ಆ್ಯಪ್ನಗರ

ಕೊರೊನಾ ಎಫೆಕ್ಟ್‌: ಚಿಕ್ಕಮಗಳೂರಿನಲ್ಲಿ ಮಾಸ್ಕ್‌ ಧರಿಸಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

ಕೊರೊನಾ ಹೆಸರು ಕೇಳಿದರೆ ಸದ್ಯ ಜನ ಹೆದರುತ್ತಿದ್ದಾರೆ. ಕೊರೊನಾ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್‌ಡೌನ್‌ ಘೋಷಿಸಲಾಗಿದೆ. ಇದರ ನಡುವೆಯೇ ಜೋಡಿಯೊಂದು ವಿಶಿಷ್ಟವಾಗಿ ಮದುವೆಯಾಗಿದ್ದು, ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಮಾಸ್ಕ್‌ ಧರಿಸಿಯೇ ಮದುವೆಯಾದ ಚಿಕ್ಕಮಗಳೂರಿನ ಜೋಡಿ ಇತರರಿಗೆ ಮಾದರಿಯಾಗಿದ್ದಾರೆ.

Vijaya Karnataka Web 5 Apr 2020, 2:50 pm
ಚಿಕ್ಕಮಗಳೂರು: ಇಡೀ ಪ್ರಪಂಚವನ್ನು ಸದ್ಯ ಕೊರೊನಾ ವೈರಸ್‌ ನಡುಗಿಸುತ್ತಿದೆ. ಜನರಂತೂ ಕೊರೊನಾ ಹೆಸರು ಕೇಳಿದರೆ ಸಾಕು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಇದರ ಮಧ್ಯೆಯೇ ಜನರಿಂದ ಜಾಗೃತಿಯ ಕೆಲಸವೂ ನಡೆಯುತ್ತಿದೆ. ಹೌದು, ಚಿಕ್ಕಮಗಳೂರಿನಲ್ಲಿ ಜೋಡಿಯೊಂದ ಮಾಸ್ಕ್‌ ಧರಿಸಿಯೇ ಸರಳ ವಿವಾಹವಾಗಿದ್ದು, ಜಾಗೃತಿ ಮೂಡಿಸುವುದರ ಜೊತೆಗೆ ಎಲ್ಲರಿಗೂ ಮಾದರಿಯಾಗಿದ್ದಾರೆ.
Vijaya Karnataka Web CHIKKAMAGALURU


ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್‌ನಲ್ಲಿ ಮಾಸ್ಕ್ ಧರಿಸಿಯೇ ಸುಶಾಂತ್‌, ನಿಶ್ಚಿತಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಚರ್ಚ್‍ನಲ್ಲಿ ನಿಗದಿಯಾಗಿದ್ದ ಮದುವೆಯನ್ನು ಸರಳವಾಗಿ ವಧುವಿನ ಮನೆಯಲ್ಲಿ ಮಾಡಲಾಗಿದ್ದು, ಕುಟುಂಬಸ್ಥರೆಲ್ಲರೂ ಮಾಸ್ಕ್ ಧರಿಸಿ ವಿವಾಹದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.

ಎರಡು ತಿಂಗಳ ಹಿಂದೆಯೇ ಸುಶಾಂತ್‌ ಮತ್ತು ನಿಶ್ಚಿತಾ ಮದುವೆ ನಿಶ್ಚಯವಾಗಿತ್ತು. ಆದರೆ, ವಿವಾಹ ಹತ್ತಿರವಾಗುತ್ತಿದ್ದಂತೆ ಕೊರೊನಾ ಭೀತಿಯಲ್ಲಿ ದೇಶಾದ್ಯಂತ ಲಾಕ್‌ಡೌನ್‌ ಘೋಷಿಸಲಾಯಿತು. ಇದರಿಂದ ವಿವಾಹ ಮುಂದೂಡುವ ನಿರ್ಧಾರಕ್ಕೆ ಎರಡು ಕುಟುಂಬಗಳು ಮೊದಲು ತೀರ್ಮಾನಿಸಿದ್ದವು. ಆದರೆ, ನಂತರ, ನಿಗದಿತ ದಿನದಂದೇ ಸರಳ ಮದುವೆಯನ್ನು ಮಾಡಲು ನಿಶ್ಚಯಿಸಿದ್ದರು.

ಚಿಕ್ಕಮಗಳೂರು: ಕೊರೊನಾ ಚಿಕಿತ್ಸೆ ಪಡೆಯದವರಿಗೆ ಜೀವಾವಧಿ ಶಿಕ್ಷೆ, ಶೋಭಾ ಕರಂದ್ಲಾಜೆ ಆಗ್ರಹ

ಚರ್ಚ್‌ನಲ್ಲಿ ನಡೆಯಬೇಕಿದ್ದ ಮದುವೆಯನ್ನು ವಧುವಿನ ಮನೆಯಲ್ಲಿ ಮಾಡಲಾಯಿತು. ವಿವಾಹದಲ್ಲಿ ಕೇವಲ ಬೆರಳೆಣಿಕೆಯಷ್ಟು ಕುಟುಂಬ ಸದಸ್ಯರು ಮಾತ್ರ ಪಾಲ್ಗೊಂಡಿದ್ದರು. ಇದರ ಜೊತೆ ಈ ವಿವಾಹದಲ್ಲಿ ಕೊರೊನಾ ವೈರಸ್‌ ಹರಡದಂತೆ ರಕ್ಷಣಾ ಕ್ರಮಗಳನ್ನು ಪಾಲಿಸುವ ಮೂಲಕ ಇತರರಲ್ಲಿ ಜಾಗೃತಿ ಮೂಡಿಸಿದ್ದಾರೆ.

ವಿದೇಶದಿಂದ ಬಂದಿದ್ದ ವೃದ್ದೆ ಸಾವು, ಚಿಕ್ಕಮಗಳೂರು ಜನರಲ್ಲಿ ಮನೆ ಮಾಡಿದ ಆತಂಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ