ಆ್ಯಪ್ನಗರ

ಬರದ ಭೀಕರತೆಗೆ ಕಣ್ಣಾದ ಕೆರೆ

ಮಳೆಗಾಲ ಬಂತೆಂದರೆ ಸಾಕು ಕೆರೆತುಂಬಿದ್ದನ್ನು ನೋಡಿ ಕಣ್ತುಂಬಿಕೊಳ್ಳಲು ಹೋಗುತ್ತಿದ್ದ ಕಾಲ ಬದಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪಟ್ಟಣ ಸುತ್ತಮುತ್ತಲಿನ ಕೆರೆಗಳು ನೀರಿಲ್ಲದೇ ಸೊರಗಿ ಜನರ ಉಪಯೋಗಕ್ಕಿರಲಿ, ಪಶುಪಕ್ಷಿಗಳಿಗೂ ಕುಡಿಯವ ನೀರಿಲ್ಲದ ಸ್ಥಿತಿ ಉಂಟಾಗಿರುವುದು ಬರದ ಭೀಕರತೆಗೆ ಸಾಕ್ಷಿಯಾಗಿದೆ.

Vijaya Karnataka 14 Feb 2019, 5:00 am
ಕೆ.ಎಸ್‌.ಸೋಮಶೇಖರ್‌, ಬೀರೂರು:ಮಳೆಗಾಲ ಬಂತೆಂದರೆ ಸಾಕು ಕೆರೆತುಂಬಿದ್ದನ್ನು ನೋಡಿ ಕಣ್ತುಂಬಿಕೊಳ್ಳಲು ಹೋಗುತ್ತಿದ್ದ ಕಾಲ ಬದಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪಟ್ಟಣ ಸುತ್ತಮುತ್ತಲಿನ ಕೆರೆಗಳು ನೀರಿಲ್ಲದೇ ಸೊರಗಿ ಜನರ ಉಪಯೋಗಕ್ಕಿರಲಿ, ಪಶುಪಕ್ಷಿಗಳಿಗೂ ಕುಡಿಯವ ನೀರಿಲ್ಲದ ಸ್ಥಿತಿ ಉಂಟಾಗಿರುವುದು ಬರದ ಭೀಕರತೆಗೆ ಸಾಕ್ಷಿಯಾಗಿದೆ.
Vijaya Karnataka Web CKM-13BRR2


ಪಟ್ಟಣಕ್ಕೆ ಹೊಂದಿಕೊಂಡಂತೆ ನಾಲ್ಕೈದು ಕಿಮಿ ವ್ಯಾಪ್ತಿಯಲ್ಲಿ ದೇವನಕೆರೆ,ಬಾಕಿನಕೆರೆ,ಗಾಳಿಹಳ್ಳಿಕೆರೆ,ಹನುಮಾಪುರ ಕೆರೆ,ತುಂಬೆಹೊಂಡ ಸೇರಿದಂತೆ ಹಲವು ಕೆರೆಗಳಿವೆ. ಮಳೆಯಾಶ್ರಯದ ಕೆರೆ ಜತೆ ತಾಲೂಕಿನ ದೊಡ್ಡಕೆರೆ ಮದಗದಕೆರೆ ಕೋಡಿ ನೀರು ಹಾಗೂ ತೂಬಿನ ನೀರನ್ನು ಸಂಗ್ರಹಿಸಿಟ್ಟು ಕೊಳ್ಳುವ ಸಾಮರ್ಥ್ಯ‌ ಹೊಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾದ ಮೇಲೆ ಮದಗದಕೆರೆ ಕೋಡಿ ಬಿದ್ದದ್ದೇ ಅಪರೂಪ. ಹೀಗಾಗಿ ಈ ಭಾಗದ ಜನರು ಹಾಗೂ ಜಾನುವಾರುಗಳು ವರ್ಷದ ನೀರಿಗಾಗಿ ಹಪಹಪಿಸಬೇಕಾದ ಸ್ಥಿತಿಯೇ ಹೆಚ್ಚಿದೆ.

ಪಟ್ಟಣಕ್ಕೆ ಹೊಂದಿಕೊಂಡಂತಿರುವ ಗಾಳಿಹಳ್ಳಿಕೆರೆಗೆ ನೀರು ಬಂದು ಕೆರೆತುಂಬಿತೆಂದರೆ ಒಂದೆರಡು ವರ್ಷ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆ ಇರುತ್ತಿರಲಿಲ್ಲ. ಈ ಆ ವಾತಾವರಣ ಬದಲಾಗಿ ಕೆರೆಯ ಅಕ್ಕಪಕ್ಕದಲ್ಲಿ ಕೊರೆಸಿದ್ದ ಪಟ್ಟಣಕ್ಕೆ ನೀರೋದಗಿಸುವ ಕೊಳವೆ ಭಾವಿಗಳಲ್ಲೂ ನೀರಿಲ್ಲದಾಗಿದೆ. ಕೆರೆಯ ಪುನಶ್ಚೇತನಕ್ಕೆ ಪೂರಕವಾದ ಯಾವುದೇ ಕ್ರಮವನ್ನು ಕೈಗೊಳ್ಳದಿರುವುದು ಹಾಗೂ ರೈಲ್ವೆ ಇಲಾಖೆ ನೂತನ ಹಳಿ ನಿರ್ಮಾಣಕ್ಕೆ ಕೆರೆಯ ಗ್ರಾವಲ್‌ ಮಣ್ಣನ್ನು ಹೆಚ್ಚಾಗಿ ಬಳಸಿದ ಪರಿಣಾಮ ಕೆರೆಗೆ ನೀರು ಬಂದರೂ ನಿಲ್ಲುತ್ತಿಲ್ಲ. ಭದ್ರಾಜಲಾಶಯದಿಂದ ಪಟ್ಟಣಕ್ಕೆ ಕುಡಿಯುವ ನೀರುಪೂರೈಕೆ ಪ್ರಾರಂಭವಾದ ಸಂದರ್ಭದಿಂದ ಇಲ್ಲಿಯವರಗೆ ಕೆರೆಯ ಅಭಿವೃದ್ಧಿಗೆ ಚಿಂತನೆ ಮಾಡದಿರುವ ಪರಿಣಾಮ ಹಾಗೂ ತಾಲೂಕಿನ ಕೆರೆಗಳಿಗೆ ನೀರೋದಗಿಸುವ ಗೊಂದಿಯೋಜನೆ ಜಾರಿಯಾಗದ ಹೊರತು ಪಟ್ಟಣ ಬೇಸಿಗೆಯಲ್ಲಿ ಸಂಪೂರ್ಣ ಖಾಲಿಕೆರೆ ನೋಡುವ ಸೌಭಾಗ್ಯವನ್ನಷ್ಠೇ ಕಂಡುಕೊಳ್ಳಬೇಕಾಗಿದೆ.

ನಿರುದ್ಯೋಗಿ ಯುವಕರಿಗೆ, ರೈತಾಪಿವರ್ಗಕ್ಕೆ ನೆರವಾಗಬಲ್ಲ ಹಲವು ಯೋಜನೆಗಳನ್ನು ಪ್ರವಾಸಿತಾಣವನ್ನಾಗಿಸುವ ಎಲ್ಲ ಅವಕಾಶಗಳನ್ನು ಈ ಕೆರೆಗಳು ಹೊಂದಿವೆ. ಸಮೀಪದ ಕೋಡಿಹಳ್ಳಿ ದೇವನಕೆರೆಯಲ್ಲಿ ಮಳೆಗಾಲದಲ್ಲಿ ಬೋಟಿಂಗ್‌ ವ್ಯವಸ್ಥೆ ಮಾಡಿ ಯುವಕನೊಬ್ಬ ಗಮನ ಸೆಳೆದಿದ್ದ. ಪ್ರವಾಸೋಧ್ಯಮವನ್ನು ಉತ್ತೇಜಿಸುವಲ್ಲಿ ಕೆರೆಗಳ ಕಾಯಕಲ್ಪಕ್ಕೆ ಮುಂದಾಗಬೇಕಿದೆ ಎಂಬುದು ಸಾರ್ವಜನಿಕರ ಅನಿಸಿಕೆಯಾಗಿದೆ.

ಬೀರೂರು ಪಟ್ಟಣಕ್ಕೆ ನಾಲ್ಕಾರು ದಶಕಗಳ ಕಾಲ ಕುಡಿಯುವ ನೀರಿಗೆ ಬರ ಉಂಟಾಂಗದಂತೆ ತನ್ನ ಒಡಲಲ್ಲಿ ನೀರುತುಂಬಿಕೊಂಡು ಭೂಪ್ರದೇಶವನ್ನು ತಂಪಾಗಿಟ್ಟಿದ್ದ ಗಾಳಿಹಳ್ಳಿಕೆರೆ ಬರಿದಾಗಿರುವುದು ನೋವಿನ ಸಂಗತಿ.ಕೆರೆಯಲ್ಲಿ ನೀರು ಉಳಿಸುವ ಪ್ರಯತ್ನಕ್ಕೆ ಸಣ್ಣನೀರಾವರಿ ಇಲಾಖೆ ಹೆಚ್ಚಿನ ಪ್ರಯತ್ನ ನಡೆಸಬೇಕಿದೆ. ಆ ಮೂಲಕ ಗ್ರಾಮ ಹಾಗೂ ಪಟ್ಟಣಕ್ಕೆ ನೆರವಾಗಬೇಕಿದೆ. -ಸವಿತಾ ರಮೇಶ್‌, ಪುರಸಭಾಧÜ್ಯಕ್ಷೆ

ಕೆರೆಗಳ ಅಭಿವೃದ್ಧಿ ಬಗ್ಗೆ ಹಲವಾರು ಬಾರಿ ಸರಕಾರದ ಗಮನಕ್ಕೆ ತಂದರೂ ಬರೀ ಕಡತಗಳಲ್ಲಿ ಉಳಿದಿರುವ ಅಭಿವೃದ್ಧಿ ಪಡಿಸುವ ಪೊಳ್ಳು ಭರವಸೆಗಳಿಂದಾಗಿ ಇಂದು ಕೆರೆಗಳು ಬರಿದಾಗಿವೆ. ಗ್ರಾಮೀಣರ ಬದುಕು ಸಂಕಷ್ಟಕ್ಕೆ ಸಿಲುಕುವ ಸ್ಥಿತಿ ನಿರ್ಮಾಣವಾಗುತ್ತಿದೆ.ಕೆರೆಗಳಲ್ಲಿ ನೀರಿಲ್ಲದೇ ಅಂತರ್ಜಲ ಬತ್ತಿದೆ. ಗುಳೆ ಸ್ಥಿತಿ ಎದುರಾಗುತ್ತಿರುವುದು ನೋವಿನ ಸಂಗತಿ.
-ಲಕ್ಷ ್ಮಣ, ಗಾಳಿಹಳ್ಳಿ ನಿವಾಸಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ