ಆ್ಯಪ್ನಗರ

ಡಿ.1ಕ್ಕೆ ಕಡೂರು, ಬಾಳೆಹೊನ್ನೂರಲ್ಲಿ ಬಿಜೆಪಿ ಗ್ರಾಮ ಸ್ವರಾಜ್ಯ ಸಮಾವೇಶ

ರಾಜ್ಯಾದ್ಯಂತ ನ.27ರಿಂದ ಡಿಸೆಂಬರ್‌ 3ರವರೆಗೆ ಗ್ರಾಮ ಸ್ವರಾಜ್ಯ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಚಿಕ್ಕಮಗಳೂರು, ಕಡೂರು, ತರೀಕೆರೆ ಕ್ಷೇತ್ರಗಳ ಸಮಾವೇಶ ಕಡೂರಿನಲ್ಲಿ, ಮೂಡಿಗೆರೆ, ಶೃಂಗೇರಿ ಕ್ಷೇತ್ರಗಳ ಸಮಾವೇಶ ಬಾಳೆಹೊನ್ನೂರಿನಲ್ಲಿ ಆಯೋಜಿಸಲಾಗಿದೆ.

Vijaya Karnataka Web 29 Nov 2020, 1:37 pm
ಚಿಕ್ಕಮಗಳೂರು: ಗ್ರಾಮ ಪಂಚಾಯಿತಿ ಚುನಾವಣೆ ಗೆಲುವಿಗಾಗಿ ಪ್ರತಿ ಬೂತ್‌ನಲ್ಲಿ 5 ಜನ ಕಾರ‍್ಯಕರ್ತರನ್ನೊಳಗೊಂಡ ಪಂಚರತ್ನ ತಂಡಗಳನ್ನು ರಚನೆ ಮಾಡಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಚ್‌.ಸಿ.ಕಲ್ಮರುಡಪ್ಪ ಹೇಳಿದರು.
Vijaya Karnataka Web ಸಾಂದರ್ಭಿಕ ಚಿತ್ರ
ಸಾಮದರ್ಭಿಕ ಚಿತ್ರ


ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾ.ಪಂ. ಚುನಾವಣೆ ಗೆಲುವಿಗೆ ಪಂಚಸೂತ್ರಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ವಾರ್‌ರೂಮ್‌ಗಳು, ಕಾಲ್‌ ಸೆಂಟರ್‌ಗಳು, ಪಂಚರತ್ನ ತಂಡ, ಪೇಜ್‌ ಪ್ರಮುಖರ ನಿಯುಕ್ತಿ, ಕುಟುಂಬ ಮಿಲನ ಕಾರ‍್ಯಕ್ರಮ ಆಯೋಜಿಸಲಾಗುವುದು ಎಂದರು.

ಶೇ.80ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಅಗತ್ಯ ಯೋಜನೆಗಳನ್ನು ಬಿಜೆಪಿ ವ್ಯವಸ್ಥಿತವಾಗಿ ರೂಪಿಸುತ್ತಿದೆ. ಬೂತ್‌ ಮಟ್ಟದಲ್ಲಿ ಸಂಘಟನೆ ಬಲಪಡಿಸಲು ಸಿಕ್ಕಿರುವ ಒಂದು ಅವಕಾಶವೆಂದು ಪರಿಗಣಿಸಿರುವ ಬಿಜೆಪಿ ನಾಯಕತ್ವ ಮತ್ತು ಕಾರ‍್ಯಕರ್ತರು ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಅತಿ ಹೆಚ್ಚು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಗ್ರಾಮದ ಆಡಳಿತ ಗ್ರಾಮದಲ್ಲಿಯೇ ಇರಬೇಕು, ಆದರ್ಶ ಪಂಚಾಯಿತಿ ವ್ಯವಸ್ಥೆ ಮಾಡಬೇಕು: ಅಶ್ವತ್ಥನಾರಾಯಣ

ಗ್ರಾಮ ಸ್ವರಾಜ್ಯ ಸಮಾವೇಶ

ರಾಜ್ಯಾದ್ಯಂತ ನ.27ರಿಂದ ಡಿಸೆಂಬರ್‌ 3ರವರೆಗೆ ಗ್ರಾಮ ಸ್ವರಾಜ್ಯ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಚಿಕ್ಕಮಗಳೂರು, ಕಡೂರು, ತರೀಕೆರೆ ಕ್ಷೇತ್ರಗಳ ಸಮಾವೇಶ ಕಡೂರಿನಲ್ಲಿ, ಮೂಡಿಗೆರೆ, ಶೃಂಗೇರಿ ಕ್ಷೇತ್ರಗಳ ಸಮಾವೇಶ ಬಾಳೆಹೊನ್ನೂರಿನಲ್ಲಿ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಡಿ.1ರಂದು ಬೆಳಗ್ಗೆ 11ಕ್ಕೆ ಕಡೂರಿನ ಪುಟ್ಟಮ್ಮ ಬೆಂಕಿ ಲಕ್ಷ್ಮಯ್ಯ ಕಲ್ಯಾಣ ಮಂಟಪ, ಮಧ್ಯಾಹ್ನ 3ಕ್ಕೆ ಬಾಳೆಹೊನ್ನೂರಿನ ಬಿಲ್ಲವ ಸಮುದಾಯ ಭವನದಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ನಡೆಯಲಿದೆ. ಜಿಲ್ಲೆಯಲ್ಲಿ 209 ಗ್ರಾ.ಪಂ.ಗಳ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಎಲ್ಲ ಬೂತ್‌ಗಳಲ್ಲಿ ಪಂಚರತ್ನಗಳನ್ನು ನೇಮಕ ಮಾಡಿ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸಲಾಗುವುದು ಎಂದರು.
ಇಡೀ ರಾಜ್ಯದಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ: ಕಂದಾಯ ಸಚಿವ ಆರ್‌ ಅಶೋಕ್‌

ಸಮಾವೇಶದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ, ಕಾನೂನು ಸಚಿವ ಮಾಧುಸ್ವಾಮಿ, ಸಂಸದರಾದ ಬಿ.ವೈ.ರಾಘವೇಂದ್ರ, ಜಿ.ಎಂ.ಸಿದ್ದೇಶ್‌, ಜಿ.ಎಸ್‌.ಬಸವರಾಜ್‌, ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ, ತುಳಸಿ ಮುನಿರಾಜುಗೌಡ, ವಿವೇಕಾನಂದ ದಬ್ಬಿ, ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಸ್ಥಳೀಯ ಮುಖಂಡರು ಪಾಲ್ಗೊಳ್ಳುವರು ಎಂದರು.ಬಿಜೆಪಿ ಜಿಲ್ಲಾಕಾರ‍್ಯದರ್ಶಿ ದೇವರಾಜ ಶೆಟ್ಟಿ, ನಗರಸಭೆ ಮಾಜಿ ಸದಸ್ಯ ಎಚ್‌.ಡಿ.ತಮ್ಮಯ್ಯ, ಜಿಲ್ಲಾವಕ್ತಾರ ವರಸಿದ್ಧಿ ವೇಣುಗೋಪಾಲ್‌, ಸಹ ಕಾರ‍್ಯದರ್ಶಿ ಕವಿತಾ ಶೇಖರ್‌, ಮಾಧ್ಯಮ ಪ್ರಮುಖ್‌ ಸುಧೀರ್‌ ಹಾಜರಿದ್ದರು.

ಬಾಲಿಶವಾದ ನಡೆ

ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಗಿರೀಶ್‌ ಉಪ್ಪಾರ್‌ ನೇಮಕ ಜಿಲ್ಲಾ ಬಿಜೆಪಿಗೂ ಅಚ್ಚರಿ ಉಂಟು ಮಾಡಿದೆ. 2023ಕ್ಕೆ ಕಡೂರು ಶಾಸಕ ಎಂದು ಉಪ್ಪಾರ್‌ ಹಿಂಬಾಲಕರು ವಾಟ್ಸಾಪ್‌ನಲ್ಲಿ ಹಾಕಿಕೊಂಡಿದ್ದು, ಇದನ್ನು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದೆ. ಜಿ.ಪಂ. ಅಧ್ಯಕ್ಷರು ಬಿಜೆಪಿ ಚಿಹ್ನೆಯಲ್ಲಿ ಗೆದ್ದು, ಪಕ್ಷದ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ಪಕ್ಷ ಅವರನ್ನು ಅಮಾನತು ಮಾಡಿದೆ. ದಲಿತ ದೌರ್ಜನ್ಯ ಕಾಯಿದೆಯಡಿ ತಮಗೆ ನೋಟಿಸ್‌ ನೀಡಿರುವುದು ಬಾಲಿಶವಾಗಿದೆ.
ಎಚ್‌.ಸಿ.ಕಲ್ಮರುಡಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ