ಆ್ಯಪ್ನಗರ

ವಾಹನ ಬಿಟ್ಟು ಪರಾರಿಯಾದ ದನಗಳ್ಳರು

ಗೋವುಗಳನ್ನು ಅಕ್ರಮವಾಗಿ ವಾಹನದಲ್ಲಿ ಸಾಗಿಸುತ್ತಿದ್ದವರು ಪೊಲೀಸರನ್ನು ಕಂಡು ವಾಹನ ಬಿಟ್ಟು ಪರಾರಿಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

Vijaya Karnataka 21 Jul 2018, 9:40 pm
ಬಣಕಲ್‌: ಗೋವುಗಳನ್ನು ಅಕ್ರಮವಾಗಿ ವಾಹನದಲ್ಲಿ ಸಾಗಿಸುತ್ತಿದ್ದವರು ಪೊಲೀಸರನ್ನು ಕಂಡು ವಾಹನ ಬಿಟ್ಟು ಪರಾರಿಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
Vijaya Karnataka Web burglars escaped from the vehicle
ವಾಹನ ಬಿಟ್ಟು ಪರಾರಿಯಾದ ದನಗಳ್ಳರು


ಬಣಕಲ್‌ ಕಡೆಯಿಂದ ಮೂಡಿಗೆರೆ ಕಡೆಗೆ ಮಿನಿ ಟ್ರಾಕ್‌ ವಾಹನದಲ್ಲಿ ದನಗಳ್ಳರು ಜಾನುವಾರುಗಳನ್ನು ತುಂಬಿಕೊಂಡು ಬಂದಿದ್ದು, ಆ ವೇಳೆಗೆ ಗಸ್ತು ತಿರುಗುತ್ತಿದ್ದ ಪೊಲೀಸರ ವಾಹನ ಬಣಕಲ್‌ ಕಡೆಗೆ ಬಂದಿದೆ. ಪೊಲೀಸ್‌ ಜೀಪ್‌ ಕಂಡ ದನಗಳ್ಳರು ತಮ್ಮ ವಾಹನವನ್ನು ಬಿಟ್ಟು ಓಟಕ್ಕಿತ್ತಿದ್ದಾರೆ. ಪೊಲೀಸರು ಪರಾರಿಯಾಗುತ್ತಿದ್ದ ಇಬ್ಬರು ದನ್ನಗಳರ ಬೆನ್ನತ್ತಿದ್ದು, ಆರೋಪಿಗಳು ಕಾಫಿ ತೋಟದೊಳಗೆ ನುಸುಳಿ ಪರಾರಿಯಾಗಿದ್ದಾರೆ. ದನಗಳ್ಳತನಕ್ಕೆ ಬಳಸಿದ ವಾಹನ ಮತ್ತು ಹಿಂಸಾತ್ಮಾಕವಾಗಿ ಕಟ್ಟಿಹಾಕಿದ್ದ ದನಗಳನ್ನು ವಶಪಡಿಸಿಕೊಂಡಿದ್ದಾರೆ. ಬಣಕಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ