ಆ್ಯಪ್ನಗರ

ಪರಂಪರೆ ಅನುಸರಿಸುವ ಪೀಳಿಗೆಸೃಷ್ಟಿಯಾಗಲಿ

ಅನಾದಿ ಕಾಲದಿಂದ ಆಚರಿಸಿಕೊಂಡು ಬಂದ ಪರಂಪರೆ ಅನುಸರಿಸುವ ಸಮರ್ಥ ಪೀಳಿಗೆ ಗುರುಕುಲದಿಂದ ಸೃಷ್ಟಿಯಾಗಲಿ ಎಂದು ಯುವ ಬ್ರಿಗೇಡ್‌ನ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

Vijaya Karnataka 6 Jan 2020, 5:00 am
ಕೊಪ್ಪ: ಅನಾದಿ ಕಾಲದಿಂದ ಆಚರಿಸಿಕೊಂಡು ಬಂದ ಪರಂಪರೆ ಅನುಸರಿಸುವ ಸಮರ್ಥ ಪೀಳಿಗೆ ಗುರುಕುಲದಿಂದ ಸೃಷ್ಟಿಯಾಗಲಿ ಎಂದು ಯುವ ಬ್ರಿಗೇಡ್‌ನ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
Vijaya Karnataka Web be the generation that follows the heritage
ಪರಂಪರೆ ಅನುಸರಿಸುವ ಪೀಳಿಗೆಸೃಷ್ಟಿಯಾಗಲಿ


ಹರಿಹರಪುರದ ಸಮೀಪದ ಪ್ರಬೋಧಿನಿ ಗುರುಕುಲದಲ್ಲಿಭಾನುವಾರ ಅರ್ಧಮಂಡಲೋತ್ಸವದ ಪ್ರಯುಕ್ತ ಆಯೋಜಿಸಿದ್ದ ಯುವಸಂಗಮ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿಅವರು ಸಮಾರೋಪ ಭಾಷಣ ಮಾಡಿದರು.

ಇಂದು ಗುರುಕುಲ ಪ್ರೌಢಾವಸ್ಥೆಗೆ ಬಂದಿದೆ. ಇಲ್ಲಿಂದ ಭಾರತೀಯ ಸಂಸ್ಕೃತಿ ನಾಶವಾಗದಂತೆ ತಡೆಯುವ ಜವಾಬ್ದಾರಿ ಹೊರುವ ಜನಾಂಗದ ಸೃಷ್ಟಿಯಾಗುತ್ತಿದೆ. ಮುಸ್ಲಿಂ, ಕ್ರಿಶ್ಚಿಯನ್ನರ ಆಕ್ರಮಣದ ನಂತರವೂ ನಮ್ಮ ಸಂಸ್ಕೃತಿ ಹಾಗೆ ಉಳಿದಿದೆ. ಇಂದು ಭಾರತೀಯತೆ ಅಳವಡಿಸಿದರೆ ಮಕ್ಕಳು ಚುರುಕಾಗುತ್ತವೆ ಎಂಬ ಭಾವನೆ ಬರಲು ಗುರುಕುಲದ ಪಾತ್ರ ಹಿರಿದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಅರ್ಧಮಂಡಲೋತ್ಸವ ಸ್ವಾಗತ ಸಮಿತಿ ಗೌರವಾಧ್ಯಕ್ಷ ಡಾ.ಗೌರೀಶಂಕರ್‌ ಮಾತನಾಡಿ, ಫೆ.9ರಂದು ಅರ್ಧಮಂಡಲೋತ್ಸವದ ಕೊನೆಯ ಕಾರ್ಯಕ್ರಮ ಆಯೋಜಿಸಿದ್ದು, ಸರ್ವರು ಸಹಕರಿಸಬೇಕು. ಇಲ್ಲಿಶಿಕ್ಷಣ ಪಡೆದವರು ಲೋಕಕ್ಕೆ ಗುರುವಾಗಬೇಕು ಎಂದರು.ಸಮಿತಿ ಕಾರ್ಯಾಧ್ಯಕ್ಷ ಎಚ್‌.ಬಿ.ರಾಜಗೋಪಾಲ್‌, ಯುವ ಉದ್ಯಮಿ ಅಶ್ವಥ್‌ ಹೆಗ್ಡೆ ಹಾಜರಿದ್ದರು. ವಿದ್ಯಾರ್ಥಿ ವೇದಘೋಷ ಮಾಡಿ, ವಾದಿರಾಜ್‌ ಸ್ವಾಗತಿಸಿ, ಆಚಾರ್ಯ ಉಮೇಶ್‌ ಪ್ರಾಸ್ತಾವಿಕ ನುಡಿದು, ಮಹೇಶ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ