ್ಲಿಷ್‌ ವೈದ್ಯ ಪದ್ಧತಿಯ ಔಷಧ ನೀಡುತ್ತಿದ್ದು, ನಿಯಮಾನುಸಾರ ಇವರ ಕ್ಲಿನಿಕ್‌ಗಳು ನಡೆಯ ದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದರು. ಇದಕ್ಕೂ ಮುನ್ನ ಶುಕ್ರವಾರ ಸಂಜೆ ವೈದ್ಯಾಧಿಕಾರಿ ಹರೀಶ್‌, ಪಟ್ಟಣದ ಎಮ್ಮೆದೊಡ್ಡಿ ರಸ್ತೆಯ ಕ್ಲಿನಿಕ್‌ ಮತ್ತು ಯುನಾನಿ ಪದ್ಧತಿಯ ಕ್ಲಿನಿಕ್‌ಗೆ ಭೇಟಿ ನೀಡಿ ಅವರಿಗೂ ಎಚ್ಚರಿಕೆ ನೀಡಿದ್ದರು. ಯುನಾನಿ ಪದ್ಧತಿಯ ಕ್ಲಿನಿಕ್‌ನಲ್ಲಿ ತರಬೇತಿ ಪಡೆಯದ ಮಹಿಳೆಯೊಬ್ಬರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಅಂಶ ಬೆಳಕಿಗೆ ಬಂದಿತ್ತು.

ಈ ಸಂದರ್ಭ ತಾಲೂಕು ವೈದ್ಯಾಧಿಕಾರಿಗಳ ಕಚೇರಿ ಪ್ರಥಮ ದರ್ಜೆ ಸಹಾಯಕ ಮಲ್ಲಿಕಾ ರ್ಜುನ್‌, ಕೋದಂಡರಾಮ್‌ ಹಾಗೂ ಯಗಟಿ ಪಿಎಸ್‌ಐ ಮಂಜುಳಾಬಾಯಿ, ಎಎಸ್‌ಐ ಕುಮಾರನಾಯ್ಕ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ