ಆ್ಯಪ್ನಗರ

ನೀರಿನ ಮಿತ ಬಳಕೆಗೆ ಜಾಗೃತಿ ಅಗತ್ಯ

ಹೆಚ್ಚುತ್ತಿರುವ ಜನಸಂಖ್ಯೆ,ಇಳಿಮುಖವಾಗುತ್ತಿರುವ ಮಳೆ ಪ್ರಮಾಣ, ಹವಾಮಾನ ವೈಪರಿತ್ಯವನ್ನು ಅರ್ಥ ಮಾಡಿಕೊಂಡು ನೀರಿನ ಮಿತಬಳಕೆ ಮಾಡಬೇಕು ಎಂದು ಕೇಂದ್ರ ಪರಿಸರ ಇಲಾಖೆ ಸಲಹೆಗಾರ ಜೇಮ್ಸ್‌ ಮ್ಯಾಥ್ಯೂ ಹೇಳಿದರು.

Vijaya Karnataka 17 Jul 2019, 5:00 am
ಚಿಕ್ಕಮಗಳೂರು : ಹೆಚ್ಚುತ್ತಿರುವ ಜನಸಂಖ್ಯೆ,ಇಳಿಮುಖವಾಗುತ್ತಿರುವ ಮಳೆ ಪ್ರಮಾಣ, ಹವಾಮಾನ ವೈಪರಿತ್ಯವನ್ನು ಅರ್ಥ ಮಾಡಿಕೊಂಡು ನೀರಿನ ಮಿತಬಳಕೆ ಮಾಡಬೇಕು ಎಂದು ಕೇಂದ್ರ ಪರಿಸರ ಇಲಾಖೆ ಸಲಹೆಗಾರ ಜೇಮ್ಸ್‌ ಮ್ಯಾಥ್ಯೂ ಹೇಳಿದರು.
Vijaya Karnataka Web CKM-16SHIVUP9


ಕಡೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜಲಶಕ್ತಿ ಅಭಿಯಾನ ಯೋಜನೆ ಅನುಷ್ಠಾನಗೊಳಿಸುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಪ್ರಸ್ತುತ ಪರಿಸ್ಥಿತಿಯಲ್ಲಿ ನೀರಿನ ಮಿತಬಳಕೆ ಬಗ್ಗೆ ಎಲ್ಲರೂ ಜಾಗೃತಿ ಹೊಂದಬೇಕು. ವಿದ್ಯಾರ್ಥಿಗಳಿಗೆ ಈ ಬಗ್ಗೆ ಅರಿವು ಮೂಡಿಸಬೇಕು. ಪ್ರತಿ ಹಳ್ಳಿಗಳಲ್ಲೂ ಜಾಗೃತಿ ಕಾರ‍್ಯಕ್ರಮಗಳು ನಡೆಯಬೇಕು. ಸರಕಾರಿ ಕಟ್ಟಡಗಳು, ಮನೆಗಳಲ್ಲಿ ಮಳೆನೀರು ಕೊಯ್ಲು ಪದ್ಧತಿಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕಿದೆ ಎಂದರು.

ಬರಪೀಡಿತ, ಮಳೆವಂಚಿತ ತಾಲೂಕು ಎಂಬ ಹಣೆಪಟ್ಟಿಯಿಂದ ಕಡೂರು ಹೊರಬರಬೇಕು. ಇದಕ್ಕಾಗಿ ತಾಲೂಕಿನ ಎಲ್ಲ ಕೆರೆಗಳ ಪುನಶ್ಚೇತನ ಮಾಡಬೇಕು. ಕೆರೆಗಳಿಗೆ ಮಳೆನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು. ಗಿಡಗಳನ್ನು ನೆಟ್ಟು ಬೆಳೆಸಬೇಕು. ಪರಿಸರಪೂರಕ ಯೋಜನೆಗಳನ್ನು ರೂಪಿಸಬೇಕು ಎಂದರು.

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಮಾತನಾಡಿ, ಕಡೂರು ತಾಲೂಕಿನಲ್ಲಿ ಜಲಶಕ್ತಿ ಯೋಜನೆ ಜಾರಿಗೆ ಕೇಂದ್ರ ಪರಿಸರ ಇಲಾಖೆ ಉತ್ಸುಕವಾಗಿದೆ. ಜನರೂ ಇದಕ್ಕೆ ಸಹಕಾರ ನೀಡಿದರೆ ಯೋಜನೆ ಯಶಸ್ವಿಯಾಗಲಿದೆ ಎಂದು ಹೇಳಿದರು. ಕೇಂದ್ರ ಸಮಿತಿ ಸದಸ್ಯ, ಹೆಚ್ಚುವರಿ ಮುಖ್ಯ ಎಂಜಿನಿಯರ್‌ ಆರ್‌.ಸುಶೀಲ್‌ ಖಜೂರಿ, ಸದಸ್ಯ ಶ್ರೀನಿವಾಸ ವಿಠಲ್‌, ಜಲಶಕ್ತಿ ಯೋಜನೆ ಮೇಲುಸ್ತುವಾರಿ ಸದಸ್ಯ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ್‌ ಮಾತನಾಡಿದರು. ಜಿ.ಪಂ. ಉಪ ಕಾರ‍್ಯದರ್ಶಿ ರಾಜಗೋಪಾಲ್‌, ತಾ.ಪಂ. ಕಾರ‍್ಯ ನಿರ್ವಹಣಾಧಿಕಾರಿ ದೇವರಾಜ ನಾಯ್ಕ ಹಾಜರಿದ್ದರು.


ಬೋರ್‌ವೆಲ್‌ಗಳಿಗೆ ಮರುಜೀವ?

ಕಡೂರು ತಾಲೂಕಿನ ಯಳ್ಳಂಬಳಸೆ ಗ್ರಾಮದಲ್ಲಿ 350 ಎಕರೆ ಕೆರೆ ಅಭಿವೃದ್ಧಿಗೆ ವೀಕ್ಷಣೆ ಮಾಡಿದ ತಂಡ ಇದನ್ನು ಅಭಿವೃದ್ಧಿಪಡಿಸಿದರೆ ಸುತ್ತಮುತ್ತಲಿನ ಕೆರೆಕಟ್ಟೆ, ಬಾವಿ, ಬೋರ್‌ವೆಲ್‌ಗಳಿಗೆ ಅನುಕೂಲವಾಗಲಿದೆ. ಈ ಭಾಗದಲ್ಲಿ 550ರಿಂದ ಸಾವಿರ ಅಡಿ ಕೊರೆದರೂ ಬೋರ್‌ವೆಲ್‌ಗಳಲ್ಲಿ ನೀರು ಸಿಗುತ್ತಿಲ್ಲ ಎಂದು ಸ್ಥಳೀಯರು ಹೇಳಿದರು. ತಾಂತ್ರಿಕ ಸಲಕರಣೆಗಳ ಮೂಲಕ ಸಮಸ್ಯೆ ನಿವಾರಿಸಲು 90 ದಿನದೊಳಗೆ ಇದರ ಫಲಿತಾಂಶವನ್ನು ಜಿಪಿಎಸ್‌ಗೆ ಅಳವಡಿಸಬೇಕು ಎಂದು ಅಧಿಕಾರಿಗಳು ತಿಳಿಸಿದರು.

---------------

ನಮ್ಮ ಪೂರ್ವಜರು ಹೆಚ್ಚು ಓದಿಲ್ಲದಿದ್ದರೂ ಅವರ ತಾಂತ್ರಿಕ ಅರಿವಿನಿಂದಾಗಿ ಕೆರೆಕಟ್ಟೆ, ಗೋಕಟ್ಟೆ, ಚೆಕ್‌ಡ್ಯಾಂ ಮೂಲಕ ಭೂಮಿಗೆ ನೀರಿಂಗಿಸುವ ಅಂಶ ಅಳವಡಿಸಿಕೊಂಡಿದ್ದರಿಂದ ಅಂತರ್ಜಲ ಇತ್ತು. ವೈಜ್ಞಾನಿಕ ತಂತ್ರಜ್ಞಾನದ ಮೂಲಕ ಈಗಲೂ ನೀರಿಂಗಿಸುವ ಯೋಜನೆ ಮಾಡಿಕೊಳ್ಳದಿದ್ದರೆ ಭವಿಷ್ಯದ ದಿನಗಳು ಸಂಕಷ್ಟ ಉಂಟು ಮಾಡಲಿವೆ.

-ಜೇಮ್ಸ್‌ ಮ್ಯಾಥ್ಯೂ,ಕೇಂದ್ರ ಪರಿಸರ ಇಲಾಖೆ ಸಲಹೆಗಾರ


---------------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ