ಆ್ಯಪ್ನಗರ

ಮಣ್ಣಿನ ಮಕ್ಕಳೆಂದು ಪೇಟೆಂಟ್ ಪಡೆದವರಿಗೆ ಲಾಭದಾಯಕ ಖಾತೆಗಳೇಕೆ?: ಗೌಡರ ವಿರುದ್ಧ ಸಿ ಟಿ ರವಿ ಆಕ್ರೋಶ

ಹುಟ್ಟುವಾಗಲೇ ಮಣ್ಣಿನ ಮಕ್ಕಳೆಂದು ಪೇಟೆಂಟ್ ಪಡೆದವರು ಲಾಭದಾಯಕ ಖಾತೆಗಳನ್ನೇ ಏಕೆ ಕೇಳುತ್ತಿದ್ದಾರೆ?

Vijaya Karnataka Web 5 Jun 2018, 11:09 am
ಚಿಕ್ಕಮಗಳೂರು: ಹುಟ್ಟುವಾಗಲೇ ಮಣ್ಣಿನ ಮಕ್ಕಳೆಂದು ಪೇಟೆಂಟ್ ಪಡೆದವರು ಲಾಭದಾಯಕ ಖಾತೆಗಳನ್ನೇಕೆ ಕೇಳುತ್ತಿದ್ದಾರೆ?, ಎಂದು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿರುದ್ಧ ಬಿಜೆಪಿ ನಾಯಕ ಸಿ ಟಿ ರವಿ ವಾಗ್ದಾಳಿ ನಡೆಸಿದರು.
Vijaya Karnataka Web C T R


ನಗರದಲ್ಲಿ ಮಾತನಾಡಿದ ಅವರು, ಮಣ್ಣಿನ ಮಕ್ಕಳಿಗೆ ಪಶುಸಂಗೋಪನೆ, ತೋಟಗಾರಿಕೆ ಹಾಗೂ ಸಣ್ಣ ನೀರಾವರಿ ಅಂಥ ಖಾತೆಗಳೇಕೆ ಬೇಡ. ಇವರಿಗೆ ಬೇಕಾಗಿರುವುದು ಇಂಧನ, ಪಿಡಬ್ಲ್ಯೂಡಿ ಹಾಗೂ ಅಬಕಾರಿ ಅಂಥ ಲಾಭದಾಯಕ ಖಾತೆಗಳೇ. ಮಣ್ಣಿಗೂ ಈ ಲಾಭದಾಯಕ ಖಾತೆಗಳಿಗೂ ಏನು ಸಂಬಂಧ ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ಭಾರೀ ಜಟಾಪಟಿಗೆ ಕಾರಣವಾಗಿದ್ದ ಹಣಕಾಸು, ಲೋಕೋಪಯೋಗಿ ಮತ್ತು ಇಂಧನ ಖಾತೆಗಳನ್ನು ತನ್ನ ಸುಪರ್ದಿಯಲ್ಲಿಯೇ ಇರಿಸಿಕೊಳ್ಳಲು ಜೆಡಿಎಸ್ ಯಶಸ್ವಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ