ಆ್ಯಪ್ನಗರ

ಕಡೂರಲ್ಲಿ ‘ಬ್ಲಾಂಕ್‌’ ಚಿತ್ರೀಕರಣ

ಕಡೂರಿನ ದೀಕ್ಷಾ ವಿದ್ಯಾಮಂದಿರದ ಕಾರ್ಯದರ್ಶಿ ಎನ್‌.ಪಿ. ಮಂಜುನಾಥಪ್ರಸನ್ನ ನಿರ್ಮಿಸುತ್ತಿರುವ ಬ್ಲಾಂಕ್‌ ಕನ್ನಡ ಚಲನಚಿತ್ರದ ಚಿತ್ರೀಕರಣವು ಭರದಿಂದ ಸಾಗಿದೆ.

Vijaya Karnataka 7 Aug 2019, 5:00 am
ಕಡೂರು: ಕಡೂರಿನ ದೀಕ್ಷಾ ವಿದ್ಯಾಮಂದಿರದ ಕಾರ್ಯದರ್ಶಿ ಎನ್‌.ಪಿ. ಮಂಜುನಾಥಪ್ರಸನ್ನ ನಿರ್ಮಿಸುತ್ತಿರುವ ಬ್ಲಾಂಕ್‌ ಕನ್ನಡ ಚಲನಚಿತ್ರದ ಚಿತ್ರೀಕರಣವು ಭರದಿಂದ ಸಾಗಿದೆ.
Vijaya Karnataka Web CKM-5KDR1


ಪಟ್ಟಣದ ವೈದ್ಯ ಡಾ. ಶಿವಕುಮಾರ್‌ ಅವರ ಬಸವೇಶ್ವರ ಆಸ್ಪತ್ರೆ ಸೆಲ್ಲರ್‌ನಲ್ಲಿ ದೃಶ್ಯವೊಂದರ ಚಿತ್ರೀಕರಣ ಸೋಮವಾರ ನಡೆಯಿತು.ಚಿತ್ರದ ಪಾತ್ರದಾರಿಯೊಬ್ಬರು ಅಪಾರ್ಟ್‌ಮೆಂಟ್‌ನ ಸೆಲ್ಲರ್‌ನಲ್ಲಿ ನಿಲ್ಲಿಸಿರುವ ಕಾರನ್ನು ಹೊರಕ್ಕೆ ತೆಗೆಯುವ ದೃಶ್ಯವನ್ನು ಛಾಯಗ್ರಾಹಕ ಪುರುಷೋತ್ತಮ ಅವರ ಕೈಚಳಕದಲ್ಲಿ ಚಿತ್ರೀಕರಣ ಮಾಡಿದರು.

ನಿರ್ದೇಶಕ ಸುಹಾಸ್‌(ಎಸ್‌.ಜೆ) ದೃಶ್ಯಕ್ಕೆ ಆ್ಯಕ್ಷ ನ್‌ ಕಟ್‌ ಹೇಳಿದರು.

ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ನಿರ್ದೇಶಕ ಎಸ್‌ಜೆ ಮಾತನಾಡಿ, ಕನ್ನಡ ಚಿತ್ರರಂಗಕ್ಕೆ ಭರವಸೆಯ ಹೊಸ ತಂಡವೊಂದು ಪ್ರವೇಶ ಪಡೆದಿದೆ. ಎರಡು ಶೆಡ್ಯೂಲ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಇದೀಗ 10 ದಿನದ ಚಿತ್ರೀಕರಣ ಬಾಕಿ ಇದೆ. ಕಡೂರು, ಚಿಕ್ಕಮಗಳೂರು ಹಾಗೂ ಉಡುಪಿ ಭಾಗದಲ್ಲಿ ಚಿತ್ರೀಕರಣ ನಡೆಸಲಾಗುವುದು ಎಂದರು.

ಮಾದಕ ವಸ್ತು ಸೇವನೆ ಕುರಿತಂತೆ ಅನೇಕ ಚಿತ್ರಗಳು ತೆರೆಕಂಡಿವೆ. ಆದರೆ ಒಂದು ವಿಭಿನ್ನ ವಸ್ತುವನ್ನು ಕೇಂದ್ರವಾಗಿಸಿಕೊಂಡು ಬ್ಲಾಂಕ್‌ ಚಿತ್ರವನ್ನು ತಯಾರಿಸಲಾಗುತ್ತಿದೆ. ನಾಲ್ಕು ಸುಶ್ರಾವ್ಯಭರಿತ ಹಾಡುಗಳಿವೆ. ಯುವಜನತೆಗೆ ಚಿತ್ರದ ಮೂಲಕ ಒಂದು ಸಂದೇಶ ನೀಡುವ ಪ್ರಯತ್ನವಿದೆ. ತಂಡದ ಮೊದಲ ಯತ್ನ ಇದು. ಕನ್ನಡಿಗರು ಪ್ರೋತ್ಸಾಹಿಸಲು ಕೋರಿದರು.

ನಿರ್ಮಾಪಕ ಎನ್‌.ಪಿ. ಮಂಜುನಾಥಪ್ರಸನ್ನ ಮಾತನಾಡಿ,ಹಾಲಿವುಡ್‌ ಮಾದರಿಯ ವಿಶೇಷ ತಾಂತ್ರಿಕತೆ ಬಳಸಿಕೊಂಡು ಚಿತ್ರವನ್ನು ನಿರ್ಮಿಸಲಾಗುತ್ತಿದೆ.ಹಾಡುಗಳಿಗಾಗಿ ಅಲೆಕ್ಸಾ ಕ್ಯಾಮೆರಾ ಬಳಸಿಕೊಂಡಿದ್ದು, ದೃಶ್ಯಗಳಿಗೆ ಡ್ರಾಗನ್‌ ಕ್ಯಾಮೆರಾ ಬಳಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ಕನ್ನಡದ ಕೆಲವು ಚಿತ್ರಗಳಲ್ಲಿ ಮತ್ತು ಕಿರುತೆರೆಯಲ್ಲಿ ನಟಿಸಿರುವ ಕೃಷಿತಾಪಂಡ ನಾಯಕಿಯಾಗಿದ್ದು, ಕೆಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಭರತ್‌ಹಾಸನ್‌, ಪ್ರವರ್ಧಮಾನಕ್ಕೆ ಬಂದಿರುವ ನಟ ಪೂರ್ಣಚಂದ್ರ ಹಾಗೂ ಹೊಸ ಪ್ರತಿಭೆ ರಷ್‌ಮಾಲಿಕ್‌ ಹಾಗೂ ಸುಚೇಂದ್ರಪ್ರಸಾದ್‌ ಚಿತ್ರದ ಪ್ರಮುಖ ಪಾತ್ರದಾರಿಗಳಾಗಿದ್ದಾರೆ. ಈ ಚಿತ್ರದಲ್ಲಿ ಕಥೆಯೇ ಹಿರೋ ಎಂದರು.

ನಟಿ ಕೃಷಿತಾಪಂಡ ಮಾತನಾಡಿ, ವಾಸ್ತವ ಮತ್ತು ಬಣ್ಣದ ಬದುಕಿನ ನಡುವೆ ನಡೆಯುವ ತಾಕಲಾಟಗಳೇ ಚಿತ್ರದ ಕಥಾವಸ್ತು. ನಿರ್ದೇಶಕರು ಅತ್ಯಂತ ನವಿರಾಗಿ, ಸೂಕ್ಷ ್ಮವಾಗಿ ಕಥೆಯನ್ನು ಹೆಣೆದಿದ್ದು, ಚಿತ್ರೀಕರಣದಲ್ಲೂ ಅದೇ ಶಿಸ್ತನ್ನು ಕಾಪಾಡಿಕೊಂಡಿದ್ದಾರೆ. ಸಸ್ಪೆನ್ಸ್‌ ಮತ್ತು ಡ್ರಾಮಾ ಚಿತ್ರದ ಒಟ್ಟಾರೆ ತಿರುಳು ಎಂದು ಹೇಳಿದರು. ನಟರಾದ ಪ್ರಶಾಂತ್‌ಸಿದ್ದಿ, ರಷ್‌ಮಾಲಿಕ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ