ಆ್ಯಪ್ನಗರ

ಕನ್ನಡ ನಾಡು ವಿಶ್ವಕ್ಕೆ ನೀಡಿದ ಅಮೂಲ್ಯ ಕಾಣಿಕೆ ಬಸವಣ್ಣ

ವಿಶ್ವಗುರು ಬಸವಣ್ಣ ಎಂದರೆ ವಿಶೇಷ ಶಕ್ತಿ,ಅಪೂರ್ವ ಚೇತನ. ಇದು ಕನ್ನಡ ನಾಡು ವಿಶ್ವಕ್ಕೆ ಕೊಟ್ಟಿರುವ ಅಮೂಲ್ಯ ಕಾಣಿಕೆ ಎಂದು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಹುಲ್ಲಹಳ್ಳಿ ಬಣ್ಣಿಸಿದರು.

Vijaya Karnataka 8 May 2019, 5:00 am
ಚಿಕ್ಕಮಗಳೂರು : ವಿಶ್ವಗುರು ಬಸವಣ್ಣ ಎಂದರೆ ವಿಶೇಷ ಶಕ್ತಿ,ಅಪೂರ್ವ ಚೇತನ. ಇದು ಕನ್ನಡ ನಾಡು ವಿಶ್ವಕ್ಕೆ ಕೊಟ್ಟಿರುವ ಅಮೂಲ್ಯ ಕಾಣಿಕೆ ಎಂದು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಹುಲ್ಲಹಳ್ಳಿ ಬಣ್ಣಿಸಿದರು.
Vijaya Karnataka Web CKM-7RUDRAP1


ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪುಷಾರ್ಚನೆ ಮಾಡಿ ಮಾತನಾಡಿದರು.

ವಿಶ್ವದ ಎಲ್ಲ ಸಾಹಿತ್ಯ ಪ್ರಕಾರಗಳನ್ನು ಗಮನಿಸಿದಾಗ ಬಸವ ಸಾಹಿತ್ಯ ಅಪಾರ ಮೌಲ್ಯ ಹೊಂದಿದೆ. ಬಸವೇಶ್ವರರು ಎಂದರೆ ಅವರ ಸ್ಥಾನ ವಿಶ್ವ ಭೂಪಟದಲ್ಲಿ ವಿಶಿಷ್ಟವಾಗಿದೆ.ಅವರು ವಿಶ್ವ ಮಾನವತಾವಾದಿಯಾಗಿ ಎಲ್ಲರ ಗಮನಸೆಳೆದಿದ್ದಾರೆ ಎಂದು ಹೇಳಿದರು.

ವಿಶ್ವ ಸಂಸತ್‌ ಪರಿಕಲ್ಪನೆ ಅನುಭವ ಮಂಟಪದಲ್ಲಿ ಕಟ್ಟಿಕೊಟ್ಟ ಮೊದಲ ಪ್ರಜಾಪ್ರಭ್ವುವಾದಿ ಬಸವಣ್ಣ. ಪ್ರಜಾಪ್ರಭುತ್ವ ಎಂದರೆ ಹೇಗಿರಬೇಕು ಎಂಬುದನ್ನು ಅನುಭವ ಮಂಟಪದ ಮೂಲಕ ಅವರು ತೋರಿಸಿಕೊಟ್ಟಿದ್ದಾರೆ. ಅವರ ಅಶಯಗಳು ಈಗ ವಿಶ್ವದ ಎಲ್ಲ ಕಡೆ ಸಾಕಾರಗೊಳ್ಳುತ್ತಿವೆ ಎಂದರು.

ಧರ್ಮಕ್ಕೆ ಹೊಸ ವ್ಯಾಖ್ಯಾನ ನೀಡಿರುವ ಬಸವಣ್ಣ ಅವರು ದಯೆಯೆ ಇಲ್ಲದ ಧರ್ಮ ಯಾವುದಯ್ಯಾ ಎಂದಿದ್ದಾರೆ. ಎಲ್ಲ ಧರ್ಮಗಳ ಮೂಲ ದಯೆಯೇ ಆಗಿರಬೇಕು. ದಯೆ, ಕರುಣೆ ಇಲ್ಲದ್ದು ಧರ್ಮ ಎನಿಸಿಕೊಳ್ಳುವುದಿಲ್ಲ . ಬಸವಣ್ಣ ನೀಡಿರುವ ಸಮಾನತೆ, ಸಹೋದರತ್ವ ಮತ್ತು ಸ್ವಾತಂತ್ರ್ಯ ಈ ಮೂರು ಸೂತ್ರಗಳನ್ನು ಅರ್ಥೈಸಿಕೊಂಡರೆ ಈ ವ್ಯವಸ್ಥೆಯಲ್ಲಿ ಹೊಸ ಆಯಾಮವನ್ನೇ ಸೃಷ್ಟಿಸಬಹುದು ಎಂದು ವ್ಯಾಖ್ಯಾನಿಸಿದರು. ಜಗಜ್ಯೋತಿ ಬಸವಣ್ಣ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌.ಅಶ್ವತಿ ಪುಷ್ಪ ನಮನ ಸಲ್ಲಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್‌, ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿ ಮಂಜುನಾಥ್‌, ಮುಖಂಡ ಕೆ.ಟಿ.ರಾಧಾಕೃಷ್ಣ, ಸಾಹಿತಿ ರವೀಶ್‌ ಕ್ಯಾತನಬೀಡು, ಕಸಾಪ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್‌, ವಿವಿಧ ಇಲಾಖೆಯ ಅಧಿಕಾರಿಗಳು ವಿವಿಧ ಸಮಾಜದ ಮುಖಂಡರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ