ಆ್ಯಪ್ನಗರ

ಬೀರೂರು: ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಡೂರು ಮಂಡಲ 9 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಸದಸ್ವತ್ವ ಅಭಿಯಾನ ಪ್ರಗತಿಯಲ್ಲಿದ್ದು ಸರಸ್ವತಿಪುರ ಮಹಾಶಕ್ತಿ ಕೇಂದ್ರದ ಸದಸ್ಯತ್ವ ಅಭಿಯಾನಕ್ಕೆ ಶನಿವಾರ ಪಟ್ಟಣದ ಮಾರ್ಗದಮಲ್ಲಪ್ಪ ರೋಟರಿಭವನದಲ್ಲಿ ಚಾಲನೆ ನೀಡಲಾಯಿತು.

Vijaya Karnataka 15 Jul 2019, 5:00 am
ಬೀರೂರು : ಕಡೂರು ಮಂಡಲ 9 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಸದಸ್ವತ್ವ ಅಭಿಯಾನ ಪ್ರಗತಿಯಲ್ಲಿದ್ದು ಸರಸ್ವತಿಪುರ ಮಹಾಶಕ್ತಿ ಕೇಂದ್ರದ ಸದಸ್ಯತ್ವ ಅಭಿಯಾನಕ್ಕೆ ಶನಿವಾರ ಪಟ್ಟಣದ ಮಾರ್ಗದಮಲ್ಲಪ್ಪ ರೋಟರಿಭವನದಲ್ಲಿ ಚಾಲನೆ ನೀಡಲಾಯಿತು.
Vijaya Karnataka Web CKM-13BRR3


ಸಂಚಾಲಕ ದೇವಾನಂದ್‌ ಮಾತನಾಡಿ, ಈಗಾಗಲೇ ಕಡೂರು ಮಂಡಲ ವ್ಯಾಪ್ತಿಯ ಜೋಡಿತಿಮ್ಮಾಪುರ, ಬಳ್ಳಿಗನೂರು, ಚಿಕ್ಕಂಗಲ, ಎಮ್ಮೆದೊಡ್ಡಿ, ಬಿಸಲೇಹಳ್ಳಿ, ಹುಲ್ಲೇಹಳ್ಳಿ, ಹರಳಹಳ್ಳಿಯಲ್ಲಿ ಹಾಗೂ ಜಿಗಣೇಹಳ್ಳಿಯಲ್ಲಿ ಬೂತ್‌ಮಟ್ಟದ ಸದಸ್ಯತ್ವ ಅಭಿಯಾನಕ್ಕೆ ಚಾÇನೆ ಸಿಕ್ಕಿದೆ ಎಂದರು. ಬೂತ್‌ ಮಟ್ಟದಲ್ಲಿ 34ಬೂತ್‌ಗಳಿದ್ದು ಕನಿಷ್ಟ ಬೂತ್‌ ಒಂದಕ್ಕೆ 250 ಸದಸ್ಯರನ್ನು ಸೇರಿಸುವ ಜವಾಬ್ದಾರಿಯನ್ನು ಕಾರ್ಯಕರ್ತರು ನಿರ್ವಹಿಸಬೇಕೆಂದು ಮನವಿ ಮಾಡಿದರು. ಮೊಬೈಲ್‌ ಆಪ್‌ ಮೂಲಕ ಸದಸ್ಯರಾಗಲು ಇರುವ ಸುಲಭ ವಿಧಾನವನ್ನು ಕಾರ್ಯಕರ್ತರು ಸರಿಯಾಗಿ ಬಳಸಿಕೊಳ್ಳಬೇಕೆಂದು ತಿಳಿಸಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆರೇಕಲ್‌ ಪ್ರಕಾಶ್‌ ಮಾತನಾಡಿ, ಪ್ರಧಾನ ಮಂತ್ರಿಯವರ ಆಶಯದಂತೆ ಪಕ್ಷ ದ ಕಾರ್ಯಕ್ರಮ ಹಾಗೂ ಸಾಧನೆಯನ್ನು ದೇಶದ ನಾಗರಿಕರಿಗೆ ತಿಳಿಸುವಲ್ಲಿ ಸದಸ್ಯತ್ವ ಅಭಿಯಾನ ಮಹತ್ವದ ಪಾತ್ರವಹಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸಂಚಾಲನ ಸಮಿತಿಯ ರಾಜಾನಾಯ್ಕ, ತಾಲೂಕು ಎಸ್‌ಸಿ, ಎಸ್‌ಟಿ ವಿಭಾಗದ ಅಧ್ಯಕ್ಷ ಹುಲ್ಲೇಹಳ್ಳಿ ಲಕ್ಷ ್ಮಣ್‌, ಜೋಡಿಹೋಚಿಹಳ್ಳಿ ತಾ.ಪಂ. ಸದಸ್ಯ ಜಿಗಣೇಹಳ್ಳಿ ಮಂಜುನಾಥ್‌ ಮಾತನಾಡಿದರು. ಬಿಜೆಪಿ ಮುಖಂಡರಾದ ಬೋರ್ವೆಲ್‌ ರವಿ, ಮಹೇಶ್‌ಒಡೆಯರ್‌, ಮಹೇಶ್‌ ಮಾತನಾಡಿದರು.

ಬಿಜೆಪಿ ಯುವಮೋರ್ಚಾ ಸೇರಿದಂತೆ ಹಲವು ವಿಭಾಗಗಳ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ