ಚಿಕ್ಕಮಗಳೂರು: ಕಾಪೋರ್ರೇಟ್ ಶಕ್ತಿ ಪರ ನಿಲುವು ತಳೆದು 2ನೇ ಅವಧಿಯಲ್ಲಿ ಅಧಿಕಾರಕ್ಕೇರಿದ ಕೇಂದ್ರದ ಮೋದಿ ಸರಕಾರ ತುಂಬಾ ಅಪಾಯಕಾರಿಯಾಗಿದೆ ಎಂದು ಟಿಯುಸಿಐ ರಾಜ್ಯ ಉಪಾಧ್ಯಕ್ಷ ಚಿನ್ನಪ್ಪ ಕೊಟ್ರಿಕಿ ಆರೋಪಿಸಿದರು.
ಟಿಯುಸಿಐ ಜಿಲ್ಲಾ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ವಿಸ್ತೃತ ಸಭೆಯಲ್ಲಿ ಅವರು ಮಾತನಾಡಿ, ಈ ಹಿಂದಿಗಿಂತಲೂ ಜನತೆಯ ಮೇಲೆ ದುರ್ದಾಳಿ ನಡೆಸಲು ಮೋದಿ ಸರಕಾರ ತುದಿಗಾಲ ಮೇಲೆ ನಿಂತಿದೆ. ಹತ್ತು ಹಲವು ಕಾಯಿದೆಗಳಿಗೆ ತಿದ್ದುಪಡಿ ತರುವ ಮೂಲಕ ಪೂರ್ಣ ಪ್ರಮಾಣದ ಬಹುಮತವನ್ನು ದುರುಪಯೋಗಪಡಿಸಿಕೊಳ್ಳಲು ಹವಣಿಸುತ್ತಿದೆ ಎಂದರು.
ಸಿಪಿಐ(ಎಂಎಲ್)ರೆಡ್ಸ್ಟಾರ್ ಜಿಲ್ಲಾ ಕಾರ್ಯದರ್ಶಿ ಸಿ.ಜೆ.ಜಗನ್ನಾಥ್ ಮಾತನಾಡಿ, ಕಾರ್ಮಿಕ ವರ್ಗದ ಹೋರಾಟಗಳನ್ನು ಬಲಿಷ್ಟವಾಗಿ ಮುನ್ನಡೆಸಲು ಕಾರ್ಮಿಕ ಸಂಘ ಸನ್ನದ್ಧಗೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ 15 ಜನರ ನೂತನ ಜಿಲ್ಲಾ ಸಮಿತಿ ರಚಿಸಲಾಯಿತು. ಜಿಲ್ಲಾಧ್ಯಕ್ಷ ರಾಗಿ ಶೇಖರ್, ಉಪಾಧ್ಯಕ್ಷ ಗೋಪಾಲ, ಜಿಲ್ಲಾ ಕಾರ್ಯದರ್ಶಿ ಎಸ್.ವಿಜಯ್, ಸಂಘಟನಾ ಕಾರ್ಯದರ್ಶಿ ಕೆ.ಎನ್.ರಮೇಶ ಮತ್ತು ಜಿಲ್ಲಾ ಖಜಾಂಚಿಯಾಗಿ ಕೆ.ಕೆ.ಕೃಷ್ಣಪ್ಪ ಬೆಳಗೊಳ ಅವರು ಆಯ್ಕೆಗೊಂಡರು.
ಕೊಪ್ಪ, ಎನ್.ಆರ್.ಪುರ, ಕಳಸ, ಮೂಡಿಗೆರೆ, ಚಿಕ್ಕಮಗಳೂರು, ಕಡೂರು, ತರೀಕೆರೆ, ಅಜ್ಜಂಪುರ ಹಾಗೂ ಶೃಂಗೇರಿ ತಾಲೂಕಿನಿಂದ ವಿವಿಧ ವಿಭಾಗಗಳ ಕಾರ್ಮಿಕ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಟಿಯುಸಿಐ ಜಿಲ್ಲಾ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ವಿಸ್ತೃತ ಸಭೆಯಲ್ಲಿ ಅವರು ಮಾತನಾಡಿ, ಈ ಹಿಂದಿಗಿಂತಲೂ ಜನತೆಯ ಮೇಲೆ ದುರ್ದಾಳಿ ನಡೆಸಲು ಮೋದಿ ಸರಕಾರ ತುದಿಗಾಲ ಮೇಲೆ ನಿಂತಿದೆ. ಹತ್ತು ಹಲವು ಕಾಯಿದೆಗಳಿಗೆ ತಿದ್ದುಪಡಿ ತರುವ ಮೂಲಕ ಪೂರ್ಣ ಪ್ರಮಾಣದ ಬಹುಮತವನ್ನು ದುರುಪಯೋಗಪಡಿಸಿಕೊಳ್ಳಲು ಹವಣಿಸುತ್ತಿದೆ ಎಂದರು.
ಸಿಪಿಐ(ಎಂಎಲ್)ರೆಡ್ಸ್ಟಾರ್ ಜಿಲ್ಲಾ ಕಾರ್ಯದರ್ಶಿ ಸಿ.ಜೆ.ಜಗನ್ನಾಥ್ ಮಾತನಾಡಿ, ಕಾರ್ಮಿಕ ವರ್ಗದ ಹೋರಾಟಗಳನ್ನು ಬಲಿಷ್ಟವಾಗಿ ಮುನ್ನಡೆಸಲು ಕಾರ್ಮಿಕ ಸಂಘ ಸನ್ನದ್ಧಗೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ 15 ಜನರ ನೂತನ ಜಿಲ್ಲಾ ಸಮಿತಿ ರಚಿಸಲಾಯಿತು. ಜಿಲ್ಲಾಧ್ಯಕ್ಷ ರಾಗಿ ಶೇಖರ್, ಉಪಾಧ್ಯಕ್ಷ ಗೋಪಾಲ, ಜಿಲ್ಲಾ ಕಾರ್ಯದರ್ಶಿ ಎಸ್.ವಿಜಯ್, ಸಂಘಟನಾ ಕಾರ್ಯದರ್ಶಿ ಕೆ.ಎನ್.ರಮೇಶ ಮತ್ತು ಜಿಲ್ಲಾ ಖಜಾಂಚಿಯಾಗಿ ಕೆ.ಕೆ.ಕೃಷ್ಣಪ್ಪ ಬೆಳಗೊಳ ಅವರು ಆಯ್ಕೆಗೊಂಡರು.
ಕೊಪ್ಪ, ಎನ್.ಆರ್.ಪುರ, ಕಳಸ, ಮೂಡಿಗೆರೆ, ಚಿಕ್ಕಮಗಳೂರು, ಕಡೂರು, ತರೀಕೆರೆ, ಅಜ್ಜಂಪುರ ಹಾಗೂ ಶೃಂಗೇರಿ ತಾಲೂಕಿನಿಂದ ವಿವಿಧ ವಿಭಾಗಗಳ ಕಾರ್ಮಿಕ ಪ್ರತಿನಿಧಿಗಳು ಪಾಲ್ಗೊಂಡಿದ್ದರು.