ಆ್ಯಪ್ನಗರ

ಪದೇಪದೆ ದೂರು ದಾಖಲಿಸದಂತೆ ಆಟೊ ಚಾಲಕರ ಮನವಿ

ಪಟ್ಟಣ ವ್ಯಾಪ್ತಿಯಲ್ಲಿ ಆಟೊ ಚಾಲಕರ ಮೇಲೆ ಪೊಲೀಸರು ಪದೇ ಪದೆ ದೂರು ದಾಖಲಿಸುವುದನ್ನು ನಿಲ್ಲಿಸುವಂತೆ ಕೋರಿ ಆಟೊ ಚಾಲಕರ ಮತ್ತು ಮಾಲೀಕರ ಸಂಘದ ಸದಸ್ಯರು ಶುಕ್ರವಾರ ಎಸ್ಸೈ ಪುಟ್ಟೇಗೌಡರ ಮೂಲಕ ಎಸ್ಪಿಗೆ ಮನವಿ ನೀಡಿದರು.

Vijaya Karnataka 9 Jul 2019, 5:00 am
ಕೊಪ್ಪ : ಪಟ್ಟಣ ವ್ಯಾಪ್ತಿಯಲ್ಲಿ ಆಟೊ ಚಾಲಕರ ಮೇಲೆ ಪೊಲೀಸರು ಪದೇ ಪದೆ ದೂರು ದಾಖಲಿಸುವುದನ್ನು ನಿಲ್ಲಿಸುವಂತೆ ಕೋರಿ ಆಟೊ ಚಾಲಕರ ಮತ್ತು ಮಾಲೀಕರ ಸಂಘದ ಸದಸ್ಯರು ಶುಕ್ರವಾರ ಎಸ್ಸೈ ಪುಟ್ಟೇಗೌಡರ ಮೂಲಕ ಎಸ್ಪಿಗೆ ಮನವಿ ನೀಡಿದರು.
Vijaya Karnataka Web CKM-6KPH7


ಮನವಿಯಲ್ಲಿ ಪೊಲೀಸರು ಸಂಚಾರಿ ನಿಯಮದ ಪಾಲನೆ ನೆಪದಲ್ಲಿ ಆಟೊ ಚಾಲಕರ ಮೇಲೆ ಸಣ್ಣ ಪುಟ್ಟ ವಿಷಯಕ್ಕೆ ಪದೇಪದೆ ದೂರು ದಾಖಲಿಸುತ್ತಿದೆ. ಕೆಲವರ ವಾಹನ ಚಾಲನೆ ಪರವಾನಗಿ ರದ್ದು ಪಡಿಸಲು ಶಿಫಾರಸ್ಸು ಮಾಡುತ್ತಿದೆ. ಅಟೊ ಚಾಲಕರು ಈವರೆಗೆ ತಮ್ಮ ಅಲ್ಪ ಆದಾಯದಲ್ಲಿ ಹತ್ತು ಹಲವು ಸಮಾಜಮುಖಿ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದು, ಅಪರಾಧ ಪ್ರಕರಣ ತಡೆಗಟ್ಟುವಲ್ಲಿ ಪೊಲೀಸರಿಗೆ ಸಹಕರಿಸುತ್ತಿದ್ದಾರೆ. ಇತ್ತೀಚೆಗೆ ವಾಹನ ವಿಮೆ, ಎಫ್‌.ಸಿ.ದರ ಹೆಚ್ಚಿರುವ ಪರಿಣಾಮ ಅವರ ಜೀವನ ನಿರ್ವಹಣೆ ದುಸ್ತರವಾಗಿದೆ. ಇಲಾಖೆ ಹೀಗೆ ನ್ಯಾಯಾಲಯಕ್ಕೆ ಅವರನ್ನು ಅಲೆದಾಡಿಸಿ, ಪರವಾನಗಿ ರದ್ದು ಪಡಿಸಿದರೆ ಜೀವನ ಸಾಗಿಸಲು ಆಗುವುದಿಲ್ಲ. ಆದ್ದರಿಂದ ಸಣ್ಣಪುಟ್ಟ ತಪ್ಪುಗಳಾದಾಗ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಮಾನವೀಯ ನೆಲೆಯಲ್ಲಿ ವರ್ತಿಸಬೇಕು ಎಂದು ತಿಳಿಸಿದ್ದಾರೆ.

ಸಂಘದ ಅಧ್ಯಕ್ಷ ವಿಜಯಕುಮಾರ್‌, ಕಾರ್ಯದರ್ಶಿ ವಿಕ್ರಂ, ಕ್ಷೇತ್ರಾಧ್ಯಕ್ಷ ಜಗದೀಶ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ