ಆ್ಯಪ್ನಗರ

ವಿವಿಧೆಡೆ ಸಂಭ್ರಮದ ಶಿವರಾತ್ರಿ ಆಚರಣೆ

ತಾಲೂಕಿನ ವಿವಿಧೆಡೆ ಸೋಮವಾರ ಶಿವರಾತ್ರಿ ಹಬ್ಬವನ್ನು ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು.

Vijaya Karnataka 5 Mar 2019, 5:00 am
ಕೊಪ್ಪ : ತಾಲೂಕಿನ ವಿವಿಧೆಡೆ ಸೋಮವಾರ ಶಿವರಾತ್ರಿ ಹಬ್ಬವನ್ನು ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು.
Vijaya Karnataka Web CKM-4kph3


ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ಮಹಾವಿದ್ಯಾಲಯ ಕೇಂದ್ರದಲ್ಲಿ ಪ.ಪಂ. ಅಧ್ಯಕ್ಷೆ ಅನಸೂಯಾ ಕೆ.ಮೂರ್ತಿ ಶಿವ ಧ್ವಜಾರೋಹಣ ನೆರವೇರಿಸಿದರು.

ಕೇಂದ್ರದ ಮುಖ್ಯಸ್ಥರಾದ ಪುಷ್ಪಕ್ಕ ಮಾತನಾಡಿ, ಪರಮಾತ್ಮನ ಸ್ಮರಣೆ ಮಾಡುವವರು ಅಳಿಯದೆ ಉಳಿದು ಹೊಸ ಸೃಷ್ಟಿಗೆ ಕಾರಣರಾಗುತ್ತಾರೆ ಎಂದರು.

ಪ.ಪಂ.ಅಧ್ಯಕ್ಷೆ ಅನಸೂಯಾ ಕೆ.ಮೂರ್ತಿ ಮಾತನಾಡಿ, ಬ್ರಹ್ಮಕುಮಾರಿಯರು ತಾವು ಧರಿಸುವ ಬಿಳಿವಸ್ತ್ರದಷ್ಟೆ ಶುಭ್ರರಾಗಿದ್ದಾರೆ. ಕೇಂದ್ರಕ್ಕೆ ಬಂದಲ್ಲಿ ಸಂಸಾರ ತ್ಯಜಿಸಲಾಗುವುದೆಂಬ ತಪ್ಪು ಕಲ್ಪನೆಯಿದೆ. ಅದು ನಿಜವಲ್ಲ. ಇಲ್ಲಿಗೆ ಎಲ್ಲರೂ ಆಗಮಿಸಿ ರಾಜಯೋಗ ಅಭ್ಯಾಸ ಮಾಡಿದಲ್ಲಿ ಅವರಿಗೆ ಒಳಿತಾಗುತ್ತದೆ. ಪರಮಾತ್ಮನ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದರು.

ಪಟ್ಟಣದ ಶ್ರೀಕಾಶಿ ವಿಶ್ವನಾಥ ದೇವಾಲಯ, ಚಿಟ್ಟೇಮಕ್ಕಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಮತ್ತಿತರ ಕಡೆ ರುದ್ರಾಭಿಷೇಕ ಮತ್ತಿತರ ಪೂಜೆ ನಡೆಯಿತು.

ಹೊಳೆಹದ್ದು: ತಾಲೂಕಿನ ಭಂಡಿಗಡಿ ಸಮೀಪದ ಹೊಳೆಹದ್ದು ತುಂಗಾ ತೀರದ ಶ್ರೀನಂಜುಂಡೇಶ್ವರ ಉದ್ಭವ ಲಿಂಗಕ್ಕೆ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು. ವರ್ಷದ 6 ತಿಂಗಳು ತುಂಗಾ ಪ್ರವಾಹದಲ್ಲಿ ಮುಳುಗಿದ್ದು, ಪ್ರಸ್ತುತ ಮೇಲೆ ಕಾಣುತ್ತಿರುವ ಲಿಂಗವನ್ನು ಸುತ್ತಲಿನ ಕಾರಂಗಿ, ಹರಿಹರಪುರ, ಕವಡೆಕಟ್ಟೆ, ಭಂಡಿಗಡಿ, ಹಾಲ್ಮುತ್ತೂರು, ಕೊಪ್ಪ ಮತ್ತಿತರ ಕಡೆಯ ನೂರಾರು ಭಕ್ತರು ಪೂಜಿಸಿದರು.

ಹರಿಹರಪುರ: ಸ್ಥಳೀಯ ಶ್ರೀದಕ್ಷ ಹರ ಸೋಮೇಶ್ವರ ದೇವಸ್ಥಾನದಲ್ಲಿ ಶ್ರೀಮಠದ ವತಿಯಿಂದ ಮೃತ್ತಿಕಾ ಲಿಂಗ ನಿರ್ಮಿಸಿದ್ದು, ಸಾರ್ವಜನಿಕರು ಅದನ್ನು ಪೂಜಿಸಿದರು. ರುದ್ರಾಭಿಷೇಕ ನೆರವೇರಿತು. ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ, ಮೃತ್ತಿಕಾ ಲಿಂಗವನ್ನು ಪೂಜಿಸಿ, ಭಕ್ತರನ್ನು ಹರಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ