ಆ್ಯಪ್ನಗರ

ಬಾಳೆಹೊನ್ನೂರು: ತಂದೆಗೆ ಹಲ್ಲೆ ಮಾಡುತ್ತಿದ್ದ ಅಣ್ಣನನ್ನು ಹೊಡೆದು ಕೊಂದ ತಮ್ಮ!

ತಂದೆಯ ಮೇಲೆ ಹಲ್ಲೆ ಮಾಡುತ್ತಿದ್ದ ಅಣ್ಣನನ್ನು ತಪ್ಪಿಸುವ ಭರದಲ್ಲಿ ತಮ್ಮ ದೊಣ್ಣೆಯಿಂದ ಹೊಡೆದ ಪರಿಣಾಮ ಅಣ್ಣ ಸ್ಥಳದಲ್ಲೇ ಮೃತಪಟ್ಟ ಘಟನೆ ನರಸಿಂಹರಾಜಪುರ ತಾಲೂಕು ಸೀಕೆಯಲ್ಲಿ ಗುರುವಾರ ನಡೆದಿದೆ. ದರ್ಶನ್‌ (26) ಮೃತಪಟ್ಟ ಯುವಕ. ಈತ ಪಾನಮತ್ತನಾಗಿ ತನ್ನ ತಂದೆ ಅಣ್ಣೇಗೌಡ ಎಂಬುವವರ ಮೇಲೆ ಹಲ್ಲೆಮಾಡುತ್ತಿದ್ದಾಗ ಆತನ ತಮ್ಮ ಹರ್ಷನ್‌ ಅದನ್ನು ತಪ್ಪಿಸಲು ಹೋಗಿದ್ದಾಗ ಅವಘಡ ಸಂಭವಿಸಿದೆ.

Vijaya Karnataka Web 8 Jan 2021, 11:22 am
ಬಾಳೆಹೊನ್ನೂರು: ತನ್ನ ತಂದೆಯ ಮೇಲೆ ಹಲ್ಲೆ ಮಾಡುತ್ತಿದ್ದ ಅಣ್ಣನನ್ನು ತಪ್ಪಿಸುವ ಭರದಲ್ಲಿ ತಮ್ಮ ದೊಣ್ಣೆಯಿಂದ ಹೊಡೆದ ಪರಿಣಾಮ ಅಣ್ಣ ಸ್ಥಳದಲ್ಲೇ ಮೃತಪಟ್ಟ ಘಟನೆ ನರಸಿಂಹರಾಜಪುರ ತಾಲೂಕು ಸೀಕೆಯಲ್ಲಿ ಗುರುವಾರ ನಡೆದಿದೆ. ದರ್ಶನ್‌ (26) ಮೃತಪಟ್ಟ ಯುವಕ. ಈತ ಪಾನಮತ್ತನಾಗಿ ತನ್ನ ತಂದೆ ಅಣ್ಣೇಗೌಡ ಎಂಬುವವರ ಮೇಲೆ ಹಲ್ಲೆಮಾಡುತ್ತಿದ್ದಾಗ ಆತನ ತಮ್ಮ ಹರ್ಷನ್‌ ಅದನ್ನು ತಪ್ಪಿಸಲು ಹೋಗಿದ್ದಾರೆ.
Vijaya Karnataka Web Darshan


ಆದರೆ, ಮತ್ತಷ್ಟು ಕೋಪಗೊಂಡ ದರ್ಶನ್‌ ತನ್ನ ಸಹೋದರ ಹರ್ಷನ್‌ ಮೇಲೆ ಮಚ್ಚಿನಿಂದ ಹೊಡೆಯಲು ಯತ್ನಿಸಿದ್ದಾನೆ. ಮಚ್ಚಿನ ಏಟಿನಿಂದ ಪಾರಾಗುವ ಭರದಲ್ಲಿ ಹರ್ಷನ್‌ ದೊಣ್ಣೆಯಿಂದ ಬಲವಾಗಿ ಹೊಡೆದ ಪರಿಣಾಮ ದರ್ಶನ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಂದೆ ಅಣ್ಣೇಗೌಡ ಬಾಳೆಹೊನ್ನೂರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿ ಹರ್ಷನ್‌ನನ್ನು ಪೊಲೀಸರು ಬಂಧಿಸಿದ್ದು, ಪ್ರಭಾರಿ ಡಿವೈಎಸ್ಪಿ ಡಿ.ಟಿ.ಪ್ರಭು, ವೃತ್ತ ನಿರೀಕ್ಷಕ ಸುರೇಶ್‌, ಠಾಣಾಧಿಕಾರಿ ನೀತು ಆರ್‌. ಗುಡೆ ಸ್ಥಳಕ್ಕೆ ಭೇಟಿ ನೀಡಿದ್ದರು.

ನಾನೊಬ್ಬನೇ ಸಿಕ್ಕಿರುವುದು ಎಲ್ಲರಿಗೂ ಟೀಕೆ ಮಾಡಲು: ಕಡೂರಲ್ಲಿ ಸಿದ್ದರಾಮಯ್ಯ ಬೇಸರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ