ಆ್ಯಪ್ನಗರ

ಕಾಡೆಮ್ಮೆ ಹಿಂಡು ಪ್ರತ್ಯಕ್ಷ , ಗ್ರಾಮಸ್ಥರ ಆತಂಕ

ಮಾಲಿಂಗನಾಡು ಸಮೀಪ ಸೋಮವಾರ ಹಾಡುಹಗಲೇ ಕಾಡೆಮ್ಮೆಗಳು ಪ್ರತ್ಯಕ್ಷ ವಾಗಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ.

Vijaya Karnataka 23 Jul 2019, 5:00 am
ಕೊಟ್ಟಿಗೆಹಾರ: ಮಾಲಿಂಗನಾಡು ಸಮೀಪ ಸೋಮವಾರ ಹಾಡುಹಗಲೇ ಕಾಡೆಮ್ಮೆಗಳು ಪ್ರತ್ಯಕ್ಷ ವಾಗಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ.
Vijaya Karnataka Web CKM-22KTG6


ಕೂವೆ ಹಿರೆಬೈಲ್‌ ಮಾರ್ಗದಲ್ಲಿ ಬಿಳಗಲಿ ಸಮೀಪ ಹತ್ತು ಕಾಡೆಮ್ಮೆಗಳ ಹಿಂಡು ವಾಹನಗಳಿಗೆ ಅಡ್ಡ ಬಂದಿದ್ದು, ಮುಂದೆ ಹೋದರೆ ತಮ್ಮ ಮೇಲೆಯೇ ಮುಗಿಬೀಳುತ್ತವೆ ಎಂದು ಹೆದರಿದ ವಾಹನ ಸವಾರರು ಬೈಕ್‌ ತಿರುಗಿಸಿಕೊಂಡು ವಾಪಸ್‌ ಬಂದಿದ್ದಾರೆ.

ಹಿಂಡಿನಲ್ಲಿ ಏಳು ದೊಡ್ಡ ಕಾಡೆಮ್ಮೆಗಳು, ಮೂರ್ನಾಲ್ಕು ಮರಿಗಳು ಕಂಡುಬಂದಿವೆ. ಮಳೆಗಾಲದ ಕಾರಣ ಅರಣ್ಯ ಪ್ರದೇಶದಲ್ಲಿ ಮಂಜು ಮುಸುಕಿದ ವಾತಾವರಣವಿದ್ದು ಕಾಡೆಮ್ಮೆಗಳು ರಸ್ತೆಗೆ ಅಡ್ಡಲಾಗಿ ಬಂದರೂ ಸರಿಯಾಗಿ ಕಾಣದೇ ದುರಂತ ಎದುರಾಗುವ ಸಂಭವವಿದೆ. ಅರಣ್ಯ ಇಲಾಖೆ ಕಾಡೆಮ್ಮೆಗಳನ್ನು ಕಾಡಿಗಟ್ಟಬೇಕೆಂದು ಮಾಲಿಂಗನಾಡು ಗ್ರಾಮಸ್ಥ ಸುದೀಪ್‌ ಮತ್ತಿತರರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ