ಆ್ಯಪ್ನಗರ

ಚಾತುರ್ಮಾಸ್ಯ ವ್ರತ ಸಮಾಪನ

ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಗುರುಪರಂಪರೆಯಂತೆ ಉಭಯ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಚಾತುರ್ಮಾಸ್ಯ ವ್ರತ ಶುಕ್ರವಾರ ಸಮಾಪನಗೊಳಿಸಿ,ಸೀಮೋಲಂಘನ ಮಾಡಿದರು.

Vijaya Karnataka 14 Sep 2019, 5:00 am
ಶೃಂಗೇರಿ : ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಗುರುಪರಂಪರೆಯಂತೆ ಉಭಯ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಚಾತುರ್ಮಾಸ್ಯ ವ್ರತ ಶುಕ್ರವಾರ ಸಮಾಪನಗೊಳಿಸಿ,ಸೀಮೋಲಂಘನ ಮಾಡಿದರು.
Vijaya Karnataka Web 13SRI2_35


ಶ್ರೀ ಮಠದ ನರಸಿಂಹವನದಲ್ಲಿರುವ ಗುರುಭವನದಲ್ಲಿಉಭಯ ಜಗದ್ಗುರುಗಳು ಚಾತುರ್ಮಾಸ್ಯ ವ್ರತವನ್ನು ಶ್ರಾವಣ ಮಾಸದ ವ್ಯಾಸ ಹುಣ್ಣಿಮೆಯಂದು ಆರಂಭಿಸಿದ್ದರು.ವೇದ ವ್ಯಾಸರಿಗೆ ವಿಶೇಷ ಪೂಜೆ ಸಲ್ಲಿಸಿ ವ್ರತ ಆರಂಭಿಸಿದ್ದರು.ಶುಕ್ರವಾರ ಗುರುಭವನದಲ್ಲಿಉಮಾಮಹೇಶ್ವರ ವ್ರತ ನೆರವೇರಿಸಿ,ಚಾತುರ್ಮಾಸ್ಯ ವ್ರತ ಮುಕ್ತಾಯಗೊಳಿಸಿದರು.

ವ್ರತದ ನಂತರ ಸಂಪ್ರದಾಯದಂತೆ ಜಗದ್ಗುರುಗಳು ಶ್ರೀ ಮಠಕ್ಕೆ ಆಗಮಿಸಿ,ಶ್ರೀ ಶಾರದಾಂಬೆ, ಶ್ರೀ ಶಕ್ತಿಗಣಪತಿ ಹಾಗೂ ಹೊರ ಪ್ರಾಂಗಣದ ಶ್ರೀ ವಿದ್ಯಾಶಂಕರ,ಶ್ರೀ ಸುಬ್ರಮಣ್ಯ,ತೋರಣ ಗಣಪತಿ,ಶಂಕರಚಾರ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಧ್ಯಾಹ್ನ ಬೆಟ್ಟದ ಮಲಹಾನಿಕರೇಶ್ವರ ಸ್ವಾಮಿ ಸನ್ನಿಧಿಗೆ ಕಾಲ್ನಡಿಗೆಯಲ್ಲಿತೆರಳಿ ಶ್ರೀ ಭವಾನಿ ಅಮ್ಮನವರು,ಸ್ಥಂಭ ಗಣಪತಿ ಹಾಗೂ ಶ್ರೀ ಮಲಹಾನಿಕರೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು. ಶ್ರೀ ಮಠದ ಅಧಿಕಾರಿಗಳಾದ ಶಿವಶಂಕರಭಟ್‌,ರಾಮಕೃಷ್ಣಯ್ಯ,ಗೋಪಾಲಕೃಷ್ಣ, ಶ್ರೀಪಾದರಾವ್‌ ಮತ್ತಿತರರು ಹಾಜರಿದ್ದರು.

ಚಾತುರ್ಮಾಸ್ಯ ವ್ರತದಲ್ಲಿಜಗದ್ಗುರುಗಳು ಎರಡು ತಿಂಗಳಿಂದ ಗುರು ನಿವಾಸದಲ್ಲಿವಾಸ್ತವ್ಯ ಹೂಡಿದ್ದರು. ಚಾತುರ್ಮಾಸ್ಯ ವ್ರತದಲ್ಲಿಜಗದ್ಗುರುಗಳ ದರ್ಶನ ಪಡೆಯುವುದು ಶ್ರೇಯಸ್ಕರ ಎಂಬ ನಂಬಿಕೆ ಹಿನ್ನಲೆಯಲ್ಲಿದೇಶದ ವಿವಿಧ ಭಾಗದ ಸಾವಿರಾರು ಭಕ್ತರು ಪ್ರತಿ ದಿನವೂ ಗುರು ನಿವಾಸಕ್ಕೆ ಭೇಟಿ ನೀಡಿ, ಫಲ, ಪುಷ್ಪ,ಕಾಣಿಕೆ ಸಲ್ಲಿಸಿ ಜಗದ್ಗುರುಗಳ ಆಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ,ಸಂಸದೆ ಶೋಭಾಕರಂದ್ಲಾಜೆ,ಸಚಿವ ಸಿ.ಟಿ.ರವಿ,ಶಾಸಕ ಟಿ.ಡಿ.ರಾಜೇಗೌಡ ಸಹಿತ ಅನೇಕ ಸಂಘ ಸಂಸ್ಥೆಯ ಮುಖಂಡರು ಜಗದ್ಗುರುಗಳ ಆಶೀರ್ವಾದ ಪಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ