ಆ್ಯಪ್ನಗರ

ಜನರು ಬಯಸಿದ್ದು ಸಮ್ಮಿಶ್ರ ಸರಕಾರವನ್ನಲ್ಲ: ಸಿಟಿ ರವಿ

ಹೊಟ್ಟೆಯೊಳಗೆ ವಿಷ ಇಟ್ಟುಕೊಂಡು ಅಧಿಕಾರ ನಡೆಸಿದ ಹೀಗೆ ಆಗುತ್ತೆ. ಸರಕಾರ ಉರುಳಿಸುವ ಕೆಲಸ ನಮ್ಮದಲ್ಲ. ನಾವು ಕೂಡ ಸರಕಾರ ಬೀಳಲಿ ಎಂದೇ ಅಂದುಕೊಂಡಿದ್ದೇವೆ. ಆದರೆ, ಅವರ ಶಾಸಕರು ಪಕ್ಷ ಬಿಟ್ಟು ಹೋದರೆ ನಮ್ಮನು ಏಕೆ ದೂರುವುದು ಎಂದು ಪ್ರಶ್ನಿಸಿದರು.

Vijaya Karnataka Web 15 Jan 2019, 3:20 pm
ಚಿಕ್ಕಮಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ರಾಜ್ಯದ ಜನತೆ ಬಯಸಿದ್ದಲ್ಲ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಹೇಳಿದರು.
Vijaya Karnataka Web ct


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ನೀಚ ಮುಖ್ಯಮಂತ್ರಿ ನಾನೆಂದು ನೋಡಿರಲಿಲ್ಲ ಎಂದು ದೇವೇಗೌಡರೇ ಅಂದು ಸಿದ್ದರಾಮಯ್ಯ ಕುರಿತು ಹೇಳಿದ್ದರು. ಆದರೆ, ನಾನು ಸಿದ್ದರಾಮಯ್ಯ ಬಗ್ಗೆ ನೀಚ ಪದ ಬಳಕೆ ಮಾಡಿಲ್ಲ ಎಂದು ಹೇಳಿದರು.

ಹೊಟ್ಟೆಯೊಳಗೆ ವಿಷ ಇಟ್ಟುಕೊಂಡು ಅಧಿಕಾರ ನಡೆಸಿದ ಹೀಗೆ ಆಗುತ್ತೆ. ಸರಕಾರ ಉರುಳಿಸುವ ಕೆಲಸ ನಮ್ಮದಲ್ಲ. ನಾವು ಕೂಡ ಸರಕಾರ ಬೀಳಲಿ ಎಂದೇ ಅಂದುಕೊಂಡಿದ್ದೇವೆ. ಆದರೆ, ಅವರ ಶಾಸಕರು ಪಕ್ಷ ಬಿಟ್ಟು ಹೋದರೆ ನಮ್ಮನು ಏಕೆ ದೂರುವುದು ಎಂದು ಪ್ರಶ್ನಿಸಿದರು.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಬೀಳಬೇಕು ಎನ್ನುವುದು ಜನರ ಆಸೆ. ಅಂತೆಯೇ ಸರಕಾರ ಬೀಳಲಿ ಎಂಬುವುದು ನಮ್ಮ ಬಯಕೆ ಎಂದು ಸಿ.ಟಿ.ರವಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ