ಆ್ಯಪ್ನಗರ

ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್‌ ಸಾಬೀತಿಗೆ ಹೈರಾಣಾದ ಪಡಿತರದಾರ

ನ್ಯಾಯಬೆಲೆ ಅಂಗಡಿಯಲ್ಲಿ ಅಳವಡಿಸಿರುವ ಬಯೋಮೆಟ್ರಿಕ್‌ ವ್ಯವಸ್ಥೆಯು ಪಡಿತರದಾರರನ್ನು ಅಲೆದು ಹೈರಾಣಾಗುವಂತೆ ಮಾಡಿದೆ. ಅರ್ಹ ಫಲಾನುಭವಿಗೆ ಪಡಿತರ ದೊರಕಬೇಕೆಂಬ ಉದ್ಧೇಶದಿಂದ ಸರಕಾರ ಈ ವ್ಯವಸ್ಥೆ ಜಾರಿಗೆ ತಂದಿದೆಯಾದರೂ ಹಲವು ಸಮಸ್ಯೆಗೆ ಕಾರಣವಾಗಿದೆ.

Vijaya Karnataka 19 Sep 2021, 9:47 pm
ಕೊಪ್ಪ: ತಾಲೂಕಿನಾದ್ಯಂತ ಪಡಿತರ ವಿತರಿಸುವ ನ್ಯಾಯಬೆಲೆ ಅಂಗಡಿಯಲ್ಲಿ ಅಳವಡಿಸಿರುವ ಬಯೋಮೆಟ್ರಿಕ್‌ ವ್ಯವಸ್ಥೆಯು ಪಡಿತರದಾರರನ್ನು ಅಲೆದು ಹೈರಾಣಾಗುವಂತೆ ಮಾಡಿದೆ.
Vijaya Karnataka Web biometric


ಇತ್ತೀಚಿನ ವರ್ಷದಲ್ಲಿ ಬಯೋಮೆಟ್ರಿಕ್‌ ಪದ್ಧತಿಯನ್ನು ಅಳವಡಿಸಲಾಗಿದೆ. ಅರ್ಹ ಫಲಾನುಭವಿಗೆ ಪಡಿತರ ದೊರಕಬೇಕೆಂಬ ಉದ್ಧೇಶದಿಂದ ಸರಕಾರ ಈ ವ್ಯವಸ್ಥೆಯನ್ನು ಜಾರಿಗೆ ತಂದಿದೆಯಾದರೂ ಹಲವು ಸಮಸ್ಯೆಗೆ ಕಾರಣವಾಗಿದೆ.

ಮೊದಲಿಗೆ ಪಡಿತರಚೀಟಿ ಕುಟುಂಬದ ಒಬ್ಬ ಸದಸ್ಯನ ಹೆಬ್ಬೆರಳಿನ ಅಚ್ಚನ್ನು ಬಯೋಮೆಟ್ರಿಕ್‌ ಪದ್ಧತಿಗೆ ಅಳವಡಿಸಲಾಗುತ್ತಿತ್ತು. ಪ್ರತಿ ಸಾರಿ ಪಡಿತರ ಪಡೆಯುವಾಗ ಅವರು ಬಯೋಮೆಟ್ರಿಕ್‌ ವ್ಯವಸ್ಥೆಗೆ ಹಾಜರಾಗಬೇಕಿತ್ತು.

ಬಿಡಿಎ ಆಯುಕ್ತರಿಂದ ಸುತ್ತೋಲೆ, ವೇತನಕ್ಕೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ

ಬದಲಾದ ವ್ಯವಸ್ಥೆಯಲ್ಲಿ ಕುಟುಂಬದ ಪ್ರತಿ ಸದಸ್ಯನ ಬೆರಳಚ್ಚು ನೀಡಬೇಕಿದೆ. ಇನ್ನು ಪಡಿತರ ಮತ್ತು ಸೀಮೆ ಎಣ್ಣೆ ಒಮ್ಮೆಗೆ ಲಭ್ಯವಿಲ್ಲದ ಕಾರಣ ಎರೆಡೆರೆಡು ಬಾರಿ ಬಯೋ ಮೆಟ್ರಿಕ್‌ ನೀಡಬೇಕಿದೆ. ತಾಲೂಕಿನ ದುರ್ಗಮ ಸ್ಥಳದಲ್ಲಿ ನೆಟ್‌ ವರ್ಕ್ ಸಮಸ್ಯೆ, ವಿದ್ಯುತ್‌ ಅಭಾವ ಕಾಡುತ್ತಿರುತ್ತದೆ. ಸಾರಿಗೆ ಸೌಲಭ್ಯ ಸದಾ ಕಾಲ ಇರುವುದಿಲ್ಲ.

ಇದರ ನಡುವೆ ಪಡಿತರ ಚೀಟಿದಾರರು ಆಗಾಗ್ಗೆ ನ್ಯಾಯಬೆಲೆ ಅಂಗಡಿಗೆ ತೆರಳಿ ಬಯೋಮೆಟ್ರಿಕ್‌ ನೀಡಬೇಕು. ಇನ್ನು ಬಹುತೇಕ ಸಾರಿ ಅವರು ಗಂಟೆಗಟ್ಟಲೆ ಅಂಗಡಿ ಮುಂದೆ ಕಾಯುತ್ತ ನಿಲ್ಲಬೇಕಿದೆ. ಬಹುತೇಕ ಬಿಪಿಎಲ್‌ ಪಡಿತರದಾರರು ದಿನಗೂಲಿ ನೌಕರರು. ಅವರು ದೂರದ ನ್ಯಾಯಬೆಲೆ ಅಂಗಡಿಗೆ ಪದೇಪದೆ ತೆರಳಿ ಬಯೋಮೆಟ್ರಿಕ್‌ ನೀಡಲು ಕಷ್ಟವಾಗುತ್ತಿದೆ.

ಇನ್ನು ಬಹುತೇಕ ಮಂದಿ ಬಳಿ ಉತ್ತಮ ಮೊಬೈಲ್‌ ಇಲ್ಲ. ಅವರಲ್ಲಿ ಹಲವರು ಅನಕ್ಷರಸ್ಥರು ಮತ್ತು ವಯೋ ವೃದ್ಧರಿದ್ದಾರೆ. ಮೊಬೈಲ್‌ಗೆ ಬರುವ ಓಟಿಪಿ ಓದಲಾಗದೆ ಅವರು ಸಂಕಷ್ಟ ಪಡಬೇಕಿದೆ. ಜನರು ಇಂತಹ ವ್ಯವಸ್ಥೆ ಬಗ್ಗೆ ಸರಕಾರಕ್ಕೆ ಶಾಪ ಹಾಕುತ್ತ ವಾಪಸಾಗುವ ದೃಶ್ಯ ಸಾಮಾನ್ಯವಾಗಿದೆ. ಬಹಳಷ್ಟು ಮಂದಿ ಕೆಲವೊಮ್ಮೆ ವಾರಗಟ್ಟಲೆ ನ್ಯಾಯಬೆಲೆ ಅಂಗಡಿ ಮುಂದೆ ಕಾದಿರುವ ಸಂಗತಿ ಸಂಭವಿಸಿದೆ.

​ಊರಿಗೆ ವಾಪಸಾದವರಿಗೆ ನರೇಗಾ ಕೂಲಿ ಖಾತ್ರಿ: ಅಗತ್ಯ ಪ್ರತಿಜ್ಞಾವಿಧಿ ಸ್ವೀಕರಿಸಿದವರಿಗೆ ಕೆಲಸ

ಸಂಬಂಧಿಸಿದವರು ವ್ಯವಸ್ಥೆಯನ್ನು ಸರಿಪಡಿಸಿ, ಸರಳೀಕರಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕೆಂಬುದು ಪಡಿತರದಾರರ ಒಕ್ಕೊರಲ ಆಗ್ರಹವಾಗಿದೆ.

ಪಡಿತರಕ್ಕೆ ಬಯೋಮೆಟ್ರಿಕ್‌ ಒಂದು ಅವೈಜ್ಞಾನಿಕ ಪದ್ಧತಿಯಾಗಿದೆ. ಜನಸಾಮಾನ್ಯರಿಗೆ ಕಗ್ಗಂಟಾಗಿದೆ. ಸಾಮಾನ್ಯವಾಗಿ ಆರ್ಥಿಕವಾಗಿ ಹಿಂದುಳಿದವರಿಗಾಗಿ ಬಿಪಿಎಲ್‌ ಪಡಿತರ ವಿತರಿಸುತ್ತಿದ್ದು, ನೈಜ ಫಲಾನುಭವಿಗೆ ಅದು ಸಿಗದೆ ಪೋಲಾಗುತ್ತಿದೆ. ಸರಕಾರ ಆದಷ್ಟು ಬೇಗ ವ್ಯವಸ್ಥೆಯನ್ನು ಸರಳೀಕರಿಸಿ ಬಡ ಜನರಿಗೆ ಸಹಾಯ ಮಾಡಬೇಕು.
- ನುಗ್ಗಿ ಮಂಜುನಾಥ್‌, ನುಗ್ಗಿ ಗ್ರಾಮ, ಕೊಪ್ಪ ತಾಲೂಕು.

ಸರಕಾರ ಸಾಫ್ಟ್‌ವೇರ್‌ ಅದೆ ರೀತಿ ಅಳವಡಿಸಿದ್ದು, ಒಬ್ಬ ಪಡಿತರದಾರ 2 ಬಾರಿ ಬಯೋಮೆಟ್ರಿಕ್‌ ನೀಡಬೇಕಿರುವುದು ಅನಿವಾರ್ಯವಾಗಿದೆ. ಸಾಮಾನ್ಯವಾಗಿ ಪಡಿತರ ಮತ್ತು ಸೀಮೆಎಣ್ಣೆ ಒಟ್ಟಿಗೆ ನೀಡಲಾಗುವುದು.
- ಶ್ರೀಕಾಂತ್‌, ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿ, ಕೊಪ್ಪ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ