ಆ್ಯಪ್ನಗರ

ಕಾವೇರಿ ಗ್ರಾಮೀಣ ಬ್ಯಾಂಕ್‌ ಸೌಲಭ್ಯ ಸದ್ಬಳಕೆ ಆಗಲಿ

ಕಾವೇರಿ ಗ್ರಾಮೀಣ ಬ್ಯಾಂಕ್‌ ಕೇಂದ್ರ ಸರಕಾರ, ರಾಜ್ಯ ಸರಕಾರ ಹಾಗೂ ಎಸ್‌ಬಿಐಗಳಿಗೆ ಒಳಪಟ್ಟ ಸರಕಾರಿ ಸೌಮ್ಯದ ಬ್ಯಾಂಕ್‌ ಆಗಿದೆ ಎಂದು ಕಾವೇರಿ ಗ್ರಾಮೀಣ ಬ್ಯಾಂಕ್‌ನ ವ್ಯವಸ್ಥಾಪಕ ವಿ.ಎಚ್‌.ರಾಮಪ್ಪ ಹೇಳಿದರು

Vijaya Karnataka 4 Feb 2019, 5:00 am
ನರಸಿಂಹರಾಜಪುರ : ಕಾವೇರಿ ಗ್ರಾಮೀಣ ಬ್ಯಾಂಕ್‌ ಕೇಂದ್ರ ಸರಕಾರ, ರಾಜ್ಯ ಸರಕಾರ ಹಾಗೂ ಎಸ್‌ಬಿಐಗಳಿಗೆ ಒಳಪಟ್ಟ ಸರಕಾರಿ ಸೌಮ್ಯದ ಬ್ಯಾಂಕ್‌ ಆಗಿದೆ ಎಂದು ಕಾವೇರಿ ಗ್ರಾಮೀಣ ಬ್ಯಾಂಕ್‌ನ ವ್ಯವಸ್ಥಾಪಕ ವಿ.ಎಚ್‌.ರಾಮಪ್ಪ ಹೇಳಿದರು.
Vijaya Karnataka Web CKM-3nrp1


ಪ್ರವಾಸಿ ಮಂದಿರದ ಬಳಿಯ ಸೇಂಟ್‌ ಜಾರ್ಜ್‌ ಚರ್ಚ್‌ನಲ್ಲಿ ಭಾನುವಾರ ಕಾವೇರಿ ಗ್ರಾಮೀಣ ಬ್ಯಾಂಕಿನ ಸೌಲಭ್ಯಗಳ ಬಗ್ಗೆ ಕುರಿತು ಅವರು ಮಾತನಾಡಿದರು. ಪಟ್ಟಣದಲ್ಲಿ ನಮ್ಮ ಶಾಖೆ 9 ವರ್ಷದ ಹಿಂದೆಯೇ ಆರಂಭವಾಗಿದೆ. ನಾವು ಮುಂಗಡವಾಗಿ 14.50ಲಕ್ಷ ರೂ. ನೀಡಿದ್ದೇವೆ. ಆದರೆ ಉಳಿತಾಯ ಕಡಿಮೆ ಇದೆ. ಗ್ರಾಹಕರು ಹೆಚ್ಚಾಗಿ ನಮ್ಮ ಬ್ಯಾಂಕಿನಲ್ಲಿ ಉಳಿತಾಯ ಮಾಡಬೇಕು. 151ದಿನಗಳ ಕಾಲ ಠೇವಣಿಗೆ ಹಿರಿಯ ನಾಗರಿಕರಿಗೆ ಶೇ.8 ಮತ್ತು ಸಮಾನ್ಯ ನಾಗರಿಕರಿಗೆ ಶೇ.75 ಬಡ್ಡಿದರ ನೀಡುತ್ತಿದ್ದೇವೆ. ಇದರ ಜತೆಗೆ ಗೃಹ ಸಾಲ, ಕಾರು ಸಾಲ, ಚಿನ್ನಾಭರಣದ ಮೇಲೆ ಸಾಲ ಸೌಲಭ್ಯ ನೀಡುತ್ತೇವೆ. ಇದರ ಉಪಯೋಗವನ್ನು ಪ್ರತಿಯೊಬ್ಬ ಗ್ರಾಹಕರು ಪಡೆದುಕೊಳ್ಳಬೇಕು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ