ಆ್ಯಪ್ನಗರ

ಸಿಜಿಕೆ ರಂಗ ಪ್ರಶಸ್ತಿ, ನಾಟಕ ಪ್ರದರ್ಶನ

ವಿಶ್ವಮಾನವ ಎಜುಕೇಷನ್‌ ಸೊಸೈಟಿ, ಅಭಿನಯ ದರ್ಪಣ ಯುವ ವೇದಿಕೆ ಸಹಯೋಗದಲ್ಲಿ ಜುಲೈ 1ರಂದು ಸಂಜೆ 6ಕ್ಕೆ ನಗರದ ಕುವೆಂಪು ಕಲಾ ಮಂದಿರದಲ್ಲಿ ಸಿಜಿಕೆ ರಂಗ ಪುರಸ್ಕಾರ ಪ್ರದಾನ ಹಾಗೂ ದೂತ ಘಟೋತ್ಗಜ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ವಿಇಎಸ್‌ ಕಾರ‍್ಯದರ್ಶಿ ಸತೀಶ ತಿಳಿಸಿದ್ದಾರೆ.

Vijaya Karnataka 30 Jun 2018, 5:00 am
ಚಿಕ್ಕಮಗಳೂರು : ವಿಶ್ವಮಾನವ ಎಜುಕೇಷನ್‌ ಸೊಸೈಟಿ, ಅಭಿನಯ ದರ್ಪಣ ಯುವ ವೇದಿಕೆ ಸಹಯೋಗದಲ್ಲಿ ಜುಲೈ 1ರಂದು ಸಂಜೆ 6ಕ್ಕೆ ನಗರದ ಕುವೆಂಪು ಕಲಾ ಮಂದಿರದಲ್ಲಿ ಸಿಜಿಕೆ ರಂಗ ಪುರಸ್ಕಾರ ಪ್ರದಾನ ಹಾಗೂ ದೂತ ಘಟೋತ್ಗಜ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ವಿಇಎಸ್‌ ಕಾರ‍್ಯದರ್ಶಿ ಸತೀಶ ತಿಳಿಸಿದ್ದಾರೆ.
Vijaya Karnataka Web cgk role award drama performance
ಸಿಜಿಕೆ ರಂಗ ಪ್ರಶಸ್ತಿ, ನಾಟಕ ಪ್ರದರ್ಶನ


ರಂಗ ಚಟುವಟಿಕೆ, ಸಿನಿಮಾ, ಧಾರಾವಾಹಿ, ಯಕ್ಷಗಾನ, ಬೀದಿನಾಟಕ ಸೇರಿದಂತೆ ಕಲಾ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ರಂಗಕರ್ಮಿ ರಮೇಶ್‌ ಬೇಗಾರ್‌ ಅವರನ್ನು ಸಿಜಿಕೆ ರಂಗ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಕರ್ನಾಟಕ ಬೀದಿ ನಾಟಕ ಅಕಾಡೆಮಿ ಸಿಜಿಕೆ ಬೀದಿರಂಗ ದಿನದ ಅಂಗವಾಗಿ ಸಿಜಿಕೆ ರಂಗ ಪುರಸ್ಕಾರವನ್ನು ಪ್ರದಾನ ಮಾಡುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾಸ ಕವಿ ರಚನೆಯ ದೂತ ಘಟೋತ್ಗಜ ನಾಟಕವನ್ನು ವಿನೀತ್‌ಕುಮಾರ್‌ ನೀನಾಸಂ ನಿರ್ದೇಶನದಲ್ಲಿ ಅಭಿನಯ ದರ್ಪಣ ಯುವ ವೇದಿಕೆ ಕಲಾವಿದರು ಪ್ರದರ್ಶಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ನಡೆಯುವ ಈ ಕಾರ‍್ಯಕ್ರಮಕ್ಕೆ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ