ಆ್ಯಪ್ನಗರ

ಅಜ್ಜಂಪುರ ಸಾಹಿತ್ಯ, ಸಂಸ್ಕೃತಿಯ ತವರೂರು

ಅಜ್ಜಂಪುರ ಕಲೆ, ಸಾಹಿತ್ಯ, ಸಂಸ್ಕೃತಿ, ರಂಗಭೂಮಿ ತವರೂರು ಎಂದು ಅಜ್ಜಂಪುರ ತಾಲೂಕು ತಹಸೀಲ್ದಾರ್‌ ಹಾಗೂ ತಾಲೂಕು ದಂಡಾಧಿಕಾರಿ ವೈ. ವಿಶ್ವೇಶ್ವರ ರೆಡ್ಡಿ ಬಣ್ಣಿಸಿದರು.

Vijaya Karnataka 14 Feb 2019, 5:00 am
ಅಜ್ಜಂಪುರ : ಅಜ್ಜಂಪುರ ಕಲೆ, ಸಾಹಿತ್ಯ, ಸಂಸ್ಕೃತಿ, ರಂಗಭೂಮಿ ತವರೂರು ಎಂದು ಅಜ್ಜಂಪುರ ತಾಲೂಕು ತಹಸೀಲ್ದಾರ್‌ ಹಾಗೂ ತಾಲೂಕು ದಂಡಾಧಿಕಾರಿ ವೈ. ವಿಶ್ವೇಶ್ವರ ರೆಡ್ಡಿ ಬಣ್ಣಿಸಿದರು.
Vijaya Karnataka Web CKM-13AJP03


ಪಟ್ಟಣದ ತಾಲೂಕು ಕಚೇರಿಯಲ್ಲಿ ಬುಧವಾರ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ನೂತನ ತಾಲೂಕಿನ ಪ್ರಥಮ ತಹಸೀಲ್ದಾರರಾಗಿ ಕೆಳ ಹಂತದಿಂದ ಕೆಲಸ ಪ್ರಾರಂಭಿಸಬೇಕಾಗಿದೆ. ಕೆಲಸ ಮಾಡಲು ನನಗೆ ಹುರುಪಿದೆ. ಇದಕ್ಕೆ ನನ್ನ ಸಹೋದ್ಯೋಗಿಗಳು ಸಹಕರಿಸುತ್ತಿದ್ದಾರೆ. ಇಲ್ಲಿ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ನಾನು ಮಾಡಿರುವ ಕೆಲಸಗಳು ಚಿರಸ್ಥಾಯಿಯಾಗಬೇಕು. ಬಡವರ, ಹಿಂದುಳಿದವರ, ರೈತರ ಕೆಲಸಗಳನ್ನು ಅಲೆದಾಡಿಸದಂತೆ ಕಾರ್ಯನಿರ್ವಹಿಸುತ್ತೇನೆ.

ಮಿನಿ ವಿಧಾನಸೌಧ ಕಚೇರಿ, ಕಟ್ಟಡ ನಿರ್ಮಾಣಕ್ಕೆ ಅಜ್ಜಂಪುರ ಸಮೀಪ ಗೌರಾಪುರ ಗ್ರಾಮದ ಸ.ನಂ. 60ರಲ್ಲಿ 17 ಎಕರೆ ಸರಕಾರಿ ಗೋಮಾಳ ಕಾಯ್ದಿರಿಸಲಾಗಿದೆ. ಸ್ಥಳೀಯರು ಈ ಜಾಗದ ಬಗ್ಗೆ ಪರ-ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆಗಾಗ್ಗೆ ಹಾಕುವ ರೈಲ್ವೇ ಗೇಟ್‌ನಿಂದ ಸಾರ್ವಜನಿಕರಿಗೆ ಈ ಪ್ರದೇಶದಿಂದ ತೊಂದರೆಯಾಗಲಿದೆ. ಅಮೃತಮಹಲ್‌ ತಳಿ ಸಂವರ್ಧನಾ ಕೇಂದ್ರದಲ್ಲಿನ ಮೂಲೆ ಅಂಚಿನಲ್ಲಿರುವ ಸರಕಾರಿ ಜಾಗವನ್ನು ಕಚೇರಿ ಕಟ್ಟಡಕ್ಕೆ ಪಡೆಯಲು ಸ್ಥಳೀಯರು ತೀವ್ರ ಹೋರಾಟ ಮಾಡುತ್ತಿದ್ದಾರೆ. ಇನ್ನುಳಿದಂತೆ ಬೇರೆ ಕಡೆ ಸರಕಾರಿ ಜಾಗ ಸಿಕ್ಕಿದರೆ ಪ್ರಯತ್ನಪಡಲಾಗುವುದು.

ಕೆಎಸ್‌ಆರ್‌ಟಿಸಿ ಮತ್ತು ಅಗ್ನಿ ಶಾಮಕದಳದ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ, ಸರಕಾರಿ ಬಸ್‌ ಡಿಪೋ ಮತ್ತು ಬಸ್‌ ನಿಲ್ದಾಣ ಸ್ಥಾಪಿಸಲು ಸ್ಥಳಾವಕಾಶಕ್ಕೆ ಮನವಿ ಮಾಡಿದ್ದಾರೆ. ಹಾಗೆಯೇ ಈ ಪ್ರಾಂತ್ಯದಲ್ಲಿ ಬೇಸಿಗೆ ಸಮಯದಲ್ಲಿ ಅಗ್ನಿ ಅನಾಹುತ ತಪ್ಪಿಸಲು ಅಗ್ನಿ ಶಾಮಕದಳ ಘಟಕವನ್ನು ಗೌರಾಪುರ ಗ್ರಾಮದ ಸರಕಾರಿ ಜಾಗದಲ್ಲಿ ಪ್ರಾರಂಭಿಸಲು ಜಾಗ ಕೋರಿದ್ದಾರೆ. ಅವರಿಗೆ ಸೂಕ್ತ ಜಾಗವನ್ನು ನೀಡಲಾಗುವುದು. ಫೆ. 23ರಂದು ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ನಡೆಯುವ ಅಜ್ಜಂಪುರ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ನುಡಿ ಹಬ್ಬದ ಜಾತ್ರೆಗೆ ಭಾಗವಹಿಸಲು ಸಂತೋಷವಾಗುತ್ತದೆ ಎಂದರು. ತಾಲೂಕು ಕಸಾಪ ಅಧ್ಯಕ್ಷ ಡಿ.ಪಿ. ರಾಜಪ್ಪ, ಕಾರ್ಯದರ್ಶಿ ಬಿಲ್ಲಳ್ಳಿ ನಾಗರಾಜ್‌, ಎಪಿಎಂಸಿ ಅಧ್ಯಕ್ಷ ಎಂ. ಕೃಷ್ಣಮೂರ್ತಿ, ಜಾನಪದ ಪರಿಷತ್‌ ಅಧ್ಯಕ್ಷ ಎ.ಸಿ. ಚಂದ್ರಪ್ಪ, ಬುಕ್ಕಾಂಬುಧಿ ಎಚ್‌.ಪಿ. ಮಲ್ಲಿಕಾರ್ಜುನ್‌, ಲಿಂಗರಾಜ್‌, ಎಸ್‌. ಪ್ರಹ್ಲಾದ್‌, ಹ. ಪುಟ್ಟಸ್ವಾಮಿ, ಎಸ್‌.ಈ. ರವಿ, ಗೌರಾಪುರದ ನಿವೃತ್ತ ಉಪನ್ಯಾಸಕ ಜಯಮೂರ್ತಿ, ಗಾಯಕ ಎಚ್‌.ಆರ್‌. ಚಂದ್ರಪ್ಪ, ರಂಗಪಯಣದ ಲೋಕೇಶ್‌, ರಾಜಸ್ವ ನಿರೀಕ್ಷ ಕ ಕೃಷ್ಣಮೂರ್ತಿ, ಶಿವನಿ ಕರವೇ ಅಧ್ಯಕ್ಷ ಕಲ್ಲೇಶ್‌ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ