ಆ್ಯಪ್ನಗರ

ಕಾರಿನ ಟೈರ್‌ ಸಿಡಿದು ಅಪಘಾತ :ಕಾಲು ಮುರಿತ

ವೇಗದಿಂದ ಬರುತ್ತಿದ್ದ ಕಾರಿನ ಟೈರ್‌ ಸಿಡಿದಿದ್ದರಿಂದ ಮರಕ್ಕೆ ಡಿಕ್ಕಿ ಹೊಡೆದು ಕಾರಲ್ಲಿದ್ದವರು ತೀವ್ರ ಗಾಯಗೊಂಡಿರುವ ಪ್ರಕರಣ ಶುಕ್ರವಾರ ಬೆಳಗ್ಗೆ ನಡೆದಿದೆ.

Vijaya Karnataka 18 May 2019, 5:00 am
ಅಜ್ಜಂಪುರ : ವೇಗದಿಂದ ಬರುತ್ತಿದ್ದ ಕಾರಿನ ಟೈರ್‌ ಸಿಡಿದಿದ್ದರಿಂದ ಮರಕ್ಕೆ ಡಿಕ್ಕಿ ಹೊಡೆದು ಕಾರಲ್ಲಿದ್ದವರು ತೀವ್ರ ಗಾಯಗೊಂಡಿರುವ ಪ್ರಕರಣ ಶುಕ್ರವಾರ ಬೆಳಗ್ಗೆ ನಡೆದಿದೆ.
Vijaya Karnataka Web car tires crash and accident foot fracture
ಕಾರಿನ ಟೈರ್‌ ಸಿಡಿದು ಅಪಘಾತ :ಕಾಲು ಮುರಿತ


ಬೆಂಗಳೂರು ಮೂಲದ ಶಾಂತ ಮತ್ತು ಮಕ್ಕಳು, ಇನ್ನೊಬ್ಬ ವೃದ್ಧರು ಬಗ್ಗವಳ್ಳಿಯ ಐತಿಹಾಸಿಕ ನರಸಿಂಹ ದೇವಾಲಯಕ್ಕೆ ನರಸಿಂಹ ಜಯಂತಿ ಪೂಜೆಗೆ ತೆರಳುತ್ತಿದ್ದರು.

ತಮ್ಮಟದಹಳ್ಳಿ ಗೇಟ್‌ ಮತ್ತು ಕಾಟಿಗನೆರೆ ಮಧ್ಯೆ ಗಂಗಮ್ಮನ ಹಳ್ಳ ಕೆರೆಗೆ ಹೋಗುವ ಮುಖ್ಯ ರಸ್ತೆಯಲ್ಲಿ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ರಭಸಕ್ಕೆ ಎರಡು ಬಲೂನ್‌ ಬಿಚ್ಚಿಕೊಂಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನುಳಿದಂತೆ ಹಲವರಿಗೆ ಎದೆಗೆ ಪೆಟ್ಟು ಬಿದ್ದರೆ, ವೃದ್ಧರೊಬ್ಬರಿಗೆ ಕಾಲು ಮುರಿದಿದೆ. ಇನ್ನೊಬ್ಬರಿಗೆ ಕಾಲು ಮುರಿದಿದೆ. ಅಪಘಾತ ನಡೆದ ತಕ್ಷ ಣ ತುರ್ತು ವಾಹನಕ್ಕೆ ಫೋನ್‌ ಮಾಡಿ ಅರ್ಧ ಗಂಟೆ ಕಳೆದರೂ ಬರಲಿಲ್ಲ. ಭದ್ರಾ ಮೇಲ್ದಂಡೆ ಕಾಮಗಾರಿ ನಿರ್ವಹಿಸುತ್ತಿದ್ದವರು ಎಸ್‌.ಎನ್‌.ಸಿ. ಜೀಪಿನಲ್ಲಿ ಕರೆತರುವ ಮಾನವೀಯತೆ ಮೆರೆದರು. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಾ. ಜಿ. ಪುರುಷೋತ್ತಮ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕಳಿಸಲಾಯಿತು. ಸ್ಥಳಕ್ಕೆ ಪಿ.ಎಸ್‌.ಐ. ಅನಂತಪದ್ಮನಾಭ ಭೇಟಿ ನೀಡಿ ಪರಿಶೀಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ