ಆ್ಯಪ್ನಗರ

ಮಗುವಿಗೆ 6 ತಿಂಗಳವರೆಗೆ ಎದೆಹಾಲು ಕುಡಿಸಿ

ಮಗು ಹುಟ್ಟಿ 6 ತಿಂಗಳವರೆಗೆ ಮಾತ್ರ ಎದೆಹಾಲು ಕುಡಿಸಬೇಕು ಎಂದು ಸರಕಾರಿ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ.ಚಂದ್ರಪ್ರಭ ಸಲಹೆ ನೀಡಿದರು.

Vijaya Karnataka 4 Aug 2018, 5:00 am
ನರಸಿಂಹರಾಜಪುರ : ಮಗು ಹುಟ್ಟಿ 6 ತಿಂಗಳವರೆಗೆ ಮಾತ್ರ ಎದೆಹಾಲು ಕುಡಿಸಬೇಕು ಎಂದು ಸರಕಾರಿ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ.ಚಂದ್ರಪ್ರಭ ಸಲಹೆ ನೀಡಿದರು.
Vijaya Karnataka Web breast feeding for a baby for 6 months
ಮಗುವಿಗೆ 6 ತಿಂಗಳವರೆಗೆ ಎದೆಹಾಲು ಕುಡಿಸಿ


ಸರಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ಆರೋಗ್ಯ ಇಲಾಖೆ, ರೋಟರಿ ಕ್ಲಬ್‌, ಇನ್ನರ್‌ ವೀಲ್‌ ಸಂಸ್ಥೆ ಹಾಗೂ ಭಾರತೀಯ ಮಾನವ ಹಕ್ಕುಗಳ ಸಂರಕ್ಷಣಾ ವೇದಿಕೆಯ ಮಹಿಳಾ ಘಟಕದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ತನ್ಯ ಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

ತಾಯಿ ದೇಹದಲ್ಲಿ ಹಾರ್ಮೋನು ಬಿಡುಗಡೆಯಾಗುವುದರಿಂದ ಹಾಲು ಉತ್ಪತ್ತಿಯಾಗುತ್ತದೆ. ತಾಯಿಯ ಎದೆಹಾಲು ಅಮೃತಕ್ಕೆ ಸಮಾನ. ಅದು ಮಗುವಿಗೆ ಸುಲಭವಾಗಿ ಜೀರ್ಣವಾಗುತ್ತದೆ. ರೋಗ ಮುಕ್ತವಾಗಿರುತ್ತದೆ. ಆದರೆ, ಹಲವಾರು ಮಹಿಳೆಯರು ಮಕ್ಕಳಿಗೆ ಎದೆಹಾಲು ಕುಡಿಸಿದರೆ ಸೌಂದರ್ಯ ಹಾಳಾಗುತ್ತದೆ ಎಂದು ನಂಬಿದ್ದಾರೆ. ಮಗುವಿಗೆ ಎದೆಹಾಲು ನೀಡುವುದರಿಂದ ಮಹಿಳೆಯ ಬೊಜ್ಜಿನ ಅಂಶ ಕಡಿಮೆಯಾಗಿ ಸೌಂದರ್ಯ ವೃದ್ಧಿಸಲಿದೆ. ಎದೆಹಾಲನ್ನು ನೀಡದಿದ್ದರೆ ಮಗು ಅಪೌಷ್ಟಿಕತೆಯಿಂದ ಬಳಲುತ್ತದೆ ಎಂದರು.

ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಎಲ್ದೋಸ್‌ ಮಾತನಾಡಿ, ತಾಯಿಯ ಎದೆಹಾಲು ಪ್ರಕೃತಿ ಸಹಜವಾಗಿ ಬಂದಿರುತ್ತದೆ. ಗರ್ಭಿಣಿಯರು ಮಗುವಿಗೆ ಎದೆಹಾಲು ಕೊಡುವ ವಿಧಾನವನ್ನು ತಿಳಿದುಕೊಂಡಿರಬೇಕು. ಮಗುವಿಗೆ 6 ತಿಂಗಳವರೆಗೆ ಎದೆಹಾಲು ನೀಡಿ ನಂತರ ನಾವು ತಿನ್ನುವ ಆಹಾರವನ್ನು ನೀಡಬಹುದು ಎಂದರು.

ಇನ್ನರ್‌ ವೀಲ್‌ ಕ್ಲಬ್‌ ಅಧ್ಯಕ್ಷೆ ಸುಮ ಶ್ಯಾಮಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ತಾಯಿಯೂ ಮಗುವಿಗೆ ಎದೆಹಾಲು ನೀಡಬೇಕು. ತಾಯಿಯ ಹಾಲು ಅಮೃತ ಸಮಾನ ಎಂದರು.

ಭಾರತೀಯ ಮಾನವ ಹಕ್ಕುಗಳ ಸಂರಕ್ಷಣಾ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ಜುಬೇದ ಮಾತನಾಡಿ, ಹಲವು ತಾಯಿಂದರು ನಿತ್ಯ ಉದ್ಯೋಗಕ್ಕೆ ಹೋಗಬೇಕಾಗಿರುವುದರಿಂದ ಮಗುವಿಗೆ ಎದೆಹಾಲು ನೀಡುತ್ತಿಲ್ಲ. 6 ತಿಂಗಳವರೆಗೆ ಎದೆಹಾಲು ನೀಡದಿದ್ದರೆ ಮಗು ಅಪೌಷ್ಟಿಕತೆಯಿಂದ ಬಳಲುತ್ತದೆ ಎಂದರು.

ರೋಟರಿ ಕ್ಲಬ್‌ ಅಧ್ಯಕ್ಷ ಎಚ್‌.ಎಸ್‌.ಜಯರಾಂ, ಕಾರ್ಯದರ್ಶಿ ಕಿರಣ್‌, ಇನ್ನರ್‌ ವೀಲ್‌ ಕ್ಲಬ್‌ ಖಜಾಂಚಿ ಪೂರ್ಣಿಮ ಕಿರಣ್‌ ಉಪಸ್ಥಿತರಿದ್ದರು.

ಗಾಯತ್ರಿ ಪ್ರಾರ್ಥಿಸಿ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಿಕ ಪಿ.ಪ್ರಭಾಕರ್‌ ಸ್ವಾಗತಿಸಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬೇಬಿ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ