ತರೀಕೆರೆ : ಪಟ್ಟಣದ ಅಪರ ಸರಕಾರಿ ವಕೀಲ ಎಸ್.ಸುರೇಶ್ಚಂದ್ರ ಅವರ ಮೇಲೆ ಸೋಮವಾರ ಸಂಜೆ ನಡೆದ ಹಲ್ಲೆಪ್ರಕರಣಕ್ಕೆ ಸಂಬಂಧಿಸಿದಂತ ಮಂಗಳವಾರ ಪಟ್ಟಣದ ವಕೀಲರ ಸಂಘದಲ್ಲಿಪ್ರತಿಭಟನಾ ಸಭೆ ನಡೆಯಿತು.
ಸಭೆಯಲ್ಲಿಮಾತನಾಡಿದ ಹಿರಿಯ ವಕೀಲ ಕೆ.ಲಿಂಗರಾಜು ಹಲ್ಲೆಯ ಹಿಂದಿನ ಸತ್ಯ ತಿಳಿಯಬೇಕಿದೆ. ಆದಷ್ಟು ಬೇಗ ಪೋಲಿಸರು ಪ್ರಕಣವನ್ನು ಬೇಧಿಸಿ ಆರೋಪಿಗಳನ್ನು ಬಂಧಿಸುವ ಕೆಲಸವಾಗಬೇಕಿದೆ. ಇಂತಹ ಘಟನೆಗಳಿಂದ ವಕೀಲರು ಕರ್ತವ್ಯ ಮಾಡಲು ಭಯಬೀಳುವಂತಾಗಿದೆ ಎಂದು ಹೇಳಿದರು.
ವಕೀಲ ಎಂ.ಕೆ.ತೇಜಮೂರ್ತಿ ಮಾತನಾಡಿ, ವೈಷಮ್ಯದಿಂದ ಮಾಡಿರುವ ಹಲ್ಲೆಪ್ರಕರಣ ಇದು ಸರಿಯಾದ ರೀತಿಯಲ್ಲಿತನಿಖೆಯಾಗಬೇಕಿದೆ, ಶೀಘ್ರ ಆರೋಪಿಗಳನ್ನು ಬಂಧಿಸಿ ಮುಂದೆ ಇಂತಹ ಪ್ರಕರಣಗಳು ಆಗದಂತೆ ನೋಡಿಕೊಳ್ಳಬೇಕಿದೆ ಎಂದು ಹೇಳಿದರು.
ವಕೀಲ ಎಸ್.ಎನ್.ಮಲ್ಲೇಗೌಡ ಮಾತನಾಡಿ, ನ್ಯಾಯಾಲಯದ ಸುತ್ತಮುತ್ತ ಸಿಸಿಟಿವಿ ಅಳವಡಿಕೆಯಾಗಬೇಕಿದೆ. ನ್ಯಾಯಾಲಯದ ಮುಂಭಾಗ ಗೇಟ್ ಬಳಿ ಯಾವುದೇ ಬೆಳಕಿನ ವ್ಯವಸ್ಥೆ ಇಲ್ಲದಿರುವುದು ಇಂತಹ ಕೃತ್ಯಗಳಿಗೆ ಕಾರಣವಾಗಿದೆ ಎಂದು ಹೇಳಿದರು. ಹಿರಿಯ ವಕೀಲ ಟಿ.ಕೆ.ನಂದಿಶ್ವರಯ್ಯ ಮಾತನಾಡಿ ಇಂತಹ ಪ್ರಕರಣಗಳು ಮರುಕಳಿಸಬಾರದು, ಕೂಡಲೆ ಪೋಲಿಸರು ಸೂಕ್ತ ಕ್ರಮವಹಿಸಬೇಕು ಎಂದು ಹೇಳಿದರು.
ವಕೀಲರುಗಳು ಮೆರವಣಿಗೆ ಮೂಲಕ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದು,ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಧರ್ಮೋಜಿರಾವ್ ಇಂತಹ ಪ್ರಕರಣಗಳು ಮರುಕಳಿಸಬಾರದು, ಸೂಕ್ತ ಕ್ರಮಕೈಗೊಂಡು ಆರೋಪಿಗಳನ್ನು ಬಂಧಿಸುವಂತೆ ಪೋಲಿಸರಿಗೆ ಸೂಚಿಸುವುದಾಗಿ ತಿಳಿಸಿದರು. ವಕೀಲರ ಸಂಘದ ಪಧಾಧಿಕಾರಿಗಳು, ವಕೀಲರು ಹಾಜರಿದ್ದರು.
------------
ಇದೊಂದು ಅಮಾನವೀಯ ಘಟನೆ, ಈ ಘಟನೆಯನ್ನು ಖಂಡಿಸಿ ವಕೀಲರು ಇಂದಿನ ನ್ಯಾಯಾಲಯ ಕಲಾಪಗಳಿಂದ ದೂರ ಉಳಿದಿದ್ದಾರೆ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
-ಟಿ.ಎನ್.ಮಹದೇವಸ್ವಾಮಿ , ವಕೀಲರ ಸಂಘದ ಅಧ್ಯಕ್ಷ
ಸಭೆಯಲ್ಲಿಮಾತನಾಡಿದ ಹಿರಿಯ ವಕೀಲ ಕೆ.ಲಿಂಗರಾಜು ಹಲ್ಲೆಯ ಹಿಂದಿನ ಸತ್ಯ ತಿಳಿಯಬೇಕಿದೆ. ಆದಷ್ಟು ಬೇಗ ಪೋಲಿಸರು ಪ್ರಕಣವನ್ನು ಬೇಧಿಸಿ ಆರೋಪಿಗಳನ್ನು ಬಂಧಿಸುವ ಕೆಲಸವಾಗಬೇಕಿದೆ. ಇಂತಹ ಘಟನೆಗಳಿಂದ ವಕೀಲರು ಕರ್ತವ್ಯ ಮಾಡಲು ಭಯಬೀಳುವಂತಾಗಿದೆ ಎಂದು ಹೇಳಿದರು.
ವಕೀಲ ಎಂ.ಕೆ.ತೇಜಮೂರ್ತಿ ಮಾತನಾಡಿ, ವೈಷಮ್ಯದಿಂದ ಮಾಡಿರುವ ಹಲ್ಲೆಪ್ರಕರಣ ಇದು ಸರಿಯಾದ ರೀತಿಯಲ್ಲಿತನಿಖೆಯಾಗಬೇಕಿದೆ, ಶೀಘ್ರ ಆರೋಪಿಗಳನ್ನು ಬಂಧಿಸಿ ಮುಂದೆ ಇಂತಹ ಪ್ರಕರಣಗಳು ಆಗದಂತೆ ನೋಡಿಕೊಳ್ಳಬೇಕಿದೆ ಎಂದು ಹೇಳಿದರು.
ವಕೀಲ ಎಸ್.ಎನ್.ಮಲ್ಲೇಗೌಡ ಮಾತನಾಡಿ, ನ್ಯಾಯಾಲಯದ ಸುತ್ತಮುತ್ತ ಸಿಸಿಟಿವಿ ಅಳವಡಿಕೆಯಾಗಬೇಕಿದೆ. ನ್ಯಾಯಾಲಯದ ಮುಂಭಾಗ ಗೇಟ್ ಬಳಿ ಯಾವುದೇ ಬೆಳಕಿನ ವ್ಯವಸ್ಥೆ ಇಲ್ಲದಿರುವುದು ಇಂತಹ ಕೃತ್ಯಗಳಿಗೆ ಕಾರಣವಾಗಿದೆ ಎಂದು ಹೇಳಿದರು. ಹಿರಿಯ ವಕೀಲ ಟಿ.ಕೆ.ನಂದಿಶ್ವರಯ್ಯ ಮಾತನಾಡಿ ಇಂತಹ ಪ್ರಕರಣಗಳು ಮರುಕಳಿಸಬಾರದು, ಕೂಡಲೆ ಪೋಲಿಸರು ಸೂಕ್ತ ಕ್ರಮವಹಿಸಬೇಕು ಎಂದು ಹೇಳಿದರು.
ವಕೀಲರುಗಳು ಮೆರವಣಿಗೆ ಮೂಲಕ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದು,ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಧರ್ಮೋಜಿರಾವ್ ಇಂತಹ ಪ್ರಕರಣಗಳು ಮರುಕಳಿಸಬಾರದು, ಸೂಕ್ತ ಕ್ರಮಕೈಗೊಂಡು ಆರೋಪಿಗಳನ್ನು ಬಂಧಿಸುವಂತೆ ಪೋಲಿಸರಿಗೆ ಸೂಚಿಸುವುದಾಗಿ ತಿಳಿಸಿದರು. ವಕೀಲರ ಸಂಘದ ಪಧಾಧಿಕಾರಿಗಳು, ವಕೀಲರು ಹಾಜರಿದ್ದರು.
------------
ಇದೊಂದು ಅಮಾನವೀಯ ಘಟನೆ, ಈ ಘಟನೆಯನ್ನು ಖಂಡಿಸಿ ವಕೀಲರು ಇಂದಿನ ನ್ಯಾಯಾಲಯ ಕಲಾಪಗಳಿಂದ ದೂರ ಉಳಿದಿದ್ದಾರೆ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
-ಟಿ.ಎನ್.ಮಹದೇವಸ್ವಾಮಿ , ವಕೀಲರ ಸಂಘದ ಅಧ್ಯಕ್ಷ