ಆ್ಯಪ್ನಗರ

ಚುನಾವಣೆ ಬಹಿಷ್ಕರಿಸಿದ ನರಸಿಂಹರಾಜಪುರದ ಬಾಳೆ ಗ್ರಾಮ ಪಂಚಾಯಿತಿ ಗ್ರಾಮಸ್ಥರು

ಚಿಕ್ಕಮಗಳೂರಿನ ಬಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಳೇಹಳ್ಳಿ, ವಗ್ಗಡೆ, ಹೆನ್ನಂಗಿ, ಬೆಳ್ಳಂಗಿಯ ಗ್ರಾಮಸ್ಥರು ಅರಣ್ಯ ಕಾಯಿದೆ ವಿರೋಧಿಸಿ, ಮನೆ ಹಕ್ಕು ಪತ್ರ ನೀಡದೆ ಇರುವುದನ್ನು ಖಂಡಿಸಿ ಮೂರು ಕ್ಷೇತ್ರಗಳಿಗೆ ನಾಮ ಪತ್ರ ಸಲ್ಲಿಸದೆ ಚುನಾವಣೆ ಬಹಿಷ್ಕಾರ ಹಾಕಿದ್ದಾರೆ.

Vijaya Karnataka Web 14 Dec 2020, 10:54 pm
ನರಸಿಂಹರಾಜಪುರ: ಬಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಳೇಹಳ್ಳಿ, ವಗ್ಗಡೆ, ಹೆನ್ನಂಗಿ, ಬೆಳ್ಳಂಗಿಯ ಗ್ರಾಮಸ್ಥರು ಅರಣ್ಯ ಕಾಯಿದೆ ವಿರೋಧಿಸಿ, ಮನೆ ಹಕ್ಕು ಪತ್ರ ನೀಡದೆ ಇರುವುದನ್ನು ಖಂಡಿಸಿ ಮೂರು ಕ್ಷೇತ್ರಗಳಿಗೆ ನಾಮ ಪತ್ರ ಸಲ್ಲಿಸದೆ ಚುನಾವಣೆ ಬಹಿಷ್ಕಾರ ಹಾಕಿದ್ದಾರೆ.
Vijaya Karnataka Web Election


ಕಳೆದ ಕೆಲವು ದಿನಗಳಿಂದ ಅಳೇಹಳ್ಳಿ 1, ಅಳೇಹಳ್ಳಿ 2 ಹಾಗೂ ವಗ್ಗಡೆ 1 ಸ್ಥಾನಗಳಿಗೆ ಯಾರೂ ನಾಮ ಪತ್ರ ಸಲ್ಲಿಸದೆ ಚುನಾವಣೆ ಬಹಿಷ್ಕಾರ ಹಾಕಬೇಕು ಎಂದು ಗ್ರಾಮದ ಎಲ್ಲರೂ ಒಟ್ಟಾಗಿ ತೀರ್ಮಾಸಿದ್ದು ಪಕ್ಷ ಭೇದ ಮರೆತು ಯಾವ ಗ್ರಾಮಸ್ಥರು ನಾಮಪತ್ರ ಸಲ್ಲಿಸಲಿಲ್ಲ. ಗ್ರಾಮದ ಮುಖಂಡರು ಗ್ರಾಮ ಪಂಚಾಯಿತಿ ಆವರಣದಲ್ಲೇ ಕಾವಲು ಕಾದಿದ್ದು ಒಂದೂ ನಾಮಪತ್ರ ಸಲ್ಲಿಕೆಯಾಗದಂತೆ ನೋಡಿಕೊಳ್ಳುವಲ್ಲಿ ಯಶಸ್ಸಿಯಾಗಿದ್ದಾರೆ.

ಬಾಳೆ ಗ್ರಾಮ ಪಂಚಾಯಿತಿ ಆವರಣದಲ್ಲೇ ಇದ್ದ ಗ್ರಾಮಸ್ಥರು ಹಾಗೂ ಗ್ರಾಮದ ಮುಖಂಡ ನವೀನ್‌ ಸುದ್ದಿಗಾರರೊಂದಿಗೆ ಮಾತನಾಡಿ, ಅಳೇಹಳ್ಳಿ ಗ್ರಾಮದಲ್ಲಿ1964ರಲ್ಲೇ ಸ.ನಂ 68ರಲ್ಲಿ2 ಸಾವಿರ ಎಕರೆ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಿದ್ದು ಬದಲಿಗೆ 1 ಸಾವಿರ ಎಕರೆ ಅರಣ್ಯ ಭೂಮಿಯನ್ನು ಕಂದಾಯ ಇಲಾಖೆಗೆ ನೀಡಲಾಗಿದೆ.

ಚಿಕ್ಕಮಗಳೂರಿನ ಆಡುವಳ್ಳಿ ಗ್ರಾಮ ಪಂಚಾಯಿತಿಗೆ ಒಂದೂ ನಾಮಪತ್ರ ಇಲ್ಲ!

ಆ ಸರ್ವೆ ನಂಬರಿನಲ್ಲೇ 150ರಿಂದ 200 ಕುಟುಂಬಗಳ ಜಮೀನು ಇದೆ. ಅಲ್ಲದೆ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದೇವೆ. 94 ಸಿ ಅಡಿಯಲ್ಲಿ ಅರ್ಜಿ ನೀಡಿದರೂ ಮನೆ ಮಂಜೂರು ಮಾಡಿಲ್ಲ. ಫಾರಂ ನಂ 50, 53 ಹಾಗೂ 57ರಲ್ಲಿ ಜಮೀನು ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿದರೂ ಜಮೀನು ಮಂಜೂರು ಮಾಡುತ್ತಿಲ್ಲ.

ಅರಣ್ಯ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸಿ 1914ರಿಂದ ಅಲ್ಲೇ ವಾಸವಿದ್ದ ಜಾಗದ ದಾಖಲೆ ನೀಡಿದರೂ ಮಂಜೂರು ಮಾಡಿಲ್ಲ. ಆದರೆ, 2008ರಲ್ಲಿ ಜಾರಿಗೆ ಬಂದ ಹುಲಿ ಯೋಜನೆ ಹಾಗೂ ಇತ್ತೀಚೆಗೆ ಬಂದ ಬಫರ್‌ ಝೋನ್‌ ಕಾನೂನನ್ನು ಅಷ್ಟು ಚುರುಕಾಗಿ ಜಾರಿಗೆ ತಂದು ನಮ್ಮ ಬದುಕನ್ನು ಕಿತ್ತುಕೊಳ್ಳಲಾಗುತ್ತಿದೆ. ಸಂಬಂಧಪಟ್ಟವರು ನಮ್ಮ ಗ್ರಾಮಕ್ಕೆ ಬಂದು ನಮ್ಮ ಸಮಸ್ಯೆ ಕೇಳಿ ಪರಿಹರಿಸಲಿ ಎಂದು ಆಗ್ರಹಿಸಿದರು.

ಕಸ್ತೂರಿ ರಂಗನ್‌ ವರದಿ ವಿರೋಧಿಸಿ ಚಿಕ್ಕಮಗಳೂರಲ್ಲಿ ಪ್ರತಿಭಟನೆ

ಈ ಸಂದರ್ಭದಲ್ಲಿಗ್ರಾಮದ ಮುಖಂಡರಾದ ಅಳೇಹಳ್ಳಿ ರವಿ, ಹೆನ್ನಂಗಿಯ ಎಚ್‌.ಆರ್‌.ಸೋಮಯ್ಯ, ಸುಮನ್‌, ಎಚ್‌.ಎಸ್‌.ರವಿ, ಎಚ್‌.ಎಂ.ಶ್ರೀಕಾಂತ್‌,ಪ್ರಸನ್ನ, ಕಿರಣ್‌, ಅಳೇಹಳ್ಳಿ ರವೀಂದ್ರ, ಬಿ.ಜಿ.ಸದಾಶಿವ, ಕೆ.ಸಿ.ಸುರೇಶ್‌, ಶ್ರೀನಾಥ್‌ ಮುಂತಾದವರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ