ಆ್ಯಪ್ನಗರ

ಪರೋಪಕಾರಿ ಬದುಕು ಸದಾ ಸ್ಮರಣೀಯ

ನಿಸ್ವಾರ್ಥ ಮತ್ತು ಪರೋಪಕಾರಿ ಬದುಕನ್ನು ಸಮಾಜ ಸದಾ ಸ್ಮರಿಸುತ್ತದೆ ಎಂದು ವಿವೇಕಾನಂದ ವಿದ್ಯಾಸಂಸ್ಥೆ ಉಪಾಧ್ಯಕ್ಷ ಎನ್‌.ಶ್ರೀಕಾಂತ ಶೆಟ್ಟಿ ಅಭಿಪ್ರಾಯಪಟ್ಟರು.

Vijaya Karnataka 7 Jul 2019, 5:00 am
ಚಿಕ್ಕಮಗಳೂರು: ನಿಸ್ವಾರ್ಥ ಮತ್ತು ಪರೋಪಕಾರಿ ಬದುಕನ್ನು ಸಮಾಜ ಸದಾ ಸ್ಮರಿಸುತ್ತದೆ ಎಂದು ವಿವೇಕಾನಂದ ವಿದ್ಯಾಸಂಸ್ಥೆ ಉಪಾಧ್ಯಕ್ಷ ಎನ್‌.ಶ್ರೀಕಾಂತ ಶೆಟ್ಟಿ ಅಭಿಪ್ರಾಯಪಟ್ಟರು.
Vijaya Karnataka Web CKM-6ARAGAP3


ತಾಲೂಕಿನ ಸಿರವಾಸೆಯ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಸಂಸ್ಥೆಯ ಸ್ಥಾಪಕ ಕಾರ‍್ಯದರ್ಶಿ ಎಸ್‌.ಬಿ.ಮುಳ್ಳೇಗೌಡ ಅವರ 89ನೇ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಸಂಸ್ಥಾಪಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಪರೋಪಕಾರಿ ಚಿಂತನೆ ಜತೆಗೆ ಸಮರ್ಥ ನಾಯಕತ್ವ ಗುಣಲಕ್ಷಣಗಳಿಂದ ಮುಳ್ಳೇಗೌಡರು ಸದಾ ಸ್ಮರಣೀಯವಾಗಿದ್ದಾರೆ. ವಿದ್ಯೆ, ಹಣ, ಅಧಿಕಾರ, ಆಸ್ತಿ, ಅಂತಸ್ತು ಹೊಂದಿದ್ದರೂ ಸ್ವಾರ್ಥಿಯಾಗಿದ್ದರೆ ಬಹುಬೇಗ ಜನಮಾನಸದಿಂದ ದೂರವಾಗುತ್ತಾರೆ ಎಂದರು.

ಸಂಸ್ಥೆ ಅಧ್ಯಕ್ಷ ಬಿ.ಎಂ.ಬೋಜೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಳಿ ವಯಸ್ಸಿನಲ್ಲೂ ಏರು ಉತ್ಸಾಹದ ಮುಳ್ಳೇಗೌಡರು ಯುವಜನರಿಗೆ ಸ್ಫೂರ್ತಿ ಸೆಲೆಯಾಗಿದ್ದರು. ನಿರ್ದಿಷ್ಟ ದಾರಿಯಲ್ಲಿ ಸಾಗಿ ಗುರಿ ತಲುಪಬಹುದು ಎಂಬ ವಿಶ್ವಾಸದಿಂದ ಮುನ್ನಡೆಯುತ್ತಿದ್ದರು ಎಂದು ಹೇಳಿದರು.

ಕಾಫಿ ಬೆಳೆಗಾರ ಪಿ.ಎ.ಪುಟ್ಟೇಗೌಡ ಮಾತನಾಡಿ, ಮುಳ್ಳೇಗೌಡರ ಸೇವಾ ಕಾರ‍್ಯಗಳಿಗೆ ಅವರ ತಂದೆ ಅವರೆಬೀಳು ಬಸವೇಗೌಡರೇ ಸ್ಫೂರ್ತಿ. ಮಲೆನಾಡಿನ ಗುಡ್ಡಗಾಡು ಪ್ರದೇಶಕ್ಕೆ ರಸ್ತೆ ಸೌಕರ‍್ಯ ಕಲ್ಪಿಸುವಲ್ಲಿ ಅವರೇಬೀಳು ಕುಟುಂಬದ ಪರಿಶ್ರಮ ಸ್ಮರಣೀಯ ಎಂದರು.

ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದ ಗೌರವ ಕಾರ‍್ಯದರ್ಶಿ ಎಸ್‌.ಎಂ.ದೇವಣ್ಣಗೌಡ ಮಾತನಾಡಿದರು. ಸೇವಾ ನಿವೃತ್ತಿ ಹೊಂದಿದ ಶಿಕ್ಷಕ ಕೆ.ಜಿ.ರುದ್ರಯ್ಯ ಅವರನ್ನು ಗೌರವಿಸಿ ಬೀಳ್ಕೊಡಲಾಯಿತು. ಸಹ ಕಾರ‍್ಯದರ್ಶಿ ಬಿ.ನಿ.ವಿಶ್ವನಾಥ್‌ ಮಾತನಾಡಿದರು. ಕನ್ನಡದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸರಾಫ್‌ ಕೃಷ್ಣಸ್ವಾಮಿ ನಗದು ಪುರಸ್ಕಾರ ನೀಡಿದರು.

ನಿರ್ದೇಶಕ ಬಿ.ಎ.ಶಿವಶಂಕರ್‌ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಶಿಕ್ಷಕಿ ಅನುಸೂಯ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಡಿ.ಎಂ.ಬಸವರಾಜ್‌ ವಂದಿಸಿದರು. ಸಹ ಶಿಕ್ಷಕ ಬಸವರಾಜಪ್ಪ ನಿರೂಪಿಸಿದರು.

ಕಾಫಿ ಬೆಳೆಗಾರ ನಂಜುಂಡೇಗೌಡ, ಗ್ರಾ.ಪಂ. ಅಧ್ಯಕ್ಷೆ ರೂಪಾ, ಸದಸ್ಯ ಲಕ್ಷ್ಮಣ, ವಿದ್ಯಾಸಂಸ್ಥೆ ಉಪಾಧ್ಯಕ್ಷ ಕೆ.ಆರ್‌.ಅಣ್ಣೇಗೌಡ, ನಿರ್ದೇಶಕರಾದ ಮಂಜಪ್ಪಗೌಡ, ಮಲ್ಲೇಶ್‌, ವೆಂಕಟಶೆಟ್ಟಿ, ಬಿ.ಎಂ.ಮಂಜುನಾಥ್‌, ಬಿ.ಪಿ.ಪ್ರಸನ್ನಕುಮಾರ್‌, ಕಾಫಿ ಬೆಳೆಗಾರರಾದ ಎಸ್‌.ಬಿ.ಪುಟ್ಟಸ್ವಾಮಿ, ದಿನೇಶ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ