ಆ್ಯಪ್ನಗರ

ಕೇರಳದಲ್ಲಿ ಸಿಎಂ ಬಿಎಸ್‌ವೈಗೆ ಘೇರಾವ್‌ ಹಾಕಿದವರಿಗೆ ಚಿಕ್ಕಮಗಳೂರಿನಲ್ಲಿ ಹೂಗುಚ್ಛ!

ಸಿಎಂ ಬಿಎಸ್‌ ಯಡಿಯೂರಪ್ಪ ಅವರು ಕೇರಳಕ್ಕೆ ಭೇಟಿ ನೀಡಿದ್ದ ಸಂದರ್ಭ ಕಪ್ಪು ಬಾವುಟ ಪ್ರದರ್ಶಿಸಿದ್ದವರ ಪೈಕಿ ಸುದಾಜ್‌ ಎಂಬುವವರು ಚಿಕ್ಕಮಗಳೂರಿಗೆ ಪ್ರವಾಸ ಬಂದಿದ್ದ ಸಂದರ್ಭ ಬಿಜೆಪಿ ಕಾರ್ಯಕರ್ತರು ಅವರನ್ನು ಭೇಟಿಯಾಗಿ ಹೂಗುಚ್ಛ ನೀಡಿದ್ದಾರೆ.

Vijaya Karnataka Web 9 Feb 2020, 11:02 am
ಚಿಕ್ಕಮಗಳೂರು: ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಕೇರಳ ಪ್ರವಾಸ ಸಂದರ್ಭ ಕಾರು ಅಡ್ಡಗಟ್ಟಿ ಘೇರಾವ್‌ ಹಾಕಿದ್ದ ಗ್ರಾಮ ಪಂಚಾಯಿತಿ ಸದಸ್ಯನಿಗೆ ಶನಿವಾರ ಬಿಜೆಪಿ ಕಾರ‍್ಯಕರ್ತರು ಹೂಗುಚ್ಛ ನೀಡಿ ಇಂತಹ ಕೃತ್ಯವೆಸಗದಂತೆ ತಿಳಿವಳಿಕೆ ಹೇಳಿದ ಘಟನೆ ನಡೆದಿದೆ.
Vijaya Karnataka Web flower bouquet


ಕೇರಳದ ಕಣ್ಣೂರಿನಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಕಾರು ಅಡ್ಡಗಟ್ಟಿ ಸಿಎಂ ಯಡಿಯೂರಪ್ಪ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ್ದರು. ಇದರಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸುದಾಜ್‌ ಕೂಡ ಸೇರಿದ್ದರು. ಸುದಾಜ್‌ ಕೇರಳದಿಂದ ಚಿಕ್ಕಮಗಳೂರಿಗೆ ಪ್ರವಾಸ ಬಂದಿರುವುದನ್ನು ತಿಳಿದ ಬಿಜೆಪಿ ಕಾರ‍್ಯಕರ್ತರು ಅವರನ್ನು ಪತ್ತೆಹಚ್ಚಲು ಸಾಕಷ್ಟು ಶ್ರಮಿಸಿದರು.

ಇಂದಾವರ ಸಮೀಪದ ಹೋಂ ಸ್ಟೇವೊಂದರಲ್ಲಿ ಸುದಾಜ್‌ ಇರುವುದಾಗಿ ಮಾಹಿತಿ ಸಿಕ್ಕುತ್ತಿದ್ದಂತೆ ಬಿಜೆಪಿ ನಗರಾಧ್ಯಕ್ಷ ಮಧುಕುಮಾರ್‌ ರಾಜ್‌ ಅರಸ್‌ ಅಲ್ಲಿಗೆ ತೆರಳಿದ್ದರು. ಆದರೆ, ಕಣ್ತಪ್ಪಿಸಿ ವಾಹನದಲ್ಲಿ ಗಿರಿಶ್ರೇಣಿಗೆ ಸುದಾಜ್‌ ತೆರಳಿದ್ದರು.

ಅಚ್ಚರಿ..! ಕೇರಳದ ಅಪಾರ್ಟ್‌ಮೆಂಟ್‌ ನಲ್ಲಿಯಲ್ಲಿ ನೀರಿನ ಬದಲು ಲಿಕ್ಕರ್‌!

ಹೊನ್ನಮ್ಮನಹಳ್ಳ ಬಳಿ ಕಣ್ಣಿಗೆ ಬಿದ್ದ ಸುದಾಜ್‌ಗೆ ಹೂಗುಚ್ಛ ನೀಡಿದ ಬಿಜೆಪಿ ಕಾರ‍್ಯಕರ್ತರು, ಸಿಎಂ ವಿರುದ್ಧ ಪ್ರತಿಭಟಿಸಿದ್ದು ಏಕೆ ಎಂದು ಪ್ರಶ್ನಿಸಿದರು. ಕಣ್ಣೂರಿನ ಏರೋಂನಲ್ಲಿ ಗ್ರಾ.ಪಂ. ಸದಸ್ಯನಾಗಿದ್ದು, ಸಹಕಾರ ಸಂಘದಲ್ಲಿ ಕೆಲಸ ಮಾಡುತ್ತಿದ್ದೇನೆ. ಯಾರ ವಿರುದ್ಧ ಪ್ರತಿಭಟನೆ ಎಂದು ತಿಳಿದಿರಲಿಲ್ಲ. ಜತೆಗಾರರೊಂದಿಗೆ ಬಂದಿದ್ದೆ. ಈ ಬಗ್ಗೆ ಕ್ಷಮೆ ಯಾಚಿಸುತ್ತೇನೆ. ಹೂಗುಚ್ಛ ಕೊಟ್ಟು ತಿಳಿವಳಿಕೆ ಹೇಳಿದ್ದರಿಂದ ಸಂತಸವಾಗಿದೆ ಎಂದು ಸುದಾಜ್‌ ಹೇಳಿದರು. ಹಿರೇಮಗಳೂರು ಕೇಶವ, ಕಿರಣ್‌, ಹರೀಶ್‌, ನಾಗೇಶ್‌ ಹಾಜರಿದ್ದರು.

ಸಂಸ್ಕೃತಿಯ ಅರಿವು
ಯಾರದ್ದೋ ಮಾತು ಕೇಳಿ ಯಡಿಯೂರಪ್ಪ ವಿರುದ್ಧ ಷಡ್ಯಂತ್ರ ಮಾಡಿದ್ದ ಸಂಘಟನೆಯೊಂದಿಗೆ ಸುದಾಜ್‌ ಅರಿವಿಲ್ಲದೆ ಕೈಜೋಡಿಸಿದ್ದಾರೆ. ಅವರಿಗೆ ಹೂಗುಚ್ಛ ನೀಡುವ ಮೂಲಕ ನಮ್ಮ ಸಂಸ್ಕೃತಿಯ ಅರಿವು ಮಾಡಿದ್ದೇವೆ. ಅಹಿತಕರ ಘಟನೆ ಮೂಲಕ ಯಾರಿಗೂ ಅವಮಾನ ಮಾಡಬಾರದು ಎಂದು ಹೇಳಿದ್ದೇವೆ.
- ಮಧುಕುಮಾರರಾಜ್‌ ಅರಸ್‌, ನಗರಾಧ್ಯಕ್ಷ, ಬಿಜೆಪಿ

ಇಲ್ಲಿಯವರೆಗೆ ದಾಖಲಾದ ಲವ್‌ ಜಿಹಾದ್‌ ಪ್ರಕರಣಗಳೆಷ್ಟು? - ಲೆಕ್ಕ ಬಿಚ್ಚಿಟ್ಟ ಕೇಂದ್ರ ಸರಕಾರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ