ಆ್ಯಪ್ನಗರ

ಸಾರ್ವಜನಿಕ ಕ್ಷಮೆಗೆ ಬಂಜಾರ ಸೇವಾಲಾಲ್‌ ಸೇನೆ ಆಗ್ರಹ

ಲಂಬಾಣಿ ತಾಂಡಾಗಳಿಗೆ ಸಂಚಾರಿ ವಾಹನಗಳ ಮೂಲಕ ಮದ್ಯ ಸರಬರಾಜು ಮಾಡುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿರುವ ಅಬಕಾರಿ ಸಚಿವ ಎಚ್‌.ನಾಗೇಶ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಚಿಂತನೆ ನಡೆಸಲಾಗಿದೆ ಎಂದು ಬಂಜಾರ್‌ ಸೇವಾಲಾಲ್‌ ಸೇನೆ ಜಿಲ್ಲಾಧ್ಯಕ್ಷ ಆನಂದನಾಯ್ಕ ಹೇಳಿದರು.

Vijaya Karnataka 7 Sep 2019, 5:00 am
ಚಿಕ್ಕಮಗಳೂರು: ಲಂಬಾಣಿ ತಾಂಡಾಗಳಿಗೆ ಸಂಚಾರಿ ವಾಹನಗಳ ಮೂಲಕ ಮದ್ಯ ಸರಬರಾಜು ಮಾಡುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿರುವ ಅಬಕಾರಿ ಸಚಿವ ಎಚ್‌.ನಾಗೇಶ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಚಿಂತನೆ ನಡೆಸಲಾಗಿದೆ ಎಂದು ಬಂಜಾರ್‌ ಸೇವಾಲಾಲ್‌ ಸೇನೆ ಜಿಲ್ಲಾಧ್ಯಕ್ಷ ಆನಂದನಾಯ್ಕ ಹೇಳಿದರು.
Vijaya Karnataka Web banjara sewalal army demands public pardon
ಸಾರ್ವಜನಿಕ ಕ್ಷಮೆಗೆ ಬಂಜಾರ ಸೇವಾಲಾಲ್‌ ಸೇನೆ ಆಗ್ರಹ


ಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಬಡಜನರಿಗೆ ಗುಣಮಟ್ಟದ ಮದ್ಯ ಪೂರೈಕೆ, ಬೊಕ್ಕಸಕ್ಕೆ ಆದಾಯ ಎಂಬ ಗುರಿಯನ್ನು ಇಲಾಖೆ ಹೊಂದಿರುವುದಾಗಿ ಹೇಳಿದ್ದಾರೆ. ಬಂಜಾರ ಸಮುದಾಯದವರು ಕುಡುಕರು ಎಂಬಂತೆ ಹೇಳಿ ಅವಮಾನಿಸಿದ್ದು, ಇದರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದರು.

ಬಂಜಾರ ಸಮುದಾಯ ಸರಕಾರದ ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಆದರೆ, ಕಷ್ಟಪಟ್ಟು ದುಡಿದು ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ. ಜೀವನ ಸಂಕಷ್ಟದಲ್ಲಿದ್ದು ಬಹಳಷ್ಟು ಜನ ಜಿಲ್ಲೆಯ ವಿವಿಧ ಕಾಫಿ ತೋಟಗಳಿಗೆ ವಲಸೆ ಬಂದು ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಎಂದು ಹೇಳಿದರು.

ಲಂಬಾಣಿ ತಾಂಡಾಗಳು ಇಂದಿಗೂ ಕಂದಾಯ ಗ್ರಾಮಗಳಾಗಿ ಮಾರ್ಪಟ್ಟಿಲ್ಲ. ಈ ನಡುವೆ ಬಂಜಾರ ಸಮುದಾಯದವರ ಭಾವನೆಗಳ ಜತೆ ಸಚಿವರು, ಸರಕಾರ ಆಟವಾಡುತ್ತಿದೆ. ಮನೆ ಬಾಗಿಲಿಗೆ ಪಡಿತರ ಪೂರೈಕೆ ಮಾಡಲು ಸಾಧ್ಯವಾಗದ ಸರಕಾರ, ಮದ್ಯ ಪೂರೈಕೆ ಮಾಡುವುದಾಗಿ ಹೇಳಿರುವುದು ನಾಚಿಕೆಗೇಡು ಎಂದರು.

ಶ್ರೀಮಂತ ಸಂಸ್ಕೃತಿ ಹೊಂದಿರುವ ಬಂಜಾರ ಸಮಾಜದ ಬಗ್ಗೆ ಲಘುವಾಗಿ ಮಾತನಾಡಿರುವ ಸಚಿವ ನಾಗೇಶ್‌ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಸಚಿವ ಸ್ಥಾನದಿಂದ ಅವರನ್ನು ತೆಗೆದು ಹಾಕಬೇಕು. ರಾಜಕಾರಣದಲ್ಲಿಯಾವುದೇ ನೈತಿಕತೆ ಇಲ್ಲದೆ ಪಕ್ಷದಿಂದ ಪಕ್ಷಕ್ಕೆ ಹಾರುತ್ತಿದ್ದು, ಜನಾಂಗದ ಗೌರವ ಹಾಳು ಮಾಡಿದ್ದಾರೆ ಎಂದು ಟೀಕಿಸಿದರು.

ಈ ಹಿಂದೆ ಅವರು ಕೆಲಸ ಮಾಡಿದ ಇಲಾಖೆಯಲ್ಲೂಮರಾರ‍ಯದೆ ಕಳೆದುಕೊಂಡಿದ್ದರು. ಇಂತಹವರು ಬಂಜಾರ ಸಮುದಾಯದ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ಸಚಿವ ನಾಗೇಶ್‌ ತಕ್ಷಣ ಕ್ಷಮೆ ಕೇಳದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ಕಡೂರು ತಾಲೂಕು ಬಂಜಾರ ಸಂಘದ ಕಾರ‍್ಯದರ್ಶಿ ಟಿ.ಎಸ್‌.ಶ್ರೀನಿವಾಸ್‌, ಬ್ಯಾಲದಾಳ್‌ ತಾಂಡಾದ ಓಂಕಾರನಾಯ್ಕ, ಗುಬ್ಬಿಹಳ್ಳಿ ತಾಂಡದ ಜಿ.ಕೆ.ಶಿವರಂಜನ್‌ ನಾಯ್ಕ ಕರ್ನಾಟಕ ತಾಂಡ ಸಂಪನ್ಮೂಲ ವ್ಯಕ್ತಿ ಎಚ್‌.ಎಸ್‌.ರಮೇಶನಾಯ್ಕ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ