ಆ್ಯಪ್ನಗರ

ಕಾರು ಅಡ್ಡಗಟ್ಟಿ ಹಲ್ಲೆ: ಮಹಿಳೆ, ಮಕ್ಕಳಿಗೆ ಗಾಯ

ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಹಾಂದಿ ಸಮೀಪ ಭಾನುವಾರ ಸಂಜೆ ಚಲಿಸುತ್ತಿದ್ದ ಕಾರನ್ನು ವಿನಾಕಾರಣ ಅಡ್ಡಗಟ್ಟಿದ ನಾಲ್ವರು ಪುಂಡರು ದಾಂಧಲೆ ಮಾಡಿ ಗಾಜು ಒಡೆದಿದ್ದು, ಇಬ್ಬರು ಮಕ್ಕಳು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Vijaya Karnataka 4 Sep 2018, 5:00 am
ಆಲ್ದೂರು: ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಹಾಂದಿ ಸಮೀಪ ಭಾನುವಾರ ಸಂಜೆ ಚಲಿಸುತ್ತಿದ್ದ ಕಾರನ್ನು ವಿನಾಕಾರಣ ಅಡ್ಡಗಟ್ಟಿದ ನಾಲ್ವರು ಪುಂಡರು ದಾಂಧಲೆ ಮಾಡಿ ಗಾಜು ಒಡೆದಿದ್ದು, ಇಬ್ಬರು ಮಕ್ಕಳು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
Vijaya Karnataka Web CKM-3aldur1


ದಾಳಿ ನಡೆಸಿದ ಸ್ಥಳೀಯ ವಾಸಿಗಳಾದ ಮಂಜುನಾಥ್‌, ಶಿವರಾಜ್‌, ಅಮೃತ್‌, ಪಾಲ್‌ರಾಜ್‌ ಎಂಬುವವರ ವಿರುದ್ಧ ದೂರು ದಾಖಲಿಸಿದ ಸ್ಥಳೀಯ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿವರ: ಸಕಲೇಶಪುರ ವಾಸಿ ಐಹೂಬ್‌ ಅವರು ಹಾಂದಿ ಸಮೀಪದ ದೇವಿಗುಡ್ಡದಲ್ಲಿರುವ ತಮ್ಮ ಸಂಬಂಧಿ ಅಬ್ಬಾಸ್‌ ಅವರ ಮನೆಗೆ ಬಂದು ಭಾನುವಾರ ಸಂಜೆ 7.30ರ ವೇಳೆಗೆ ಊರಿಗೆ ಹಿಂದಿರುಗುತ್ತಿದ್ದರು. ಆಗ ಹಾಂದಿ ಸಮೀಪದ ಶಾಲಿಮಾರ್‌ ಹೋಟೆಲ್‌ ಬಳಿ ಆಟೊ ಚಾಲಕರು ಮತ್ತು ಒಂದು ಗುಂಪಿನÜ ಮಧ್ಯೆ ಗಲಾಟೆ ನಡೆಯುತ್ತಿತ್ತು. ಐಹೂಬ್‌ ಅವರ ಕಾರು ಸಮೀಪಿಸುತ್ತಿದ್ದಂತೇ ಏಕಾಏಕಿ ಅಡ್ಡಗಟ್ಟಿದ ಪುಂಡರು ದಾಂಧಲೆ ಮಾಡಿ ದೊಣ್ಣೆಯಿಂದ ಗಾಜು ಒಡೆದು ಪುಡಿಮಾಡಿದ್ದಾರೆ. ಗಾಜು ಒಡೆದ ರಭಸಕ್ಕೆ ಕಾರಿನಲ್ಲಿದ್ದ ಐಹೂಬ್‌ ಅವರ ಪತ್ನಿ ಹಾಗೂ ನಾಲ್ಕು ಮಕ್ಕಳಿಗೆ ಪೆಟ್ಟುಬಿದ್ದಿದೆ. ಗಾಬರಿಯಿಂದ ಮಕ್ಕಳು ಕಾರಿನಿಂದ ಇಳಿದು ರಸ್ತೆ ಬದಿಯ ಮನೆಗೆ ಓಡಿಹೋಗಿದ್ದವು.

ತಕ್ಷಣ ಇತರೆ ವಾಹನಗಳ ಪ್ರಯಾಣಿಕರು, ಸ್ಥಳೀಯರು ಜಮಾಯಿಸುತ್ತಿದ್ದಂತೇ ಪುಂಡರು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮಕ್ಕಳಾದ ಜೋಯಾ, ನಶ್ವಾ ಅವರ ಕೈಕಾಲುಗಳಿಗೆ ಪೆಟ್ಟು ಬಿದ್ದಿದ್ದು, ಉಳಿದವರು ಸಣ್ಣಪುಟ್ಟ ಗಾಯಗಳೊಂದಿಗೆ ಆಲ್ದೂರಿನ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ