ಆ್ಯಪ್ನಗರ

ಚಾರ್ಮಾಡಿ ಘಾಟ್‌ಗೆ ದನಗಳ ತಳ್ಳಿ ವಿಕೃತಿ !

ಚಾರ್ಮಾಡಿ ಘಾಟ್‌ನ ಆಲೇಕಾನ್‌ ಜಲಪಾತದ ಸಮೀಪ ದನದ 2 ಕಳೇಬರ ಪತ್ತೆಯಾಗಿದ್ದು, ದನ್ನಗಳ್ಳರು ಎಸೆದು ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

Vijaya Karnataka 7 Feb 2019, 5:00 am
ಕೊಟ್ಟಿಗೆಹಾರ : ಚಾರ್ಮಾಡಿ ಘಾಟ್‌ನ ಆಲೇಕಾನ್‌ ಜಲಪಾತದ ಸಮೀಪ ದನದ 2 ಕಳೇಬರ ಪತ್ತೆಯಾಗಿದ್ದು, ದನ್ನಗಳ್ಳರು ಎಸೆದು ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
Vijaya Karnataka Web CKM-06ktg2


ಆಲೇಕಾನ್‌ ಜಲಪಾತದ ಸಮೀಪದ ನದಿಯಲ್ಲಿ ದನದ ಕಳೇಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮತ್ತೊಂದು ದನದ ಕಳೇಬರ ರಸ್ತೆ ಬದಿಯಲ್ಲಿ ಪತ್ತೆಯಾಗಿದೆ. ಈ ಹಿಂದೆಯೂ ಈ ಸ್ಥಳದಲ್ಲಿ ದನಗಳ್ಳರು ಗಾಯಗೊಂಡ ದನಗಳನ್ನು ರಸ್ತೆ ಬದಿಯಲ್ಲಿ ಬಿಟ್ಟು ಹೋಗಿದ್ದರು. ದನಗಳನ್ನು ಹಿಂಸಾತ್ಮಕವಾಗಿ ವಾಹನದಲ್ಲಿ ತುಂಬಿಕೊಂಡು ಚಾರ್ಮಾಡಿ ಘಾಟ್‌ನ ತಿರುವು ಮುರುವಾದ ರಸ್ತೆಯಲ್ಲಿ ವೇಗವಾಗಿ ಸಾಗುವಾಗ ಕೆಲ ದನಗಳು ಮೃತಪಟ್ಟಾಗ ಇಲ್ಲಿ ಎಸೆದು ಹೋಗಿರುವ ಸಾಧ್ಯತೆ ಇದೆ.

ಕೆಲದಿನಗಳ ಹಿಂದೆ ಬಾಳೂರಿನಲ್ಲಿ ದನ ಕಳ್ಳಸಾಗಣೆ ಮಾಡುತ್ತಿದ್ದ ವಾಹನವನ್ನು ಪೊಲೀಸರು ತಡೆಯಲು ಹೋದಾಗ ಪೊಲೀಸರ ಮೇಲೆ ವಾಹನ ಹತ್ತಿಸಲು ಪ್ರಯತ್ನಿಸಿದ ದನಗಳ್ಳರು ಪರಾರಿಯಾಗಿದ್ದರು.ಬಾಳೆಹೊನ್ನೂರಿನಲ್ಲಿ ಮಂಗಳವಾರ ಗೋಗಳ್ಳರನ್ನು ಹಿಡಿಯಲು ಹೋದ ಪೊಲೀಸ್‌ ಸಿಬ್ಬಂದಿಯ ಮೇಲೆ ಯತ್ನಿಸುವ ಘಟನೆ ನಡೆದಿದೆ. ದನಗಳ್ಳರ ದೊಡ್ಡ ಜಾಲವೇ ಇದ್ದು ಇಲಾಖೆ ದನಗಳ್ಳತನಕ್ಕೆ ಕಡಿವಾಣ ಹಾಕಲು ಮುಂದಾಗಬೇಕಿದೆ.

ಈ ಭಾಗದಲ್ಲಿ ದನಗಳ್ಳರ ಹಾವಳಿ ಮಿತಿಮೀರಿದ್ದು ಪೊಲೀಸ್‌ ಇಲಾಖೆ ಗೋಗಳ್ಳರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ರಾತ್ರೊರಾತ್ರಿ ಮಲೆನಾಡಿನ ಮನೆಗಳಲ್ಲಿ ಇರುವ ದನಗಳನ್ನು ಕದ್ದು ಸಾಗಿಸುವ ಘಟನೆಗಳು ಹೆಚ್ಚುತ್ತಿದೆ. ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು.ಇಲ್ಲದಿದ್ದರೆ ಹಿಂದೂ ಪರ ಸಂಘಟನೆಗಳು ಬೃಹತ್‌ ಹೋರಾಟ ನಡೆಸಬೇಕಾಗುತ್ತದೆ ಎಂದು ಭಜರಂಗದಳ ತಾಲೂಕು ಸಂಚಾಲಕ ಅವಿನಾಶ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ