ಆ್ಯಪ್ನಗರ

CT Ravi: 'ಚಡ್ಡಿಗಳೇ ಎಚ್ಚರ' ಎಂಬ ರಸ್ತೆ ಬರಹಕ್ಕೆ ಬಿಜೆಪಿ ನಾಯಕ ಸಿ. ಟಿ. ರವಿ ತಿರುಗೇಟು!

CT Ravi: ಪಿಎಫ್‌ಐ ಅವರ ಯುದ್ದದ ಉದ್ದೇಶ ಇಸ್ಲಾಮಿಕ್ ರಾಜ್ಯವನ್ನ ಸ್ಥಾಪನೆ ಮಾಡೋದು. ಅವರ ಮೂಲ ನಂಬಿಕೆಗಳಲ್ಲೇ ಅಸಹಿಷ್ಣುತೆ, ದೋಷವಿದೆ. ಮತ್ತೊಂದು ಮತ, ಧರ್ಮ, ದೇವರನ್ನ ಒಪ್ಪದ ಮಾನಸಿಕತೆಯಿದೆ. ಪ್ರತಿಯೊಬ್ಬರು ರಾಷ್ಟ್ರೀಯತೆಯನ್ನ ಮೈಗೂಡಿಸಿಕೊಳ್ಳುವ ಮೂಲಕ ಅವರನ್ನ ಎದುರಿಸಬೇಕು. ಅವರ ದುಷ್ಟತನದ ಮೂಲಕ ಭಾರತೀಯರನ್ನ ನಾಶ ಮಾಡಿದ ಕಾಲ ಹೋಯ್ತು. ಈಗ ಅಂತಹ ಸಂದರ್ಭ ಬಂದ್ರೆ ಅವರನ್ನು ನಾಶ ಮಾಡಿ ಭಾರತವನ್ನ ಉಳಿಸುತ್ತೇವೆ ಎಂದು ಬಿಜೆಪಿ ನಾಯಕ ಸಿ. ಟಿ. ರವಿ ಹೇಳಿದ್ದಾರೆ.

Edited byದಿಲೀಪ್ ಡಿ. ಆರ್. | Vijaya Karnataka Web 4 Oct 2022, 6:46 pm

ಹೈಲೈಟ್ಸ್‌:

  • ಪಿಎಫ್‌ಐ ಸಂಘಟನೆಯನ್ನು ನಿಷೇಧ ಮಾಡಿದ ಬಳಿಕ ಎಚ್ಚರಿಕೆ ಸಂದೇಶ
  • ಬಂಟ್ವಾಳ ತಾಲ್ಲೂಕಿನ ನೈನಾಡು ಎಂಬಲ್ಲಿ ದುಷ್ಕರ್ಮಿಗಳಿಂದ ರಸ್ತೆ ಮೇಲೆ ಎಚ್ಚರಿಕೆ
  • ಚಡ್ಡಿಗಳೇ ಎಚ್ಚರ..! ಪಿಎಫ್‌ಐ ನಾವು ಮರಳಿ ಬರುತ್ತೇವೆ ಎಂದು ಬರೆಯಲಾಗಿತ್ತು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web CT Ravi
'ಚಡ್ಡಿಗಳೇ ಎಚ್ಚರ' ಎಂಬ ರಸ್ತೆ ಬರಹಕ್ಕೆ ಬಿಜೆಪಿ ನಾಯಕ ಸಿ. ಟಿ. ರವಿ ತಿರುಗೇಟು!
ಚಿಕ್ಕಮಗಳೂರು: ಬಂಟ್ವಾಳದಲ್ಲಿ ರಸ್ತೆ ಮೇಲಿನ ಪಿಎಫ್ಐ ಬರಹಕ್ಕೆ ಬಿಜೆಪಿ ನಾಯಕ ಸಿ. ಟಿ. ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಎಫ್ಐ ನೆಪಕ್ಕೆ ಮಾತ್ರ ಆರ್‌ಎಸ್‌ಎಸ್ ಅನ್ನು ಟಾರ್ಗೆಟ್ ಮಾಡುತ್ತಿದೆ. ಆದರೆ ಅವರ ಉದ್ದೇಶ ಇರೋದು ಭಾರತೀಯರು, ಭಾರತೀಯತೆ ಮೇಲೆ ಎಂದು ಸಿ. ಟಿ. ರವಿ ಹೇಳಿದ್ದಾರೆ.
ಪಿಎಫ್‌ಐ ಅವರ ಯುದ್ದದ ಉದ್ದೇಶ ಇಸ್ಲಾಮಿಕ್ ರಾಜ್ಯವನ್ನ ಸ್ಥಾಪನೆ ಮಾಡೋದು. ಅವರ ಮೂಲ ನಂಬಿಕೆಗಳಲ್ಲೇ ಅಸಹಿಷ್ಣುತೆ, ದೋಷವಿದೆ. ಮತ್ತೊಂದು ಮತ, ಧರ್ಮ, ದೇವರನ್ನ ಒಪ್ಪದ ಮಾನಸಿಕತೆಯಿದೆ. ಪ್ರತಿಯೊಬ್ಬರು ರಾಷ್ಟ್ರೀಯತೆಯನ್ನ ಮೈಗೂಡಿಸಿಕೊಳ್ಳುವ ಮೂಲಕ ಅವರನ್ನ ಎದುರಿಸಬೇಕು ಎಂದು ಬಿಜೆಪಿ ನಾಯಕ ಸಿ. ಟಿ. ರವಿ ಕರೆ ನೀಡಿದರು.

PFI Ban | ಪಿಎಫ್‌ಐ ನಿಷೇಧಕ್ಕೆ ಕೇಂದ್ರ ಸರ್ಕಾರ ಕೊಟ್ಟ ಕಾರಣಗಳೇನು?
ನಿಮ್ಮ ದುಷ್ಟತನದ ಮೂಲಕ ಭಾರತೀಯರನ್ನ ನಾಶ ಮಾಡಿದ ಕಾಲ ಹೋಯ್ತು. ಈಗ ಅಂತಹ ಸಂದರ್ಭ ಬಂದ್ರೆ ನಿಮ್ಮನ್ನ ನಾಶ ಮಾಡಿ ಭಾರತವನ್ನ ಉಳಿಸುತ್ತೇವೆ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ನಾಯಕ ಸಿ. ಟಿ. ರವಿ ತಿರುಗೇಟು ನೀಡಿದ್ಧಾರೆ.


ಬಂಟ್ವಾಳದಲ್ಲಿ ರಸ್ತೆ ಮೇಲೆ ಪಿಎಫ್‌ಐ ಬರಹ..!

ಪಿಎಫ್‌ಐ ಸಂಘಟನೆಯನ್ನು ನಿಷೇಧ ಮಾಡಿದ ಬಳಿಕ ಎಚ್ಚರಿಕೆ ಸಂದೇಶವೊಂದರನ್ನು ರಸ್ತೆ ಮೇಲೆ ಬರೆಯಲಾಗಿತ್ತು. ಬಂಟ್ವಾಳ ತಾಲ್ಲೂಕಿನ ನೈನಾಡು ಎಂಬಲ್ಲಿ ದುಷ್ಕರ್ಮಿಗಳು ರಸ್ತೆ ಮೇಲೆ ಎಚ್ಚರಿಕೆ ಸಂದೇಶ ಬರೆದಿದ್ದರು. ಚಡ್ಡಿಗಳೇ ಎಚ್ಚರ..! ಪಿಎಫ್‌ಐ ನಾವು ಮರಳಿ ಬರುತ್ತೇವೆ ಎಂದು ಬರೆಯಲಾಗಿತ್ತು.

PFI Ban: ಪಿಎಫ್‌ಐ ನಿಷೇಧವನ್ನು ಬೆಂಬಲಿಸೊಲ್ಲ: ಅಸಾದುದ್ದೀನ್ ಓವೈಸಿ ವಿರೋಧ
ರಸ್ತೆಯ ಮೇಲೆ ರಾತ್ರಿ ವೇಳೆ ಕಿಡಿಗೇಡಿಗಳು ಬರೆದಿದ್ದ ಈ ಸಂದೇಶದ ಫೋಟೋ ಹಾಗೂ ವಿಡಿಯೋಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿತ್ತು. ಸ್ಥಳಕ್ಕೆ ಹಿಂದೂ ಪರ ಸಂಘಟನೆ ಮುಖಂಡರು, ಕಾರ್ಯಕರ್ತರು ಹಾಗೂ ಪೊಲಿಸರು ಧಾವಿಸಿದ್ದರು.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ