ಆ್ಯಪ್ನಗರ

ಭದ್ರಾ ನದಿ ಪ್ರವಾಹ, ಧರೆ ಕುಸಿತ, ಸಂಚಾರ ಸ್ಥಗಿತ

ಆಶ್ಲೇಷ ಮಳೆ ಅಬ್ಬರಕ್ಕೆ ಭದ್ರಾ ನದಿಯಲ್ಲಿ ಪ್ರವಾಹ ಉಂಟಾಗಿ ಬಾಳೆಹೊನ್ನೂರು ಮಾಗುಂಡಿ ಹೊರನಾಡು ,ಕಳಸ ,ಬಾಳೆಹೊಳೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

Vijaya Karnataka 8 Aug 2019, 5:00 am
ಬಾಳೆಹೊನ್ನೂರು : ಆಶ್ಲೇಷ ಮಳೆ ಅಬ್ಬರಕ್ಕೆ ಭದ್ರಾ ನದಿಯಲ್ಲಿ ಪ್ರವಾಹ ಉಂಟಾಗಿ ಬಾಳೆಹೊನ್ನೂರು ಮಾಗುಂಡಿ ಹೊರನಾಡು ,ಕಳಸ ,ಬಾಳೆಹೊಳೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
Vijaya Karnataka Web SMG-0708-2-15-CKM-7BHR1


ಹೊಳೆಬಾಗಿಲು, ತೆಪ್ಪದಗಂಡಿ ಹಾಗೂ ಮಹಲ್‌ಗೋಡಿನಲ್ಲಿ ರಸ್ತೆ ಮೇಲೆ ನೀರು ನಿಂತಿದ್ದು, ಸಂಚಾರಕ್ಕೆ ಸ್ಥಗಿತಗೊಂಡಿದೆ. ನ.ರಾ.ಪುರ ರಸ್ತೆæ್ತಯಲ್ಲಿ ಡೊಬಿಹಳ್ಳದ ಪಕ್ಕದಲ್ಲಿದ್ದ ಜನೌಷಧ ಕೇಂದ್ರದ ಅಂಗಡಿ ಹಾಗೂ ಇನ್ನೂ ಹಲವು ಅಂಗಡಿಗಳಿಗೆ ನೀರು ನುಗ್ಗಿದೆ. 75 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿದ ಸಂತೆ ಮಾರ್ಕೆಟ್‌ನಲ್ಲಿ ಒಂದು ಭಾರಿ ಸಂತೆ ನಡೆಯದಿದ್ದರೂ ಕಟ್ಟಡ ನಿರ್ಮಾಣವಾದ ಮೇಲೆ 6 ಭಾರಿ ಮುಳುಗಡೆಯಾಗಿದೆ.ಅಕ್ಕಪಕ್ಕದ ಗದ್ದೆ ಹಾಗೂ ಅಡಿಕೆ ತೋಟಗಳಿಗೆ ನೀರು ನುಗ್ಗಿದೆ.

ವಿರಾಜಪೇಟೆ ಬೈಂದೂರು ರಾಜ್ಯ ಹೆದ್ದಾರಿಯ ಜಲದುರ್ಗಾದ ಸಮೀಪ ರಸ್ತೆ ಕುಸಿದಿದ್ದು, ಲೋಕೋಪಯೋಗಿ ಇಲಾಖೆ ಹರಸಾಹಸ ಪಟ್ಟು ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಹಳುವಳ್ಳಿ ಹೊರನಾಡು ರಸ್ತೆಯಲ್ಲಿ ನೀರು ದುಮುಕಿದ ರಭಸಕ್ಕೆ ರಸ್ತೆ ಕುಸಿದು ಹೋಗಿದ್ದು, ಹೊರನಾಡು ಸಂಪರ್ಕ ಕಡಿದುಕೊಂಡಿದೆ. ಗಡಿಕಲ್ಲಿನಿಂದ ಕುಂಚೇಬೈಲಿನವರೆಗೆ ರಸ್ತೆ ಅಗಲೀಕರಣ ಮಾಡಿದ್ದು, ಭಾರಿ ಮಳೆಯಿಂದ ಸುಮಾರು 3 ಕಿ.ಮೀ. ಉದ್ದಕ್ಕೂ ಧರೆ ಕುಸಿಸಿದ್ದು, ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. ಭಾರಿ ಬಿರುಗಾಳಿ ಮಳೆಯಿಂದ ಬಾಳೆಹೊನ್ನೂರು ಸುತ್ತಮುತ್ತ 20ಕ್ಕೂ ಹೆಚ್ಚು ವಿದ್ಯುತ್‌ ಕಂಬ ತುಂಡಾಗಿದ್ದು, ವಿದ್ಯುತ್‌ ಸಂಪರ್ಕ ಸ್ಥಗಿತಗೊಂಡಿದೆ. ಅಕ್ಷ ರನಗರ, ಮೆಣಸುಕೂಡಿಗೆ, ಹಲಸೂರು, ದೊಡ್ಡಮುಂಡುಗ ಇನ್ನಿತರೆ ಭಾಗದಲ್ಲೂ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಪಟ್ಟಣದಲ್ಲಿ ಕುಡಿಯುವ ನೀರಿನ ಸರಬರಾಜಿಗೆ ಸಮಸ್ಯೆ ಉಂಟಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ