ಆ್ಯಪ್ನಗರ

ದೇಶದ ಅಭಿವೃದ್ಧಿ ಗುರಿಯೇ ಬಿಜೆಪಿ ಪ್ರಣಾಳಿಕೆ

ಪ್ರಧಾನಿ ನರೇಂದ್ರ ಮೋದಿ ಅವರ 5 ವರ್ಷದ ಆಡಳಿತ ಹಾಗೂ ಈ ಬಾರಿಯ ಚುನಾವಣಾ ಪ್ರಣಾಳಿಕೆ ದೇಶ ಅಭಿವೃದ್ಧಿಯತ್ತ ಕೊಂಡೊಯ್ಯುವ ಗುರಿ ಹೊಂದಿರುವುದರಿಂದ ಎನ್‌ಡಿಎ 350 ಸ್ಥಾನ ಗಳಿಸಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ತಾ.ಪಂ. ಅಧ್ಯಕ್ಷ ಕೆ.ಸಿ.ರತನ್‌ ವಿಶ್ವಾಸ ವ್ಯಕ್ತಪಡಿಸಿದರು.

Vijaya Karnataka 10 Apr 2019, 5:00 am
ಮೂಡಿಗೆರೆ: ಪ್ರಧಾನಿ ನರೇಂದ್ರ ಮೋದಿ ಅವರ 5 ವರ್ಷದ ಆಡಳಿತ ಹಾಗೂ ಈ ಬಾರಿಯ ಚುನಾವಣಾ ಪ್ರಣಾಳಿಕೆ ದೇಶ ಅಭಿವೃದ್ಧಿಯತ್ತ ಕೊಂಡೊಯ್ಯುವ ಗುರಿ ಹೊಂದಿರುವುದರಿಂದ ಎನ್‌ಡಿಎ 350 ಸ್ಥಾನ ಗಳಿಸಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ತಾ.ಪಂ. ಅಧ್ಯಕ್ಷ ಕೆ.ಸಿ.ರತನ್‌ ವಿಶ್ವಾಸ ವ್ಯಕ್ತಪಡಿಸಿದರು.
Vijaya Karnataka Web bjps manifesto is development of country
ದೇಶದ ಅಭಿವೃದ್ಧಿ ಗುರಿಯೇ ಬಿಜೆಪಿ ಪ್ರಣಾಳಿಕೆ


ಅವರು ಮಂಗಳವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ಪ್ರಣಾಳಿಕೆಯಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರಿಗೆ ಪಿಂಚಣಿ ಯೋಜನೆ, 1.ಲಕ್ಷ ದ ಕಿಸಾನ್‌ ಕ್ರೆಡಿಟ್‌ ಕಾರ್ಡ್‌, ಇದರ ಸಾಲ ಮರುಪಾವತಿಗೆ 1 ವರ್ಷದವರೆಗೆ ಅವಕಾಶ, ಅಯೋಧೆÜ್ಯಯಲ್ಲಿ ರಾಮ ಮಂದಿರ ನಿರ್ಮಾಣ, ಕಾಶ್ಮೀರದ 370 ಮತ್ತು 35 ಎ ವಿಧಿಯನ್ನು ರದ್ದು, ಸಂಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ಸಂಕಲ್ಪವನ್ನು ಸೇರಿಸಲಾಗಿದೆ. ಇದರಿಂದ ನರೇಂದ್ರ ಮೋದಿ ಅವರ ಮೇಲಿನ ಅಭಿಮಾನ ದೇಶದ ಜನತೆಗೆ ಇನ್ನಷ್ಟು ಹೆಚ್ಚಿದೆ ಎಂದು ಹೇಳಿದರು.

50 ವರ್ಷ ಕಾಂಗ್ರೆಸ್‌ ಆಡಳಿತದ ಸಾಧನೆ ಶೂನ್ಯವಾಗಿದೆ. ಈಗ ಮತ್ತೊಮ್ಮೆ ಅವಕಾಶ ನೀಡಿ ಎಂದು ಜನತೆಯ ಮುಂದೆ ದುಂಬಾಲು ಬಿದ್ದರೆ ಕಾಂಗ್ರೆಸ್‌ನ್ನು ನಂಬುವವರಾರು? ಸಂಸದೆ ಶೋಭಾ ಕರಂದ್ಲಾಜೆ ಅವರು, ಚಿಕ್ಕಮಗಳೂರು- ಮೂಡಿಗೆರೆ ಹೆದ್ದಾರಿ ಅಭಿವೃದ್ಧಿಗೆ 7.ಕೋಟಿ, ಹ್ಯಾಂಡ್‌ಪೋಸ್ಟ್‌ನಿಂದ ಕೊಟ್ಟಿಗೆಹಾರದವರೆಗೆ 37.ಕೋಟಿ, ಬೇಲೂರಿನಿಂದ ಮೂಡಿಗೆರೆಗೆ ಹೆದ್ದಾರಿಗೆ 13.ಕೋಟಿ ಅನುದಾನ ತಂದಿದ್ದಾರೆ. ವಾಜಪೇಯಿ, ಅಂಬೇಡ್ಕರ್‌, ಬಸವ ವಸತಿ ಯೋಜನೆಯಲ್ಲಿ ತಾಲೂಕಿನಲ್ಲಿ ಮನೆಗಳ ನಿರ್ಮಾಣ, ದೀನ್‌ ದಯಾಳ್‌ ಯೋಜನೆಯಲ್ಲಿ ವಿದ್ಯುತ್‌ ಸಂಪರ್ಕ, ಉಜ್ವಲ ಯೋಜನೆಯಲ್ಲಿ ಗ್ಯಾಸ್‌ ವಿತರಣೆ, ದಲಿತ ವರ್ಗಕ್ಕೆ 15, ಸಾವಿರ ಇತರರಿಗೆ 12. ಸಾವಿರ ಶೌಚಾಲಯ ನಿರ್ಮಾಣ ಭರತ ಮೂಲ ಯೋಜನೆಯಲ್ಲಿ ಕಡೂರಿನಿಂದ ಮೂಡಿಗೆರೆ ಬೈರಾಪುರ ಶಿಶಿಲಾ ಹೊಸ ರಸ್ತೆ ನಿರ್ಮಾಣಕ್ಕೆ ಕೇಂದ್ರದಿಂದ 7.ಸಾವಿರ ಕೋಟಿ ಬಿಡುಗಡೆ. ಇದು ಸಂಸದರ ಕೊಡುಗೆ ಎಂದು ತಿಳಿಸಿದರು.

ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಬಿಜೆಪಿಯಿಂದ ಗೋಬ್ಯಾಕ್‌ ಚಳವಳಿ ನಡೆದಿದೆ ಎಂಬುದು ಶುದ್ಧ ಸುಳ್ಳು. ಶೋಭಾ ಅವರಿಗೆ ಪಕ್ಷ ಟಿಕೇಟ್‌ ನೀಡಿ ಕಣಕ್ಕಿಳಿಸಿದ ದಿನದಿಂದ ಬಿಜೆಪಿಯ ಎಲ್ಲ ಕಾರ್ಯಕರ್ತರು ಸಣ್ಣಪುಟ್ಟ ಬಿನ್ನಾಭಿಪ್ರಾಯ ಮರೆತು ಕೆಲಸ ಮಾಡುತ್ತಿದ್ದಾರೆ. ಅಭ್ಯರ್ಥಿ ಶೋಭಾ ಕರಂದ್ಲಾಜೆ ಬಾರಿ ಅಂತರದ ಮತಗಳಿಕೆ ಮೂಲಕ ಮತ್ತೊಮ್ಮೆ ಸಂಸದೆಯಾಗಲಿದ್ದಾರೆ ಎಂದು ರತನ್‌ ತಿಳಿಸಿದರು. ಗೋಷ್ಠಿಯಲ್ಲಿ ತಾ.ಪಂ. ಸದಸ್ಯ ಬಿ.ಎಲ್‌.ದೇವರಾಜು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ