ಚಿಕ್ಕಮಗಳೂರು : ವಿಶ್ವಮಾನವ ಎಜುಕೇಷನ್ ಸೊಸೈಟಿ, ಅಭಿನಯ ದರ್ಪಣ ಯುವ ವೇದಿಕೆ ಸಹಯೋಗದಲ್ಲಿ ಜುಲೈ 1ರಂದು ಸಂಜೆ 6ಕ್ಕೆ ನಗರದ ಕುವೆಂಪು ಕಲಾ ಮಂದಿರದಲ್ಲಿ ಸಿಜಿಕೆ ರಂಗ ಪುರಸ್ಕಾರ ಪ್ರದಾನ ಹಾಗೂ ದೂತ ಘಟೋತ್ಗಜ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ವಿಇಎಸ್ ಕಾರ್ಯದರ್ಶಿ ಸತೀಶ ತಿಳಿಸಿದ್ದಾರೆ.
ರಂಗ ಚಟುವಟಿಕೆ, ಸಿನಿಮಾ, ಧಾರಾವಾಹಿ, ಯಕ್ಷಗಾನ, ಬೀದಿನಾಟಕ ಸೇರಿದಂತೆ ಕಲಾ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ರಂಗಕರ್ಮಿ ರಮೇಶ್ ಬೇಗಾರ್ ಅವರನ್ನು ಸಿಜಿಕೆ ರಂಗ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಕರ್ನಾಟಕ ಬೀದಿ ನಾಟಕ ಅಕಾಡೆಮಿ ಸಿಜಿಕೆ ಬೀದಿರಂಗ ದಿನದ ಅಂಗವಾಗಿ ಸಿಜಿಕೆ ರಂಗ ಪುರಸ್ಕಾರವನ್ನು ಪ್ರದಾನ ಮಾಡುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾಸ ಕವಿ ರಚನೆಯ ದೂತ ಘಟೋತ್ಗಜ ನಾಟಕವನ್ನು ವಿನೀತ್ಕುಮಾರ್ ನೀನಾಸಂ ನಿರ್ದೇಶನದಲ್ಲಿ ಅಭಿನಯ ದರ್ಪಣ ಯುವ ವೇದಿಕೆ ಕಲಾವಿದರು ಪ್ರದರ್ಶಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ನಡೆಯುವ ಈ ಕಾರ್ಯಕ್ರಮಕ್ಕೆ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದ್ದಾರೆ.
ರಂಗ ಚಟುವಟಿಕೆ, ಸಿನಿಮಾ, ಧಾರಾವಾಹಿ, ಯಕ್ಷಗಾನ, ಬೀದಿನಾಟಕ ಸೇರಿದಂತೆ ಕಲಾ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ರಂಗಕರ್ಮಿ ರಮೇಶ್ ಬೇಗಾರ್ ಅವರನ್ನು ಸಿಜಿಕೆ ರಂಗ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಕರ್ನಾಟಕ ಬೀದಿ ನಾಟಕ ಅಕಾಡೆಮಿ ಸಿಜಿಕೆ ಬೀದಿರಂಗ ದಿನದ ಅಂಗವಾಗಿ ಸಿಜಿಕೆ ರಂಗ ಪುರಸ್ಕಾರವನ್ನು ಪ್ರದಾನ ಮಾಡುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾಸ ಕವಿ ರಚನೆಯ ದೂತ ಘಟೋತ್ಗಜ ನಾಟಕವನ್ನು ವಿನೀತ್ಕುಮಾರ್ ನೀನಾಸಂ ನಿರ್ದೇಶನದಲ್ಲಿ ಅಭಿನಯ ದರ್ಪಣ ಯುವ ವೇದಿಕೆ ಕಲಾವಿದರು ಪ್ರದರ್ಶಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ನಡೆಯುವ ಈ ಕಾರ್ಯಕ್ರಮಕ್ಕೆ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದ್ದಾರೆ.