ಆ್ಯಪ್ನಗರ

ಕಾರ್ಪೋರೇಟ್‌ ಪರವಾಗಿ ಬಿಜೆಪಿ ನೀತಿ

ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಸಿಪಿಐ(ಎಂ.ಎಲ್‌) ರೆಡ್‌ಸ್ಟಾರ್‌ ಪಕ್ಷದ ಅಭ್ಯರ್ಥಿ ವಿಜಯಕುಮಾರ್‌ ಅವರ ಪ್ರಚಾರ ಕಾರ್ಯಕ್ಕೆ ಮೂಡಿಗೆರೆ ಸರ್ವೋದಯ ನಗರದಲ್ಲಿ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ್‌ ಚಾಲನೆ ನೀಡಿದರು.

Vijaya Karnataka 12 Apr 2019, 5:00 am
ಚಿಕ್ಕಮಗಳೂರು: ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಸಿಪಿಐ(ಎಂ.ಎಲ್‌) ರೆಡ್‌ಸ್ಟಾರ್‌ ಪಕ್ಷದ ಅಭ್ಯರ್ಥಿ ವಿಜಯಕುಮಾರ್‌ ಅವರ ಪ್ರಚಾರ ಕಾರ್ಯಕ್ಕೆ ಮೂಡಿಗೆರೆ ಸರ್ವೋದಯ ನಗರದಲ್ಲಿ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ್‌ ಚಾಲನೆ ನೀಡಿದರು.
Vijaya Karnataka Web bjps policy on corporate behalf
ಕಾರ್ಪೋರೇಟ್‌ ಪರವಾಗಿ ಬಿಜೆಪಿ ನೀತಿ


ಹಳೇಕೋಟೆ, ಮಗ್ಗಲಮಕ್ಕಿ ಕಿತ್ತಲೆಗಂಡಿ, ಬಣಕಲ್‌ ಮತ್ತಿಕಟ್ಟೆ ಮತ್ತಿತರೆ ಕಡೆ ನಡೆದ ಸಾರ್ವಜನಿಕ ಸಭೆಯಲ್ಲಿ ಅಭ್ಯರ್ಥಿ ಕಾಮ್ರೇಡ್‌ ವಿಜಯಕುಮಾರ್‌ ಮಾತನಾಡಿ, 2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಬಿಜೆಪಿ ಸರಕಾರ ಕಾರ್ಪೋರೇಟ್‌ ಲಾಬಿಗೆ ಪೂರಕವಾದ ನೀತಿಗಳನ್ನು ಜಾರಿ ಮಾಡಿದೆ. ಮತ್ತೊಮ್ಮೆ ಅಧಿಕಾರಕ್ಕಾಗಿ ಸುಳ್ಳುಗಳ ಸರಮಾಲೆಯನ್ನೇ ಜನತೆಯ ಮುಂದಿಡುತ್ತಿದೆ. ಕೇಂದ್ರ ಸರಕಾರ ಬಿಂಬಿಸಿದ ಮೇಕ್‌ ಇನ್‌ ಇಂಡಿಯಾ ಕಾರ್ಯಕ್ರಮದ ಲೋಗೊ ವಿನ್ಯಾಸ ಮಾಡಿದ್ದು ವೈಕನ್‌, ಕೆನಡಿ ಎಂಬ ವಿದೇಶಿ ಕಂಪನಿಯಾಗಿದೆ. ಗುಜರಾತ್‌ನಲ್ಲಿ ಸರ್ದಾರ್‌ ಪಟೇಲರ ವಿಗ್ರಹ ಮಾಡಿದ್ದು ಚೀನಾ ಕಂಪನಿ. ಎಟಿಎಂಗಳ ಸಾಫ್ಟ್‌ವೇರ್‌ ಕೂಡಾ ಚೀನಾದಿಂದ ತಯಾರಿಸಿದ್ದನ್ನು ಮುಚ್ಚಿಡಲಾಗಿದೆ ಎಂದರು.

ನೋಟು ಅಮ್ಯಾನೀಕರಣದಿಂದ 5 ಲಕ್ಷ ಕೋಟಿ ರೂ. ಕಪ್ಪುಹಣವನ್ನು ಬಿಳಿಹಣವನ್ನಾಗಿಸಲಾಗಿದೆ. ರಾಷ್ಟ್ರೀಯ ಆದಾಯ ಶೇ.3ರಿಂದ 2ರಷ್ಟಕ್ಕೆ ಕುಸಿತಗೊಂಡಿದೆ. ದೇಶದ ಸಾಲದ ಪ್ರಮಾಣ 54 ಲಕ್ಷ ಕೋಟಿಯಿಂದ 82 ಲಕ್ಷ ಕೋಟಿ ರೂ.ಗೆ ಏರಿದೆ. ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಶೇ.400ರಷ್ಟು ಹೆಚ್ಚಾಗಿದೆ. ಹಸಿವಿನ ಸೂಚ್ಯಂಕದಲ್ಲಿ 119 ದೇಶಗಳ ಪಟ್ಟಿಯಲ್ಲಿ ಭಾರತ 100ನೇ ಸ್ಥಾನದಲ್ಲಿದೆ. 25 ಪೈಸೆಗೆ ಸಿಗುವ ಔಷಧ 25 ರೂ.ಗೆ ಏರಿಕೆಯಾಗಿದೆ. ದೇಶದ 9 ಬಿಲಿಯನ್‌ ಜನರ ದಿನದ ಆದಾಯ 2200 ಕೋಟಿ ರೂ.ಗೆ ಏರಿದೆ ಎಂದು ಆರೋಪಿಸಿದರು.

ದೇಶದ ಆರ್ಥಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ರಂಗಗಳು ದಿವಾಳಿಯಾಗಿದ್ದು, ಕೃಷಿ, ಕೈಗಾರಿಕೆ, ಶಿಕ್ಷ ಣ ಸೇರಿದಂತೆ ಎಲ್ಲ ಸೇವಾ ವಲಯಗಳು ಉದ್ಯಮಿಗಳ ಪಾಲಾಗಿವೆ. ಹಳ್ಳಿಗಳಲ್ಲಿ ಕೋಮುವಾದಿ ವಿಭಜನಕಾರಿ ನೀತಿ ಮಿತಿಮೀರಿದೆ. ರೈತರ ಆತ್ಮಹತ್ಯೆ, ದಲಿತ, ಆದಿವಾಸಿಗಳ ಮೇಲೆ ಹಲ್ಲೆ, ದಮನ, ದಬ್ಬಾಳಿಕೆ ಅನ್ಯಾಯಗಳು ಮಿತಿ ಮೀರಿವೆ. ಈ ಕಾರಣದಿಂದ ಈ ಬಾರಿ ಬಿಜೆಪಿಯನ್ನು ಸೋಲಿಸಬೇಕು ಎಂದು ಮನವಿ ಮಾಡಿದರು.

ಪಕ್ಷದ ಜಿಲ್ಲಾ ಕಾರ್ಯದರ್ಶಿ ಸಿ.ಜೆ.ಜಗನ್ನಾಥ್‌ ಮಾತನಾಡಿ, ಎಲ್ಲ ಪಕ್ಷ ಗಳು ಬಿಜೆಪಿಯನ್ನು ಸೋಲಿಸಲು ಪಣತೊಟ್ಟಿವೆ. ಆದರೆ, ಅವರ ಬಳಿ ಜನತೆ ಪರವಾದ ಪರ್ಯಾಯ ಕಾರ್ಯಕ್ರಮಗಳಿಲ್ಲ. ಹೀಗಾಗಿ ಕಾಂಗ್ರೆಸ್‌ ಸೇರಿದಂತೆ ಎಲ್ಲ ಪಕ್ಷ ಗಳು ದೇಶದ ಸಂಪತ್ತನ್ನು ಮಾರುವವರೇ ಆಗಿದ್ದಾರೆ. ಒತ್ತುವರಿ, ಉದ್ಯೋಗ, ವಸತಿ, ಕುಡಿಯುವ ನೀರು, ರಸ್ತೆ ಒಟ್ಟಾರೆ ದೇಶದ ಅಭಿವೃದ್ಧಿ ಕಡೆಗೆ ಚಿಂತಿಸದೆ ಪಕ್ಷ ವನ್ನು ಅಧಿಕಾರಕ್ಕೆ ಬೇಕಾದ ಕುತಂತ್ರದ ಕಾರ್ಯಕ್ರಮ ರೂಪಿಸುತ್ತಿದ್ದಾರೆ ಎಂದು ದೂರಿದರು.

ಕಾರ್ಮಿಕರ, ರೈತರ, ಬಡವರ, ದಲಿತರ, ಆದಿವಾಸಿ, ಅಲ್ಪಸಂಖ್ಯಾತರ ದುಃಖಕ್ಕೆ ಕಾರಣರಾಗಿರುವ ಈ ಪಕ್ಷ ಗಳನ್ನು ಸೋಲಿಸಿ, ದೇಶದ ಸಂಪತ್ತು, ದೇಶದ ಜನತೆಗೆ ಸೇರಿದ್ದು ಹಾಗೂ ಸಿರಿವಂತಿಕೆ ನಿರ್ಮೂಲನೆಯಾಗದೆ ಬಡತನ ನಿರ್ಮೂಲನೆ ಆಗದು. ಜಾತಿವಾದ, ಧಾರ್ಮಿಕವಾದ, ಭಾಷಾದ್ವೇಷಗಳನ್ನು ಬಿತ್ತುವ ಫ್ಯಾಸಿಸ್ಟ್‌ ಕೋಮುವಾದಿ ಶಕ್ತಿಗಳನ್ನು ಸೋಲಿಸಿ. ಬಡವರಿಗಾಗಿ ಹೋರಾಡುವ ಸಿಪಿಐ(ಎಂ.ಎಲ್‌) ರೆಡ್‌ಸ್ಟಾರ್‌ ಪಕ್ಷ ದ ಅಭ್ಯರ್ಥಿ ವಿಜಯಕುಮಾರ್‌ ಬೆಂಬಲಿಸಬೇಕು ಎಂದು ಮನವಿಮಾಡಿದರು. ಮುಖಂಡರಾದ ಬಸವರಾಜ್‌, ಪರಮೇಶ್‌, ಗೋಪಾಲ್‌, ನಾರಾಯಣ, ಶೇಖರ್‌, ಪುಟ್ಟಸ್ವಾಮಿ, ಬಿ.ಪರಮೇಶ್‌, ಶಿವಣ್ಣ, ಸಂದೀಪ್‌, ಮಲ್ಲೇಶ್‌, ಸುನಿತ, ನಾಗೇಶ್‌.ಬಿ.ಎಸ್‌., ನಂಜಪ್ಪ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ